ಅಧಿಕಾರಿಗಳ ಜೊತೆ ತುಷಾರ್ ಗಿರಿನಾಥ್ ಸಭೆ 
ರಾಜ್ಯ

ಪಾಲಿಕೆ ಸಿಬ್ಬಂದಿಗಳಿಗೆ ಮುನೀಶ್ ಮೌದ್ಗಿಲ್ ಕಿರುಕುಳ ಆರೋಪ: ಅಧಿಕಾರಿಗಳೊಂದಿಗೆ ತುಷಾರ್ ಗಿರಿನಾಥ್ ಸಭೆ, ವಿವಾದ ಬಗೆಹರಿಸಲು ಯತ್ನ

ತುಷಾರ್ ಗಿರಿನಾಥ್ ಅವರು, ಇ-ಖಾತಾಯಲ್ಲಿ ಉಂಟಾಗುತ್ತಿರುವ ಸಾಫ್ಟ್‌ವೇರ್ ದೋಷ ಮತ್ತು ಅದರ ಪರಿಣಾಮವಾಗಿ ಉಂಟಾದ ವಿಳಂಬ, ಜೊತೆಗೆ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮತ್ತು ಸಿಬ್ಬಂದಿಗಳ ನಡುವಿನ ಭಿನ್ನಾಭಿಪ್ರಾಯಗಳ ವಿಷಯಗಳ ಕುರಿತು ಸಭೆಯಲ್ಲಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳು ಮತ್ತು ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಶನಿವಾರ ಸಭೆ ನಡೆಸಿದ್ದು, ಮಾತುಕತೆ ನಡೆಸಿದ್ದಾರೆ.

ತುಷಾರ್ ಗಿರಿನಾಥ್ ಅವರು, ಇ-ಖಾತಾಯಲ್ಲಿ ಉಂಟಾಗುತ್ತಿರುವ ಸಾಫ್ಟ್‌ವೇರ್ ದೋಷ ಮತ್ತು ಅದರ ಪರಿಣಾಮವಾಗಿ ಉಂಟಾದ ವಿಳಂಬ. ಜೊತೆಗೆ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮತ್ತು ಸಿಬ್ಬಂದಿಗಳ ನಡುವಿನ ಭಿನ್ನಾಭಿಪ್ರಾಯಗಳ ವಿಷಯಗಳ ಕುರಿತು ಸಭೆಯಲ್ಲಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಅವರು, ಸಿಬ್ಬಂದಿಯ ಪರವಾಗಿ ಗಿರಿ ನಾಥ್ ಅವರಿಗೆ ಪತ್ರ ಬರೆದಿದ್ದರು.

ಸಭೆ ಬಳಿಕ ಪ್ರತಿಕ್ರಿಯೆ ನೀಡಿರುವ ಅಮೃತ್ ರಾಜ್ ಅವರು, ಮೇಲಾಧಿಕಾರಿಗಳಿಂದ ಸಿಬ್ಬಂದಿಗಳು ಮಾನಸಿಕ ಕಿರುಕುಳಎದುರಿಸುತ್ತಿದ್ದರು. ಈ ವಿಷಯವನ್ನು ಎಸಿಎಸ್ ಅವರ ಗಮನಕ್ಕೆ ತಂದಿದ್ದೇವೆ. ಎನ್‌ಐಸಿಯೊಂದಿಗೆ ಮಾತುಕತೆ ನಡೆಸಿ ಸಾಫ್ಟ್‌ವೇರ್ ದೋಷ ಸರಿಪಡಿಸುವ ಭರವಸೆ ನೀಡಿದ್ದಾರೆಂದು ಹೇಳಿದರು.

ಇದೇವೇಳೆ ಉಪ ಆಯುಕ್ತ ಡಿ.ಕೆ. ಬಾಬು ಮತ್ತು ವರಲಕ್ಷ್ಮಿ ಅವರನ್ನು ಅಮಾನತುಗೊಳಿಸಿರುವುದನ್ನೂ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ತುಷಾರ್ ಗಿರಿನಾಥ್ ಅವರ ಭರವಸೆ ಹಿನ್ನೆಲೆಯಲ್ಲಿ ಈ ವಿಚಾರವನ್ನು ನಮ್ಮ ಸಿಬ್ಬಂದಿ ಮುಂದುವರೆಸುವುದಿಲ್ಲ. ಕೆಲಸಕ್ಕ ಗಮನ ಹರಿಸಲಿದ್ದಾರೆಂದು ತಿಳಿಸಿದರು.

ಈ ನಡುವೆ ಹೇಳಿಕೆ ಬಿಡುಗಡೆ ಮಾಡಿರುವ ಮುನೀಶ್ ಮೌದ್ಗಿಲ್ ಅವರು, ಯಾವುದೇ ಸಿಬ್ಬದಿ ವಿರುದ್ಧ ನಾನು ಅವಹೇಳನಕಾರಿ ಭಾಷೆ ಬಳಕೆ ಮಾಡಿಲ್ಲ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನನ್ನ ವಿರುದ್ಧ ಕೇಳಇ ಬಂದಿರುವ ಆರೋಪಗಳು ತಪ್ಪು ಮಾಡಿದ ಅಧಿಕಾರಿಗಳ ರಕ್ಷಿಸಲು ಮಾಡಿರುವ ಪ್ರಯತ್ನವಾಗಿದೆ ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

36 ಗಂಟೆಗಳಲ್ಲಿ 80 ಡ್ರೋನ್‌; ಪಾಕ್‌ನ ನೂರ್ ಖಾನ್ ವಾಯುನೆಲೆ ನಾಶ: Operation Sindoor ಒಪ್ಪಿಕೊಂಡ Pak

ಮೇಘಾಲಯ ಮೂಲಕ ಉಸ್ಮಾನ್ ಹಾದಿ ಕೊಲೆಯ ಪ್ರಮುಖ ಹಂತಕರು ಭಾರತಕ್ಕೆ ಪಲಾಯನ: ಬಾಂಗ್ಲಾ ಪೊಲೀಸರು

ಮತ್ತೊಂದು ಕ್ರಿಕೆಟ್ ದುರಂತ: ಕೋಚ್ ಗೆ ಹೃದಯಾಘಾತ, ಮೈದಾನದಲ್ಲೇ ಸಾವು!

ಅಯೋಧ್ಯೆ ರಾಮಮಂದಿರಕ್ಕೆ ಚಂದ್ರಬಾಬು ನಾಯ್ಡು ಭೇಟಿ, ದಕ್ಷಿಣ ಭಾರತದ ಮೊದಲ ಸಿಎಂ!

'ಜನ ನಾಯಗನ್' ನನ್ನ ಕೊನೆಯ ಸಿನಿಮಾ: ಮುಂದಿನ 30 ವರ್ಷ ನಿಮ್ಮ ಋಣ ತೀರಿಸಲು ದುಡಿಯುತ್ತೇನೆ - ನಟ ವಿಜಯ್

SCROLL FOR NEXT