ಮಾಲಿನಿ ಕೃಷ್ಣಮೂರ್ತಿ ಮತ್ತು ಬಿ ಎಸ್ ಲೋಕೇಶ್ ಕುಮಾರ್ 
ರಾಜ್ಯ

ಪಿಂಚಣಿ, ಗ್ರಾಚ್ಯುಟಿಗಾಗಿ ಅರ್ಜಿ ಸಲ್ಲಿಸಿ; ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರದ ಸೂಚನೆ: IPS ಕೇಡರ್ ನಲ್ಲಿ ಗೊಂದಲ!

ಪೊಲೀಸ್ ಪಡೆ ಮುಖ್ಯಸ್ಥ (ಎಚ್‌ಒಪಿಎಫ್), ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಅಲೋಕ್ ಮೋಹನ್ ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳು ಈ ವರ್ಷ ನಿವೃತ್ತರಾಗಲಿದ್ದಾರೆ.

ಬೆಂಗಳೂರು: ಪಿಂಚಣಿ, ಗ್ರಾಚ್ಯುಟಿ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಂತೆ ಹಿರಿಯ ಭಾರತೀಯ ಪೊಲೀಸ್ ಸೇವೆ ಅಧಿಕಾರಿ ಮತ್ತು ಜೈಲು ಮತ್ತು ತಿದ್ದುಪಡಿ ಸೇವೆಗಳ ಪೊಲೀಸ್ ಮಹಾನಿರ್ದೇಶಕಿ (ಡಿಜಿಪಿ) ಮಾಲಿನಿ ಕೃಷ್ಣಮೂರ್ತಿ ಮತ್ತು ಬಳ್ಳಾರಿಯ ಪೊಲೀಸ್ ಮಹಾನಿರ್ದೇಶಕ (ಐಜಿಪಿ) ಬಿ.ಎಸ್. ಲೋಕೇಶ್ ಕುಮಾರ್ ಅವರಿಗೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ರಾಜ್ಯದ ಐಪಿಎಸ್ ಕೇಡರ್‌ನಲ್ಲಿ ಗೊಂದಲ ಸೃಷ್ಟಿಸಿದೆ.

ಪೊಲೀಸ್ ಪಡೆ ಮುಖ್ಯಸ್ಥ (ಎಚ್‌ಒಪಿಎಫ್), ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಅಲೋಕ್ ಮೋಹನ್ ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳು ಈ ವರ್ಷ ನಿವೃತ್ತರಾಗಲಿದ್ದಾರೆ. ಆದರೆ ಜುಲೈ 10, 2024 ರಂದು ಹೊರಡಿಸಲಾದ ಡಿಪಿಎಆರ್ ಅಧಿಸೂಚನೆಯನ್ನು ಈ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಮಾತ್ರ ಏಕೆ ನೀಡಲಾಗಿದೆ?" ಎಂದು ಮೂಲಗಳು ಪ್ರಶ್ನಿಸಿವೆ.

ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿದ ನಂತರ ಮೇ 2023 ರಲ್ಲಿ ಅಲೋಕ್ ಮೋಹನ್ ಅವರನ್ನು ಡಿಜಿ ಮತ್ತು ಐಜಿಪಿಯಾಗಿ ನೇಮಿಸಲಾಯಿತು. 2023ರ ಆಗಸ್ಟ್‌ನಲ್ಲಿ ಅವರ ನೇಮಕಾತಿಯನ್ನು ಕ್ರಮಬದ್ಧಗೊಳಿಸಲಾಯಿತು. 1987 ರ ಬ್ಯಾಚ್‌ನ ಅಲೋಕ್ ಮೋಹನ್, 1993 ರ ಬ್ಯಾಚ್‌ನ ಮಾಲಿನಿ ಕೃಷ್ಣಮೂರ್ತಿ ಮತ್ತು 2005 ರ ಬ್ಯಾಚ್‌ನ ಲೋಕೇಶ್ ಕುಮಾರ್ ಈ ವರ್ಷ ನಿವೃತ್ತರಾಗುತ್ತಿದ್ದಾರೆ. ನಾಗರಿಕ ಪಟ್ಟಿಯ ಪ್ರಕಾರ, ಮೋಹನ್ ಮತ್ತು ಕುಮಾರ್ ಏಪ್ರಿಲ್ 30 ರಂದು ಮತ್ತು ಕೃಷ್ಣಮೂರ್ತಿ ಜುಲೈ 31 ರಂದು ನಿವೃತ್ತರಾಗಲಿದ್ದಾರೆ.

1958 ರ ಅಖಿಲ ಭಾರತ ಸೇವಾ (AIS) (DCRB) ನಿಯಮಗಳ ಪ್ರಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಮುಂದಿನ ವರ್ಷ ನಿವೃತ್ತರಾಗುವ ಕ್ಲಾಸ್ ಒನ್ ಅಧಿಕಾರಿಗಳಿಗೆ ನಿವೃತ್ತಿ ದಿನಾಂಕಕ್ಕೆ ಆರು ತಿಂಗಳ ಮೊದಲು ಪಿಂಚಣಿ, ಗ್ರಾಚ್ಯುಟಿ, ಮ್ಯುಟೇಶನ್, ಗುಂಪು ವಿಮೆ ಮತ್ತು ಇತರ ಪ್ರಯೋಜನಗಳಿಗಾಗಿ ಅರ್ಜಿಗಳನ್ನು DPAR ಗೆ ಸಲ್ಲಿಸಲು ಸುಮಾರು ಒಂದು ವರ್ಷ ಮುಂಚಿತವಾಗಿ ಅಧಿಸೂಚನೆಯನ್ನು ಹೊರಡಿಸುತ್ತದೆ. ಏಕೆಂದರೆ ಸೂಕ್ತ ಸಮಯದಲ್ಲಿ ಪಿಂಚಣಿದಾರರ ಪ್ರಯೋಜನಗಳನ್ನು ಪಡೆಯಲು ಇಲಾಖೆಯು ಕರ್ನಾಟಕದ ಪ್ರಧಾನ ಲೆಕ್ಕಪತ್ರ ಜನರಲ್‌ಗೆ '‘No Dues Certificate ಕೊಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿಎಂ ದೊಡ್ಡವರು, ಅವರು ಹೇಳಿದ್ದನ್ನು ನಾವು ಚಿಕ್ಕವರು ಕೇಳಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್ ಮಾರ್ಮಿಕ ನುಡಿ; ರಾತ್ರಿ ಆಪ್ತ ಶಾಸಕರೊಂದಿಗೆ ಸಭೆ!

ದುಬೈ ಏರ್ ಶೋ ವೇಳೆ ದುರಂತ; ಭಾರತದ ತೇಜಸ್ ಯುದ್ಧ ವಿಮಾನ ಪತನ, ಪೈಲಟ್ ಸಾವು! ತನಿಖೆಗೆ IAF ಆದೇಶ

"ದೇಶದ ಭದ್ರತೆಗೆ ಧಕ್ಕೆ ತಂದ್ರೆ ಬಿಡಲ್ಲ": ರಿಸಿನ್ ದಾಳಿ ಸಂಚು ರೂಪಿಸಿದ್ದ ಭಯೋತ್ಪಾದಕನಿಗೆ ಜೈಲಿನಲ್ಲಿ ಕೈದಿಗಳಿಂದ ಧರ್ಮದೇಟು; ವೈದ್ಯ ಉಗ್ರ ಆಸ್ಪತ್ರೆಗೆ ದಾಖಲು!

News headlines 21-11-2025| CM ಬದಲಾವಣೆ ವಿಷಯ; ಶಾಸಕರಿಗೆ ಹೈಕಮಾಂಡ್ ಮಹತ್ವದ ಸೂಚನೆ; ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಿಯಾಯಿತಿ; ಹಡಗು ನಿರ್ಮಾಣ, ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಇಬ್ಬರ ಬಂಧನ

Asia Cup Rising stars: ಸೂಪರ್ ಓವರ್ ನಲ್ಲಿ ಮುಗ್ಗರಿಸಿದ ಭಾರತ, ವೈಭವ್ ಸೂರ್ಯವಂಶಿಯನ್ನು ಯಾಕೆ ಬ್ಯಾಟಿಂಗ್ ಗೆ ಕಳುಹಿಸಲಿಲ್ಲ? ಅಭಿಮಾನಿಗಳ ಆಕ್ರೋಶ

SCROLL FOR NEXT