ಪಿಯೂಷ್ ಗೋಯಲ್-ಸಿದ್ದರಾಮಯ್ಯ 
ರಾಜ್ಯ

ಕೋವಿಡ್ ಲಸಿಕೆಯಿಂದ ಹೃದಯಾಘಾತ: ಒಂದು ರಾಜ್ಯದ ಮುಖ್ಯಮಂತ್ರಿ ಬಾಯಲ್ಲಿ ಇಂತಹ ಹೇಳಿಕೆ ದುರದೃಷ್ಟಕರ; ಗೋಯಲ್ ವಾಗ್ದಾಳಿ, ಕ್ಷಮೆಯಾಚನೆಗೆ ಒತ್ತಾಯ!

ಕೋವಿಡ್ ಲಸಿಕೆ ಹೃದಯಾಘಾತದ ಸಾವುಗಳಿಗೆ ಸಂಬಂಧಿಸಿರಬಹುದು ಎಂದು ಹೇಳಿದ್ದಕ್ಕಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು: ಕೋವಿಡ್ ಲಸಿಕೆ ಹೃದಯಾಘಾತದ ಸಾವುಗಳಿಗೆ ಸಂಬಂಧಿಸಿರಬಹುದು ಎಂದು ಹೇಳಿದ್ದಕ್ಕಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹೇಳಿಕೆಗಳು ಭಾರತೀಯ ವಿಜ್ಞಾನಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ದೇಶದ ಔಷಧೀಯ ಶಕ್ತಿಗೆ ಮಾಡಿದ ಅವಮಾನ. ಸಾಂಕ್ರಾಮಿಕ ರೋಗದ ಸಮಯದಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡಿದ ಜನರನ್ನು ಸಿದ್ದರಾಮಯ್ಯ ಹೇಳಿಕೆಗಳು ದುರ್ಬಲಗೊಳಿಸಿವೆ. ಸಿದ್ದರಾಮಯ್ಯ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಐಐಟಿ ಮದ್ರಾಸ್ ಸಂಗಮ್ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಗೋಯಲ್, 'ವಿಶ್ವದ ಔಷಧಾಲಯ' ಎಂದು ಕರೆಯಲ್ಪಡುವ ಭಾರತದಲ್ಲಿ. ಒಂದು ರಾಜ್ಯದ ಮುಖ್ಯಮಂತ್ರಿಯಿಂದ ಅಂತಹ ಹೇಳಿಕೆ ಬಂದಿರುವುದು ದುರದೃಷ್ಟಕರ ಎಂದು ಹೇಳಿದರು. ನಮ್ಮ ವಿಜ್ಞಾನಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹೆಣಗಾಡುತ್ತಿರುವಾಗ ಹಗಲಿರುಳು ಕೆಲಸ ಮಾಡಿದವು, ಪ್ರಯೋಗಗಳನ್ನು ನಡೆಸಿದವು ಮತ್ತು ಎರಡು ಲಸಿಕೆಗಳನ್ನು ನಿರ್ಮಿಸಿದವು. ಭಾರತವು ತನ್ನದೇ ಆದ ಜನರನ್ನು ರಕ್ಷಿಸುವುದಲ್ಲದೆ, 150 ದೇಶಗಳಿಗೆ ಲಸಿಕೆಗಳನ್ನು ಪೂರೈಸಿತು. 100ಕ್ಕೂ ಹೆಚ್ಚು ದೇಶಗಳಿಗೆ ಉಚಿತವಾಗಿ ನೀಡಿತು ಎಂದು ಹೇಳಿದರು.

ಈಗ, ಜಗತ್ತು ಭಾರತಕ್ಕೆ ಜೀವಗಳನ್ನು ಉಳಿಸಿದ್ದಕ್ಕಾಗಿ ಧನ್ಯವಾದ ಹೇಳುತ್ತಿರುವಾಗ, ಸಿದ್ದರಾಮಯ್ಯ ಆ ಪ್ರಯತ್ನಗಳನ್ನು ಅವಮಾನಿಸುತ್ತಿದ್ದಾರೆ. ಸಿದ್ದರಾಮಯ್ಯ ಭಾರತ ಸರ್ಕಾರದ ವಿರುದ್ಧ ಕಾರ್ಯಸೂಚಿ ಹೊಂದಿರುವ ದೇಶಗಳ ಪರವಾಗಿದ್ದಾರೆಯೇ? ಅವರು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ? ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಪಿಯೂಷ್ ಆಗ್ರಹಿಸಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳನ್ನು ಉಲ್ಲೇಖಿಸಿದ ಅವರು, ಭಾರತವು ಪಿಪಿಇ ಕಿಟ್‌ಗಳು ಮತ್ತು ಲಸಿಕೆಗಳ ತೀವ್ರ ಕೊರತೆಯನ್ನು ಹೇಗೆ ಎದುರಿಸಿತು ಎಂಬುದರ ಕುರಿತು ಗೋಯಲ್ ಗಮನಸೆಳೆದರು. ಕೇವಲ ದಿನಗಳಲ್ಲಿ, ಭಾರತೀಯ ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಗಳು ಸ್ಥಳೀಯವಾಗಿ ಪಿಪಿಇ ಕಿಟ್‌ಗಳನ್ನು ಅಭಿವೃದ್ಧಿಪಡಿಸಿದವು ಮತ್ತು ನಾವು ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕರಾದೆವು ಎಂದು ಅವರು ಹೇಳಿದರು. ನಾವು ವಿದೇಶದಿಂದ ಲಸಿಕೆಗಳನ್ನು ಖರೀದಿಸಲು ಪ್ರಯತ್ನಿಸಿದಾಗ ನಮ್ಮನ್ನು ದೂರವಿಟ್ಟರು. ಅಭಿವೃದ್ಧಿ ಹೊಂದಿದ ದೇಶಗಳು ದುಬಾರಿ ಲಸಿಕೆಗಳನ್ನು ಉತ್ಪಾದಿಸಿದವು. ಆದರೆ ಭಾರತ ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸಿತು. ಇಂದಿಗೂ, ಪ್ರಪಂಚದಾದ್ಯಂತ ಜನರು ಜೀವಗಳನ್ನು ಉಳಿಸಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಹೇಳುತ್ತಾರೆ ಎಂದು ಪಿಯೂಷ್ ಹೇಳಿದರು. ಆದರೂ, ಮುಖ್ಯಮಂತ್ರಿಗಳು ಇದನ್ನು ನಾಚಿಕೆಗೇಡಿನ ವಿಷಯವೆಂದು ಕಂಡುಕೊಳ್ಳುತ್ತಾರೆ? ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT