ಸಂಗ್ರಹ ಚಿತ್ರ 
ರಾಜ್ಯ

ಮದುವೆಯಾದಾಗ ನೀನು ಸುಂದರವಾಗಿದ್ದೆ, ಈಗ ದಪ್ಪ ಆಗಿದೀಯ: ಪತ್ನಿಗೆ ಪತಿ ಕಿರುಕುಳ-ಹಲ್ಲೆ, ಪ್ರಕರಣ ದಾಖಲು

ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ರಮ್ಯಶ್ರೀ 2021ರಲ್ಲಿ ಮ್ಯಾಟ್ರಿಮೋನಿ ಮೂಲಕ ಆಂಧ್ರ ಪ್ರದೇಶ ಪ್ರಕಾಶಂ ಜಿಲ್ಲೆ ಮೂಲದ ಬ್ಯಾಂಕ್ ನೌಕರ ಪುಲಿ ಸಾಯಿಕುಮಾರ್ ಎಂಬುವವರನ್ನ ಪರಿಚಯಿಸಿಕೊಂಡು ಇಬ್ಬರು ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷದ ಮಗುವಿದೆ.

ಬೆಂಗಳೂರು: ಮದುವೆಯಾದಾಗ ಸುಂದರವಾಗಿದ್ದೆ, ಈಗ ದಪ್ಪ ಆಗಿದ್ದೀಯ ಎಂದು ಪತ್ನಿಯ ಸೌಂದರ್ಯದ ವಿಚಾರಕ್ಕೆ ಪದೇ ಪದೇ ಗಲಾಟೆ ಮಾಡುತ್ತಿದ್ದ ಪತಿಯೊಬ್ಬ ಆಕೆಯ ಮೇಲೆ, ಹಾಗೂ ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದು, ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಮಹಿಳೆ ನೀಡಿದ ದೂರಿನ ಮೇರೆಗೆ ಪತಿ ಹಾಗೂ ಆತನ ಮನೆಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ರಮ್ಯಶ್ರೀ 2021ರಲ್ಲಿ ಮ್ಯಾಟ್ರಿಮೋನಿ ಮೂಲಕ ಆಂಧ್ರ ಪ್ರದೇಶ ಪ್ರಕಾಶಂ ಜಿಲ್ಲೆ ಮೂಲದ ಬ್ಯಾಂಕ್ ನೌಕರ ಪುಲಿ ಸಾಯಿಕುಮಾರ್ ಎಂಬುವವರನ್ನ ಪರಿಚಯಿಸಿಕೊಂಡು ಇಬ್ಬರು ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷದ ಮಗುವಿದೆ.

ಮಾ. 6 ರಂದು 3 ಲಕ್ಷ ತುರ್ತು ಹಣ ಬೇಕಿದೆ, ನಿಮ್ಮ ತಂದೆಯಿಂದ ಕೊಡಿಸುವಂತೆ ಸಾಯಿಕುಮಾರ್ ಒತ್ತಾಯಿಸಿದ್ದ. ಇದಕ್ಕೆ ನಿರಾಕರಿಸಿದಕ್ಕೆ ತನ್ನೊಂದಿಗೆ ಜಗಳವಾಡಿದ್ದ. ಕೊಲೆ ಮಾಡಿ ಜೈಲಿಗೆ ಹೋಗುವುದಾಗಿ ಚಾಕು ತೋರಿಸಿ ಬೆದರಿಸಿದ್ದ. ಭಯಪಟ್ಟು ಜೋರಾಗಿ ಕಿರುಚಿಕೊಂಡಿದ್ದು, ಮನೆಯಲ್ಲಿ ತಂದೆ ಮಧ್ಯಪ್ರವೇಶಿಸಿದಾಗ ಅಡುಗೆಮನೆಯಲ್ಲಿದ್ದ ಖಾರದಪುಡಿ ಎರಚಿ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.

ಎರಡು ವರ್ಷದಿಂದ ಹಣ ಹಾಗೂ ಸೌಂದರ್ಯದ ವಿಚಾರದಕ್ಕೆ ಆಗಾಗೆ ಜಗಳ ಮಾಡುತ್ತಿದ್ದು, ಈ ವೇಳೆ ಕೈಯಿಂದ ಹೊಡೆದು ಗಾಯ ಮಾಡಿದ್ದ, ಈ ಸಂಬಂಧ 2023ರಲ್ಲಿ ಆರ್. ಆರ್ ನಗರ ಪೊಲೀಸರಿಗೆ ದೂರು ನೀಡಿದ್ದೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT