ಸಂಗ್ರಹ ಚಿತ್ರ 
ರಾಜ್ಯ

IRCTC Package: ಬೆಂಗಳೂರಿನಿಂದ ದೇಶಿಯ-ಅಂತರರಾಷ್ಟ್ರೀಯ ವಿಮಾನ ಪ್ರವಾಸ ಪ್ರಾರಂಭ

ಪ್ಯಾಕೇಜ್ ನಲ್ಲಿ ಪ್ರವಾಸ ವಿಮೆ, ಪ್ರಯಾಣದ ವೆಚ್ಚ, ಆಹಾರ, ವಾಸ್ತವ್ಯ, ದೃಶ್ಯವೀಕ್ಷಣೆ ಸೇರಿದಂತೆ ಅನೇಕ ವೆಚ್ಚಗಳನ್ನು ಕೂಡ ಸೇರ್ಪಡೆಯಾಗಿದೆ.

ಬೆಂಗಳೂರು: ರೈಲ್ವೆ ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಯಾದ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ಬೆಂಗಳೂರಿನಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರವಾಸದ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ.

ಈ ಮೂಲಕ ಐಆರ್‌ಸಿಟಿಸಿ, ದೇಶ ಮತ್ತು ವಿದೇಶದ ಅನೇಕ ಪ್ರವಾಸಿ ಸ್ಥಳಗಳಿಗೆ ಕೈಗೆಟುಕುವ ಬೆಲೆಯಲ್ಲಿ ಜನರು ತಮ್ಮ ಕನಸಿನ ಸ್ಥಳಕ್ಕೆ ಪ್ರವಾಸ ಮಾಡುವ ಅವಕಾಶ ಮಾಡಿಕೊಟ್ಟಿದೆ.

ಪ್ಯಾಕೇಜ್ ನಲ್ಲಿ ಪ್ರವಾಸ ವಿಮೆ, ಪ್ರಯಾಣದ ವೆಚ್ಚ, ಆಹಾರ, ವಾಸ್ತವ್ಯ, ದೃಶ್ಯವೀಕ್ಷಣೆ ಸೇರಿದಂತೆ ಅನೇಕ ವೆಚ್ಚಗಳನ್ನು ಕೂಡ ಸೇರ್ಪಡೆಯಾಗಿದೆ.

ದೇಶೀಯ ವಿಮಾನ ಪ್ಯಾಕೇಜ್‌ಗಳು ಇಂತಿವೆ...

  • ಲಡಾಖ್‌ಗೆ 7 ದಿನಗಳ ಪ್ರವಾಸ ಆ.13ಕ್ಕೆ ಆರಂಭವಾಗಲಿದೆ. ಲೇಹ್, ಶಾಮ್ ವ್ಯಾಲಿ , ನುಬ್ರಾ, ತುರ್ತುಕ್ ಮತ್ತು ಪಾಂಗಾಂಗ್‌ಗಳನ್ನು ಒಳಗೊಂಡ ಈ ಪ್ರವಾಸಕ್ಕೆ ಒಬ್ಬರಿಗೆ 57,950 ರೂ. ದರ ಇರಲಿದೆ.

  • ಮಧ್ಯಪ್ರದೇಶದ ಜ್ಯೋತಿರ್ಲಿಂಗಗಳು 4 ದಿನಗಳ ಪ್ರವಾಸ ಆ.21ಕ್ಕೆ ಆರಂಭವಾಗಲಿದ್ದು, ಓಂಕಾರೇಶ್ವರ, ಮಹಾಕಾಲೇಶ್ವರ ಮತ್ತು ಇಂದೋರ್‌ಗಳಿಗೆ ಭೇಟಿ ಇರಲಿದೆ. ರೂ.24,600 ಪ್ರವಾಸ ದರ ನಿಗದಿಯಾಗಿದೆ.

  • ಅಯೋಧ್ಯೆ, ಗಯಾ, ಕಾಶಿ ಮತ್ತು ಪ್ರಯಾಗ್‌ರಾಜ್ 6 ದಿನಗಳ ಪ್ರವಾಸ ಆ.29ಕ್ಕೆ ಆರಂಭಗೊಳ್ಳಲಿದ್ದು, ರೂ. 34,200 ದರ ಇರಲಿದೆ.

  • ಸೆಪ್ಟೆಂಬರ್‌ 3ಕ್ಕೆ ಆರಂಭವಾಗುವ 13 ದಿನಗಳ ಚಾರ್ ಧಾಮ್ ಯಾತ್ರೆಯಲ್ಲಿ ಹರಿದ್ವಾರ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದ್ರಿನಾಥ, ದೇವಪ್ರಯಾಗ ಮತ್ತು ರಿಷಿಕೇಶಕ್ಕೆ ಭೇಟಿ ಇರಲಿದ್ದು, ರೂ.60,950 ದರ ನಿಗದಿ ಮಾಡಲಾಗಿದೆ.

  • ಈ ಪ್ರವಾಸಗಳು ವಿಮಾನ ಟಿಕೆಟ್‌, ವಸತಿ, ಅಗತ್ಯ ಇರುವಲ್ಲಿ ವಾಹನ, ಅಲ್ಲದೇ ಆಹಾರ, ಪ್ರಯಾಣ ವಿಮೆ ಮತ್ತು ಅನ್ವಯವಾಗುವ ತೆರಿಗೆಗಳು ಒಳಗೊಂಡಿವೆ ಎಂದು ಐಆರ್‌ಸಿಟಿಸಿ ಮಾಹಿತಿ ನೀಡಿದೆ.

ಅಂತರರಾಷ್ಟ್ರೀಯ ವಿಮಾನ ಪ್ರವಾಸ ಪ್ಯಾಕೇಜ್‌ಗಳು ಇಂತಿವೆ...

  • ಅಕ್ಟೋಬರ್‌ 29ರಿಂದ 9 ದಿನಗಳ ದಕ್ಷಿಣ ಕೊರಿಯಾ ಪ್ರವಾಸ (ರೂ.2,68,900), ನವೆಂಬರ್‌ 6ರಿಂದ 6 ದಿನ ಭೂತಾನ್ ಪ್ರವಾಸ (ರೂ.83,500), ನವೆಂಬರ್‌ 17ರಿಂದ 5 ದಿನ ದುಬೈ-ಅಬುಧಾಬಿ ಪ್ರವಾಸ (ರೂ, 93,750) ಇರಲಿದೆ.

  • ಮಾಹಿತಿ ಮತ್ತು ಬುಕಿಂಗ್‌ಗಾಗಿ www.irctctourism.com ಗೆ ಭೇಟಿ ನೀಡಬಹುದು. ಇಲ್ಲವೇ ಮೊಬೈಲ್‌: 8595931294 /94 ಸಂಪರ್ಕಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT