ಕೆಜಿಎಫ್ ಬಾಬು 
ರಾಜ್ಯ

ಬೇಕಿದ್ದರೆ ಚಿಕ್ಕಪೇಟೆ ಜನರಿಗೆ 1600 ಕೋಟಿಯಲ್ಲಿ ಅರ್ಧ ಪಾಲು ಕೊಡ್ತೀನಿ ಹೊರತು ಮಗನಿಗೆ ಕೊಡಲ್ಲ: KGF ಬಾಬು

ಕರ್ನಾಟಕ ಕುಬೇರ ರಾಜಕಾರಣಿ, ಉದ್ಯಮಿ ಕೆಜಿಎಫ್ ಬಾಬು ಮನೆ ಜಗಳ ಇದೀಗ ಬೀದಿರಂಪವಾಗಿದ್ದು ಮುಗಿಯುವ ಲಕ್ಷಣಗಳನ್ನು ಕಾಣುತ್ತಿಲ್ಲ. ಆಸ್ತಿ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಸಂಬಂಧ ಹಳಸಿದೆ.

ಬೆಂಗಳೂರು: ಕರ್ನಾಟಕ ಕುಬೇರ ರಾಜಕಾರಣಿ, ಉದ್ಯಮಿ ಕೆಜಿಎಫ್ ಬಾಬು ಮನೆ ಜಗಳ ಇದೀಗ ಬೀದಿರಂಪವಾಗಿದ್ದು ಮುಗಿಯುವ ಲಕ್ಷಣಗಳನ್ನು ಕಾಣುತ್ತಿಲ್ಲ. ಆಸ್ತಿ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಸಂಬಂಧ ಹಳಸಿದೆ. ನನ್ನ ಬಳಿ ಸುಮಾರು ನಾಲ್ಕೈದು ಸಾವಿರ ಕೋಟಿ ರೂಪಾಯಿ ಆಸ್ತಿ ಇದೆ. ಅದರಲ್ಲಿ ಅರ್ಧ ಆಸ್ತಿಯನ್ನು ನನ್ನ ಹೆಂಡ್ತೀರು ಮತ್ತು ಮಕ್ಕಳಿಗೆ ಕೊಡುತ್ತೇನೆ. ಉಳಿದ ಅರ್ಧ ಆಸ್ತಿಯನ್ನು ಚಿಕ್ಕಪೇಟೆ ಜನರಿಗೆ ಹಂಚುತ್ತೇನೆ ಹೊರತು ಮಾವನ ಜೊತೆ ಸೇರಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿರುವ ಮಗನಿಗೆ ಕೊಡುವುದಿಲ್ಲ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ. ನನ್ನ ಮಗನ ಮಾವ ಎಸ್​ಬಿಐನಲ್ಲಿ ರೂ. 60 ಕೋಟಿ ಸಾಲ ಮಾಡಿದ್ದರು. ಅದರೆ ಅದರಲ್ಲಿ ಕೇವಲ ಕೇವಲ 15 ಕೋಟಿ ಮರುಪಾವತಿ ಮಾಡಿ 45 ಕೋಟಿ ಬಾಕಿ ಉಳಿಸಿಕೊಂಡಿದ್ದರು. ಆಗ ನಾನು 200 ಕೋಟಿಯ ಆಸ್ತಿಯನ್ನು ಅಡಮಾನ ಇಟ್ಟು ಮುಸ್ತಾಫಾರನ್ನು ಸಂಕಷ್ಟದಿಂದ ಪಾರು ಮಾಡಿದೆ. ಆದರೆ ಸಾಲ ತೀರಿಸದೆ ಸುಮ್ಮನಾಗಿದ್ದಾರೆ ಎಂದು ಕೆಜಿಎಫ್ ಬಾಬು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇದೆಲ್ಲಾ ಒಂದೆರಡು ತಿಂಗಳಷ್ಟೆ, ಭಾರತ ಮತ್ತೆ ಮಾತುಕತೆಗೆ ಬರಲಿದೆ, ಕ್ಷಮೆಯಾಚಿಸುತ್ತದೆ: ಅಮೆರಿಕ ವಾಣಿಜ್ಯ ಸಚಿವ ಲುಟ್ನಿಕ್

'ಇಸ್ಲಾಂಗೆ ವಿರುದ್ಧ': ದರ್ಗಾದ ಫಲಕದಲ್ಲಿನ ಅಶೋಕ ಲಾಂಛನ ವಿರೂಪಗೊಳಿಸಿದ ಸ್ಥಳೀಯರು!: Video

ಕರಾಳ ಚೀನಾಕ್ಕೆ ಭಾರತವನ್ನು ಕಳೆದುಕೊಂಡಂತೆ ಅನಿಸಿದೆ: ಜಗತ್ತಿನ ಗಮನ ಸೆಳೆದ ಡೊನಾಲ್ಡ್ ಟ್ರಂಪ್ ಪೋಸ್ಟ್!

GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಏಕಿಲ್ಲ?: GST 3.0 ಬಗ್ಗೆ Nirmala Sitharaman ಹೇಳಿದ್ದೇನು?

"GST ಇಳಿಕೆಯ ಲಾಭ ಗ್ರಾಹಕರಿಗೆ ತಲುಪಿಸಲು ಬದ್ಧ": TATA ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ: ವಿವರ ಇಂತಿದೆ..

SCROLL FOR NEXT