ಕರ್ನಾಟಕ ಲೋಕಾಯುಕ್ತ 
ರಾಜ್ಯ

Google Pay, Phonepe ಮೂಲಕ ಲಂಚ: ಭ್ರಷ್ಟ ಅಧಿಕಾರಿಗಳಿಗೆ 'ಖೆಡ್ಡಾ' ತೋಡಲು ಉಪ ಲೋಕಾಯುಕ್ತ ಸಜ್ಜು!

ನ್ಯಾಯಮೂರ್ತಿ ವೀರಪ್ಪ ಅಧಿಕಾರಿಗಳ ಕಾರ್ಯ ವಿಧಾನವನ್ನು ಚೆನ್ನಾಗಿ ತಿಳಿದಿದ್ದಾರೆ. ಹೀಗಾಗಿ ಅಧಿಕಾರಿಗಳ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಲು ಅವರು ಈಗ ತಾಂತ್ರಿಕ ಸಿಬ್ಬಂದಿಯ ತಂಡವನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದಾರೆ.

ಬೆಂಗಳೂರು: ಬೆಳೆಯುತ್ತಿರುವ ತಂತ್ರಜ್ಞಾನದ ಜೊತೆ ಮುಂದುವರಿಯಲು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಸಜ್ಜಾಗಿದ್ದಾರೆ, ಜಿಲ್ಲೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳು ಲಂಚವಾಗಿ ಸ್ವೀಕರಿಸಿದ ಡಿಜಿಟಲ್ ಪಾವತಿಗಳನ್ನು ಪರಿಶೀಲಿಸುವ ಆಲೋಚನೆಯೊಂದಿಗೆ ಬಂದಿದ್ದಾರೆ.

ಡಿಜಿಟಲ್ ಪಾವತಿಗಳ ಮೂಲಕ ಲಕ್ಷಾಂತರ ರೂಪಾಯಿಗಳಲ್ಲಿ ಲಂಚ ಪಡೆದ ಅಧಿಕಾರಿಗಳನ್ನು ಅವರು ಭೇಟಿ ಮಾಡಿದ್ದಾರೆ. ಅಧಿಕಾರಿಗಳು ಉಪ ಲೋಕಾಯುಕ್ತರಿಂದ ದಾಳಿ ನಡೆಯಲಿದೆ ಎಂದು ತಿಳಿದಾಗಲೆಲ್ಲಾ ಅವರು ತಮ್ಮ ಫೋನ್‌ಗಳಿಂದ ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಮುಂತಾದ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳನ್ನು ತ್ವರಿತವಾಗಿ ರಿಮೂವ್ ಮಾಡುತ್ತಾರೆ.

ಆದರೆ ನ್ಯಾಯಮೂರ್ತಿ ವೀರಪ್ಪ ಅಧಿಕಾರಿಗಳ ಕಾರ್ಯ ವಿಧಾನವನ್ನು ಚೆನ್ನಾಗಿ ತಿಳಿದಿದ್ದಾರೆ. ಹೀಗಾಗಿ ಅಧಿಕಾರಿಗಳ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಲು ಅವರು ಈಗ ತಾಂತ್ರಿಕ ಸಿಬ್ಬಂದಿಯ ತಂಡವನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಪ್ಲಿಕೇಶನ್‌ಗಳನ್ನು ಮರುಸ್ಥಾಪಿಸಲು ಮತ್ತು ಯಾವುದೇ ಅನುಮಾನಾಸ್ಪದ ಹಣಕಾಸಿನ ವಹಿವಾಟುಗಳಿವೆಯೇ ಎಂದು ಪರಿಶೀಲಿಸಲು ಅವರು ತಾಂತ್ರಿಕ ಸಿಬ್ಬಂದಿಗೆ ಸೂಚಿಸುತ್ತಾರೆ. ಅವರಿಗೆ ಅವರ ಕಾರ್ಯದರ್ಶಿ ಅರವಿಂದ್ ಎನ್ ವಿ ಸಹಾಯ ಮಾಡುತ್ತಾರೆ.

ಮಂಡ್ಯ ಜಿಲ್ಲೆಗೆ ಇತ್ತೀಚೆಗೆ ಅವರು ಅನಿರೀಕ್ಷಿತ ಭೇಟಿ ನೀಡಿದಾಗ, ಸುಮಾರು 500 ಸರ್ಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಅಂತಹ ಅಪ್ಲಿಕೇಶನ್‌ಗಳನ್ನು ರಿಮೂವ್ ಮಾಡಿದ್ದರು. ತಾಂತ್ರಿಕ ಸಿಬ್ಬಂದಿ ಅವರೆಲ್ಲರನ್ನೂ ಅಪ್ಲಿಕೇಶನ್‌ಗಳನ್ನು ಮರುಸ್ಥಾಪಿಸುವಂತೆ ಮಾಡಿದರು. ಈ ವೇಳೆ ಅವರ ಸ್ನೇಹಿತರು ಮತ್ತು ಸಂಬಂಧಿಕರ ಖಾತೆಗಳಿಗೆ ಭಾರಿ ಲಂಚದ ಹಣ ವಹಿವಾಟು ನಡೆದಿರುವುದು ತಿಳಿದು ಬಂತು.

ಮಂಡ್ಯ ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕ ವಿ.ಎಸ್. ಬೈರೇಶ್ ಅವರು ನೌಕರರ ವಿರುದ್ಧ ದೂರುಗಳನ್ನು ಸ್ವೀಕರಿಸಿದರೂ, ಆದರೆ ಅವರಿಗೆ ಅಧಿಕಾರವಿರಲಿಲ್ಲ, ನೌಕರರ ವಿರುದ್ಧ ದೂರು ಸ್ವೀಕರಿಸಿದ ನಂತರ ಈ ಮಾಹಿತಿಯನ್ನು ಅವರು ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸದೆ, ಭೈರೇಶ್ ನೌಕರರನ್ನು ಎದುರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ, ಬಡ್ತಿ ನಿರೀಕ್ಷಿಸುತ್ತಿದ್ದ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಂದ ಹಣ ಪಡೆಯುತ್ತಿದ್ದರುಯ ಭೈರೇಶ್ ಸಂಬಳ ತಿಂಗಳಿಗೆ 90,000 ರೂ., ಆದರೆ ಅವರು ತಮ್ಮ ತಾಯಿಯ ಫೋನ್‌ನಿಂದ ಫೋನ್‌ಪೇ ಮೂಲಕ ಲಕ್ಷಾಂತರ ಹಣವನ್ನು ಪಡೆದಿರುವುದು ತಿಳಿದು ಬಂದಿದೆ.

ಮತ್ತೊಬ್ಬರು ಮಂಡ್ಯ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಾಬು ಎಂ, ಅವರು ತಮ್ಮ ಫೋನ್‌ಪೇ ಖಾತೆಯಲ್ಲಿ ತಮ್ಮ ನಿಜವಾದ ಸಂಬಳಕ್ಕಿಂತ ಹೆಚ್ಚಿನ ಡಿಜಿಟಲ್ ವಹಿವಾಟುಗಳನ್ನು ಹೊಂದಿದ್ದರು. ಅವರು ಮಹಿಳಾ ಉದ್ಯೋಗಿಗಳಿಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಇತರ ಉದ್ಯೋಗಿಗಳ ವಿರುದ್ಧ ಬಂದ ದೂರುಗಳನ್ನು ಅವರನ್ನು ರಕ್ಷಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ರವಾನಿಸಲಿಲ್ಲ ಎಂಬ ಆರೋಪ ಅವರ ಮೇಲಿದೆ.

ಬೈರೇಶ್ ಮತ್ತು ಬಾಬು ಇಬ್ಬರೂ ವಹಿವಾಟುಗಳಿಗೆ ಅನುಮತಿ ಪಡೆದಿರಲಿಲ್ಲ, ಅವರ ಆಸ್ತಿ ಮತ್ತು ಹೊಣೆಗಾರಿಕೆಗಳಲ್ಲಿ ಅವುಗಳನ್ನು ಉಲ್ಲೇಖಿಸಿಲ್ಲ, ಇದು ಕಾನೂನುಬಾಹಿರವಾಗಿದೆ.

ವೀರಪ್ಪ ಬಾಬು ಈಗ ಭ್ರಷ್ಟ ಅಧಿಕಾರಿಗಳ ಜೇಬುಗಳನ್ನು ಪರಿಶೀಲಿಸುವುದನ್ನು ನಿಲ್ಲಿಸಿದ್ದಾರೆ ಆದರೆ ಲಂಚದ ಅಸಹ್ಯ ಕಥೆಗಳನ್ನು ಬಹಿರಂಗಪಡಿಸುವ ಅವರ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು. ಬೆಂಗಳೂರು ಬಳಿಯ ನೆಲಮಂಗಲ ಪುರಸಭೆಗೆ ಭೇಟಿ ನೀಡಿದಾಗ ಪ್ರಾರಂಭವಾಯಿತು. ಅಲ್ಲಿನ ಅಧಿಕಾರಿಗಳು ತಮ್ಮ ಉನ್ನತ ಅಧಿಕಾರಿಗಳಿಂದ ಅಥವಾ ಸರ್ಕಾರದಿಂದ ಅಗತ್ಯ ಅನುಮೋದನೆಗಳನ್ನು ಪಡೆಯದೆ ಈ ಡಿಗ್-ಪೇಮೆಂಟ್ ಅಪ್ಲಿಕೇಶನ್‌ಗಳ ಮೂಲಕ ಅಪಾರ ಪ್ರಮಾಣದ ಹಣವನ್ನು ಪಡೆದಿದ್ದಾರೆ, ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳು, 2021 ರ ಅಡಿಯಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ತಮ್ಮ ಭೇಟಿಯ ನಂತರ ಸರ್ಕಾರಿ ಸಿಬ್ಬಂದಿ ಅಂತಹ ಅಪ್ಲಿಕೇಶನ್‌ಗಳನ್ನು ರಿಮೂವ್ ಸಾಮಾನ್ಯವಾಗಿದೆ ಎಂದು ಅವರು ಹೇಳಿದರು. ದಾವಣಗೆರೆ, ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ಈ ರೀತಿ ನಡೆದಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT