ಡಾಪ್ಲಾರ್ ಹವಾಮಾನ ರಾಡಾರ್  
ರಾಜ್ಯ

ಕರ್ನಾಟಕಕ್ಕೆ 5 ಡಾಪ್ಲರ್ ರಾಡಾರ್: ನಿಖರ ಹವಾಮಾನ ಮಾಹಿತಿ

ಎಲ್ಲಾ ಐದು ರಾಡಾರ್‌ಗಳು ಸರ್ಕಾರಿ ಏಜೆನ್ಸಿಗಳಿಗೆ ಮಾತ್ರವಲ್ಲದೆ ಜನರಿಗೆ ಸಕಾಲಿಕ ಎಚ್ಚರಿಕೆಗಳನ್ನು ನೀಡಲು ಸಹಾಯ ಮಾಡುತ್ತದೆ ಎಂದರು.

ಬೆಂಗಳೂರು: ಕರ್ನಾಟಕದಲ್ಲಿ ಶೀಘ್ರದಲ್ಲಿಯೇ ಬೆಂಗಳೂರು, ಮಂಗಳೂರು ಮತ್ತು ಧಾರವಾಡದಲ್ಲಿ ಮೂರು ಡಾಪ್ಲರ್ ವೆದರ್ ರಾಡಾರ್‌ಗಳನ್ನು (DWR) ಹೊಂದಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಹವಾಮಾನ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

ಚೆನ್ನೈ, ಕೊಚ್ಚಿ ಮತ್ತು ಗೋವಾ ಡಿಡಬ್ಲ್ಯುಆರ್ ಗಳನ್ನು ಹೊಂದಿವೆ. ಕರ್ನಾಟಕಕ್ಕೆ ನಿಖರವಾದ ಹವಾಮಾನ ಮಾಹಿತಿಯನ್ನು ಒದಗಿಸುತ್ತದೆ. ಸಮಯೋಚಿತ ಹವಾಮಾನ ಎಚ್ಚರಿಕೆಗಳನ್ನು ನೀಡಬಹುದು ಎಂದು ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ನಗರದಲ್ಲಿ ಐಎಂಡಿ ಕಾರ್ಯ ನಿರ್ವಹಿಸಿ 150 ವರ್ಷ ಪೂರೈಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಭೋಯಾರ್ ಹರ್ಷಲ್ ನಾರಾಯಣ ರೈ, ಕಾರವಾರ ಮತ್ತು ಬಳ್ಳಾರಿಯಲ್ಲಿ ಇನ್ನೂ ಎರಡು ರಾಡಾರ್‌ಗಳನ್ನು ಅಳವಡಿಸಲಾಗುವುದು. ಎಲ್ಲಾ ಐದು ರಾಡಾರ್‌ಗಳು ಸರ್ಕಾರಿ ಏಜೆನ್ಸಿಗಳಿಗೆ ಮಾತ್ರವಲ್ಲದೆ ಜನರಿಗೆ ಸಕಾಲಿಕ ಎಚ್ಚರಿಕೆಗಳನ್ನು ನೀಡಲು ಸಹಾಯ ಮಾಡುತ್ತದೆ ಎಂದರು.

ಹವಾಮಾನ ಇಲಾಖೆ ಕೈಗೊಂಡ ಉಪಕ್ರಮಗಳ ಕುರಿತು ಮಾತನಾಡಿದ ಅವರು, ಕರ್ನಾಟಕವು ಪ್ರವಾಹಕ್ಕೆ ಗುರಿಯಾಗಿದೆ. ಅದರ ನಗರ ಪ್ರದೇಶಗಳು ಸಹ ಈ ಸಮಸ್ಯೆಯನ್ನು ಎದುರಿಸುತ್ತಿವೆ. ಆಗಾಗ ಪ್ರವಾಹಕ್ಕೆ ತುತ್ತಾಗುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಇದನ್ನು ಪರಿಹರಿಸಲು, IMD, IISc, KSNDMC ಮತ್ತು ಇತರ ಏಜೆನ್ಸಿಗಳ ಸಹಯೋಗದೊಂದಿಗೆ ಎರಡು ವರ್ಷಗಳಲ್ಲಿ ವಿಶೇಷ ಪ್ರದೇಶ, ಹವಾಮಾನ ವರದಿಗಳನ್ನು ನೀಡಲು ಪ್ರಾರಂಭಿಸುತ್ತದೆ.

ಹವಾಮಾನ ಇಲಾಖೆಯು ಈಗ ಗಾಳಿಯ ಗುಣಮಟ್ಟದ ಮಾಹಿತಿ ಮತ್ತು ಗಾಳಿ ವಿವರ ಮತ್ತು ಗಾಳಿಯ ವಿತರಣೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಮೋಡದ ರಚನೆ ಮತ್ತು ವ್ಯವಸ್ಥೆಗಳ ರಚನೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ವಾತಾವರಣದ ವಿವಿಧ ಪದರಗಳಲ್ಲಿ ಗಾಳಿಯ ವಿತರಣೆಯ ಕುರಿತು ಎಚ್ಚರಿಕೆಗಳನ್ನು ನೀಡಲಾಗುವುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT