ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಕೆಟ್ಟ ರಸ್ತೆಗಳಿಂದ ಮುಕ್ತಿಗೆ 'ಪ್ರಾಜೆಕ್ಟ್ ಅಭಿಮನ್ಯು' ಆರಂಭಿಸಲು IT Belt ನಿವಾಸಿಗಳು ಮುಂದು

ಅನೇಕ ಕಚೇರಿ ಸಿಬ್ಬಂದಿಗಳು ಕೆಟ್ಟ ರಸ್ತೆಗಳಿಂದಾಗಿ ತಮ್ಮ ವಾಹನಗಳು ಹಾನಿಗೊಳಗಾಗುತ್ತಿವೆ ಎಂದು ದೂರುತ್ತಾರೆ. ಇದಲ್ಲದೆ, ಕೆಟ್ಟ ರಸ್ತೆಗಳಲ್ಲಿ ಪ್ರಯಾಣಿಸುವುದು ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತಿದೆ.

ಬೆಂಗಳೂರು: ಕೆಟ್ಟ ರಸ್ತೆಗಳಿಂದ ಬೇಸತ್ತ ಗುಂಜೂರು ಮತ್ತು ಸುತ್ತಮುತ್ತಲಿನ ಐಟಿ ಬೆಲ್ಟ್ ನಿವಾಸಿಗಳು 'ಪ್ರಾಜೆಕ್ಟ್ ಅಭಿಮನ್ಯು' ಅನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ, ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಿಗೆ ಸ್ಕೂಟರ್ ಮತ್ತು ಕಾರುಗಳ ಬಿಡಿಭಾಗಗಳನ್ನು ಬಳಸಿ ತಯಾರಿಸಿದ ವಸ್ತುವನ್ನು ಉಡುಗೊರೆಯಾಗಿ ನೀಡುತ್ತದೆ.

ವರ್ತೂರು, ಗುಂಜೂರು, ಪಾಣತ್ತೂರು, ತುಬರಹಳ್ಳಿ, ಬಾಲಗೆರೆ, ಎಸ್ ಕ್ರಾಸ್ ರಸ್ತೆ ಮತ್ತು ಇತರ ಪ್ರದೇಶಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿವೆ. ಉತ್ತಮ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆಯ ಕುರಿತು ಮಾತನಾಡಿದ ಪ್ರೆಸ್ಟೀಜ್ ಲೇಕ್‌ಸೈಡ್ ಹ್ಯಾಬಿಟೇಟ್ ಅಪಾರ್ಟ್‌ಮೆಂಟ್‌ಗಳ ಗೋವಿಂದ ಶ್ರೀವತ್ಸ, "ಐಟಿ ಬೆಲ್ಟ್ ನಿವಾಸಿಗಳು ಅತ್ಯಧಿಕ ತೆರಿಗೆಯನ್ನು ಪಾವತಿಸುತ್ತಾರೆ. ಆದರೆ ಪ್ರತಿಯಾಗಿ, ನಾಗರಿಕ ಸಂಸ್ಥೆಯು ನಮಗೆ ಮೂಲಭೂತ ಮೂಲಸೌಕರ್ಯದಿಂದ ವಂಚಿತವಾಗಿಸಿದೆ.

ಅನೇಕ ಕಚೇರಿ ಸಿಬ್ಬಂದಿಗಳು ಕೆಟ್ಟ ರಸ್ತೆಗಳಿಂದಾಗಿ ತಮ್ಮ ವಾಹನಗಳು ಹಾನಿಗೊಳಗಾಗುತ್ತಿವೆ ಎಂದು ದೂರುತ್ತಾರೆ. ಇದಲ್ಲದೆ, ಕೆಟ್ಟ ರಸ್ತೆಗಳಲ್ಲಿ ಪ್ರಯಾಣಿಸುವುದು ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದಿದ್ದಾರೆ.

ಬಿಬಿಎಂಪಿ ನನ್ನ ಸಾಂವಿಧಾನಿಕ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಿದೆ, ಆದ್ದರಿಂದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅನ್ನು ಸಂಪರ್ಕಿಸುವುದು ತಮ್ಮ ಮುಂದಿನ ಕೆಲಸವಾಗಿದೆ ಎಂದು ಯೋಜನೆಯ ನೇತೃತ್ವ ವಹಿಸಿರುವ ಶ್ರೀವತ್ಸ ಹೇಳಿದರು. ನಿವಾಸಿಗಳು ಕೆಟ್ಟ ರಸ್ತೆಗಳು, ಹಾಳಾದ ಪಾದಚಾರಿ ಮಾರ್ಗಗಳು, ಮುಚ್ಚಿಹೋಗಿರುವ ಚರಂಡಿಗಳು ಮತ್ತು ಇತರ 'ಚಕ್ರವ್ಯೂಹ'ವನ್ನು ದಾಟಿ ಹೋಗಬೇಕಾಗಿದೆ ಎಂದು ಅವರು ಹೇಳಿದರು.

ಮಹದೇವಪುರ ವಲಯದಲ್ಲಿನ ಕೆಟ್ಟ ನಾಗರಿಕ ಮೂಲಸೌಕರ್ಯದ ಬಗ್ಗೆ ಹತಾಶೆ ವ್ಯಕ್ತಪಡಿಸಿದ ವರ್ತೂರಿನ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನ ಮತ್ತೊಬ್ಬ ನಿವಾಸಿ ಅನಿತಾ ಜನಾರ್ದನನ್, ಗುಂಡಿಗಳಿಂದಾಗಿ ಮನೆಯಿಂದ ಬ್ರೂಕ್‌ಫೀಲ್ಡ್‌ನಲ್ಲಿರುವ ಕಚೇರಿಗೆ ಹೋಗುವುದು ಪ್ರತಿದಿನ ಅಗ್ನಿಪರೀಕ್ಷೆಯಾಗಿದೆ ಎಂದು ಹೇಳಿದರು.

ಮಳೆಯಲ್ಲಿ ದೊಡ್ಡ ಗುಂಡಿ ಕಾಣಿಸದ ಕಾರಣ ನನ್ನ ಕಾರಿನ ವಿಂಡ್‌ಶೀಲ್ಡ್ ಮತ್ತು ಸಸ್ಪೆನ್ಷನ್ ಹಾನಿಗೊಳಗಾಯಿತು. ಮುಂಭಾಗದ ಚಕ್ರ ಗುಂಡಿಗೆ ಬಿದ್ದಾಗ, ವಿಂಡ್‌ಶೀಲ್ಡ್ ತುಂಡುಗಳಾಗಿ ಮುರಿದುಹೋಯಿತು. ಈ ಪ್ರಕ್ರಿಯೆಯಲ್ಲಿ ನನ್ನ ಕಾರಿನ ಸಸ್ಪೆನ್ಷನ್ ಕೂಡ ಹಾನಿಗೊಳಗಾಯಿತು" ಎಂದು ಜನಾರ್ದನನ್ ಹೇಳಿದರು.

ಏತನ್ಮಧ್ಯೆ, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿ ನಾಥ್ ಅವರು ವಲಯ ಅಧಿಕಾರಿಗಳಿಗೆ ಗುಂಡಿಗಳ ಬಗ್ಗೆ ಗಮನ ಹರಿಸಲು ಮತ್ತು ಪಾದಚಾರಿ ಮಾರ್ಗಗಳನ್ನು ಸರಿಪಡಿಸಲು ನಿರ್ದೇಶನ ನೀಡಿದ್ದಾರೆ.

'ಬಳಗೆರೆ ಕನೆಕ್ಟ್' ಮತ್ತು ಇತರ ವೇದಿಕೆಗಳ ಅಡಿಯಲ್ಲಿರುವ ನಿವಾಸಿಗಳು ಸಾಮೂಹಿಕವಾಗಿ ಕಳಪೆ ಮೂಲಸೌಕರ್ಯದ ವಿಷಯವನ್ನು ಪ್ರಸ್ತಾಪಿಸಲು ಮತ್ತು ಮುಖ್ಯ ಆಯುಕ್ತರು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಲಯ ಸಭೆಯಲ್ಲಿ ಮೂಲಭೂತ ಮೂಲಸೌಕರ್ಯದ ಬಗ್ಗೆ ಪ್ರಶ್ನಿಸಲು ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸ್ಪಷ್ಟ ಉದ್ದೇಶದೊಂದಿಗೆ ಆರಂಭಗೊಂಡ Operation Sindoor ಗುರಿ ತಲುಪಿದ ಮೇಲೆ ಬೇಗನೆ ನಿಲ್ಲಿಸಲಾಯಿತು: IAF ಮುಖ್ಯಸ್ಥ

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

ಲಡಾಖ್: ಪತಿಯ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ವಾಂಗ್ಚುಕ್ ಪತ್ನಿ ಗೀತಾಂಜಲಿ

World Weightlifting Championships: ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು

ಆಡಳಿತ ವೈಫಲ್ಯದ ಲಾಭ ಪಡೆಯಲೂ ವಿಫಲವಾಗಿರುವ ಪ್ರತಿಪಕ್ಷ ಬಿಜೆಪಿ (ನೇರ ನೋಟ)

SCROLL FOR NEXT