ಸಾಂದರ್ಭಿಕ ಚಿತ್ರ 
ರಾಜ್ಯ

ಕೊಡಗು: ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿದ್ದ ಡಾಕ್ಟರ್ ನಾಪತ್ತೆ; ರೋಗಿಗಳು ಅತಂತ್ರ!

ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿದ್ದಾರೆ, ಆದರೆ ಕೆಲವೇ ಜನರಿಗೆ ಮಾತ್ರ ವೈದ್ಯರ ದರ್ಶನ ಮಾಡಿದ್ದಾರೆ. ಆರೋಗ್ಯ ಕೇಂದ್ರವು ಉತ್ತಮ ಮೂಲಸೌಕರ್ಯಗಳನ್ನು ಹೊಂದಿದೆ ಆದರೆ ಹೆಚ್ಚಿನ ಸಮಯ ಬೀಗ ಹಾಕಿರುತ್ತದೆ.

ಮಡಿಕೇರಿ: ದಿನಕ್ಕೆ ಒಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡುತ್ತದೆ ಎಂಬ ನಾಣ್ಣುಡಿಯಿದೆ. ಕೊಡಗಿನ ಪುಟ್ಟ ಹಳ್ಳಿಯಾದ ಸೂರ್ಲಬ್ಬಿಯಲ್ಲಿ ಸೇಬು ಬೆಳೆಯುವುದಿಲ್ಲ, ಆದರೆ ಗ್ರಾಮಸ್ಥರು ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರನ್ನು ದೀರ್ಘಕಾಲದಿಂದ ದೂರವಿಡಲು ಕಾರಣವೇನು ಎಂಬ ಬಗ್ಗೆ ಆಶ್ಚರ್ಯ ಚಕಿತರಾಗಿದ್ದಾರೆ.

ಸೂರ್ಲಬ್ಬಿ, ಹಮ್ಮಿಯಾಲ, ಗರ್ವಾಲೆ, ಮುಟ್ಲು, ಕುಂಬಾರಗಡಿಗೆ ಮತ್ತು ಮಂಕ್ಯ ಎಂಬ ಐದು ಹಳ್ಳಿಗಳ ಆರೋಗ್ಯ ಅಗತ್ಯಗಳನ್ನು ಪೂರೈಸುವ ಪ್ರಾಥಮಿಕ ಆರೋಗ್ಯ ಕೇಂದ್ರದ ಗ್ರೂಪ್ ಡಿ ಕೆಲಸಗಾರರು ನರ್ಸ್ ಮತ್ತು ವೈದ್ಯರಾಗಿ ಕಾರ್ಯನಿರ್ವಹಿಸುತ್ತಾರೆ.

ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿದ್ದಾರೆ, ಆದರೆ ಕೆಲವೇ ಜನರಿಗೆ ಮಾತ್ರ ವೈದ್ಯರ ದರ್ಶನ ಮಾಡಿದ್ದಾರೆ. ಆರೋಗ್ಯ ಕೇಂದ್ರವು ಉತ್ತಮ ಮೂಲಸೌಕರ್ಯಗಳನ್ನು ಹೊಂದಿದೆ ಆದರೆ ಹೆಚ್ಚಿನ ಸಮಯ ಬೀಗ ಹಾಕಿರುತ್ತದೆ.

ಈ ಪಿಎಚ್‌ಸಿಗೆ ಶಾಶ್ವತ ವೈದ್ಯರನ್ನು ನಿಯೋಜಿಸಲಾಗಿದೆ. ಇದು ಇಂಟಿರೀಯರ್ ಸ್ಥಳವಾಗಿದ್ದು. ಹೆಚ್ಚಿನ ರೋಗಿಗಳಿಲ್ಲ. ವಾರದಲ್ಲಿ ಕನಿಷ್ಠ ಮೂರು ಬಾರಿ ಪಿಎಚ್‌ಸಿಗೆ ಭೇಟಿ ನೀಡಲು ನಾವು ವೈದ್ಯರಿಗೆ ಸೂಚಿಸಿದ್ದೇವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ್ ಕುಮಾರ್ ಹೇಳಿದ್ದಾರೆ.

ಆದಾಗ್ಯೂ, ಗ್ರಾಮಸ್ಥರಿಗೆ ವೈದ್ಯರ ಹುದ್ದೆಯ ಬಗ್ಗೆ ತಿಳಿದಿಲ್ಲ ಏಕೆಂದರೆ ಪಿಎಚ್‌ಸಿಗೆ ಬಂದಾಗ ವೈದ್ಯರು ಇರುವುದೇ ಇಲ್ಲ.. ಒಬ್ಬ ಗ್ರೂಪ್ ಡಿ ಸಿಬ್ಬಂದಿ ಆರೋಗ್ಯ ಕೇಂದ್ರ ತೆರೆಯುತ್ತಾಳೆ ಮತ್ತು ಮುಚ್ಚುತ್ತಾಳೆ. ಅವಳು ರಜೆಯಲ್ಲಿದ್ದಾಗ, ಕೇಂದ್ರವು ಲಾಕ್ ಆಗಿರುತ್ತದೆ. ಈಕೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಔಷಧಿಗಳನ್ನು ನೀಡುತ್ತಾಳೆ. ದೊಡ್ಡ ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ, 15 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿರುವ ಮಾದಾಪುರವನ್ನು ತಲುಪಲು ನಾವು ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಮುಟ್ಲು ನಿವಾಸಿ ಮಣಿ ಹೇಳಿದರು.

ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಭೇಟಿ ನೀಡಿದಾಗ, ಗ್ರೂಪ್ ಡಿ ಸಿಬ್ಬಂದಿ ಕೆಲವು 'ವೈಯಕ್ತಿಕ ಕೆಲಸ'ಗಳಿಗೆ ಹೋಗಿದ್ದರಿಂದ ಅದು ಲಾಕ್ ಆಗಿತ್ತು. ಆದಾಗ್ಯೂ, ವೈದ್ಯರು ಪ್ರತಿಕ್ರಿಯೆಗೆ ಲಭ್ಯವಿರಲಿಲ್ಲ. ಕಾಣೆಯಾದ ವೈದ್ಯರ ನಿಗೂಢ ಪ್ರಕರಣವನ್ನು ಪರಿಶೀಲಿಸುವುದಾಗಿ ಡಿಎಚ್‌ಒ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT