ಗಾಯಗೊಂಡಿರುವ APSRTC ಚಾಲಕ ಎನ್ಆರ್ ಎಸ್ ರೆಡ್ಡಿ 
ರಾಜ್ಯ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ APSRTC ಚಾಲಕನ ಮೇಲೆ KSRTC ಡ್ರೈವರ್ ಹಲ್ಲೆ; ಅಮಾನತು

ಬೆಂಗಳೂರು ಬಸ್ ನಿಲ್ದಾಣದಲ್ಲಿ ಚಾಲಕರ ನಡುವೆ ವಾಗ್ವಾಗ ಆರಂಭವಾಯಿತು. ಪ್ರೊದಟ್ಟೂರು ಡಿಪೋದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಅಂದ್ರ ಪ್ರದೇಶ ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೆ ಬೆಂಗಳೂರಿನಲ್ಲಿ ಕೆಎಸ್ ಆರ್ ಟಿ ಸಿ ಚಾಲಕ ಹಲ್ಲೆ ನಡೆಸಿದ್ದು, ಈ ಸಂಬಂಧ KSRTC ಚಾಲಕ ಅಮಾನತುಗೊಳಿಸಲಾಗಿದೆ.

ಬೆಂಗಳೂರು ಬಸ್ ನಿಲ್ದಾಣದಲ್ಲಿ ಚಾಲಕರ ನಡುವೆ ವಾಗ್ವಾಗ ಆರಂಭವಾಯಿತು. ಪ್ರೊದಟ್ಟೂರು ಡಿಪೋದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗುರುವಾರ ರಾತ್ರಿ 10:45 ರ ಸುಮಾರಿಗೆ ಈ ಘಟನೆ ನಡೆದಿದ್ದು, ಹಲ್ಲೆ ಮಾಡಿದ್ದ ಕೆಎಸ್ ಆರ್‌ಟಿಸಿ ಚಾಲಕ ಹನುಮಂತು ಬೆಲಿವಿಡಿ ಅವರನ್ನು ಅಮಾನತುಗೊಳಿಸಲಾಗಿದೆ.

ಕದಿರಿ ಡಿಪೋದ ಆರ್‌ಟಿಸಿ ಚಾಲಕ ಎನ್‌ಆರ್‌ಎಸ್ ರೆಡ್ಡಿ ತಮ್ಮ ಬಸ್ ಅನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿದ್ದರು. ಈ ವೇಳೆ ಹನುಮಂತು ತಪ್ಪು ಮಾರ್ಗದಿಂದ ಆ ಪ್ರದೇಶಕ್ಕೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಘರ್ಷಣೆ ಪ್ರಾರಂಭವಾಯಿತು. ಕದಿರಿ ಬಸ್ ತನ್ನ ದಾರಿಯನ್ನು ತಡೆಯುತ್ತಿದ್ದರಿಂದ ಸಿಟ್ಟಿಗೆದ್ದ ಹನುಮಂತು ಚಾಲಕನಿಗೆ ನಿಂದಿಸಿದ್ದಾರೆ. ಈ ವೇಳೆ ಕಡಪ ಮತ್ತು ಪ್ರೊದಟ್ಟೂರು ಆರ್‌ಟಿಸಿ ಚಾಲಕರು ಕದಿರಿ ಚಾಲಕನಿಗೆ ಬೆಂಬಲ ನೀಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ವಾಗ್ವಾದದ ಸಮಯದಲ್ಲಿ, ಹನುಮಂತು ಎನ್‌ಆರ್‌ಎಸ್ ರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿ, ವೋಲ್ವೋ ಬಸ್ ಗೇರ್ ಲಿವರ್‌ನಿಂದ ಅವರ ತಲೆಗೆ ಹೊಡೆದು ತೀವ್ರ ಗಾಯಗಳಾಗಿದ್ದವು. ರಾತ್ರಿ 11:20 ಕ್ಕೆ, ಸಹ ಚಾಲಕರು ಮತ್ತು ರೆಡ್ಡಿ ಅವರನ್ನು ಚಿಕಿತ್ಸೆಗಾಗಿ ಶ್ರೀನಿವಾಸ ಆಸ್ಪತ್ರೆಗೆ ಕರೆದೊಯ್ದರು.

ಪ್ರಾಥಮಿಕ ಆರೈಕೆಯ ನಂತರ, ಅವರನ್ನು ರನ್ನಿಂಗ್ ರೂಮ್‌ಗೆ ಸ್ಥಳಾಂತರಿಸಲಾಯಿತು. ಶುಕ್ರವಾರ, ಕೆಎಸ್ ಆರ್ ಟಿಸಿ ಅಧಿಕಾರಿಗಳು ರೆಡ್ಡಿ ಅವರನ್ನು ವಿಚಾರಣೆಗೆ ಕರೆದಿದ್ದರು. ಈ ವೇಳೆ ತಲೆ ಸುತ್ತುತ್ತಿದೆ ಎಂದು ರೆಡ್ಡಿ ತಿಳಿಸಿದ್ದಾರೆ, ಆ ನಂತರ ಮಲ್ಲಿಗೆ ಆಸ್ಪತ್ರೆಗೆ ಸಿಟಿ ಸ್ಕ್ಯಾನ್‌ಗಾಗಿ ಕರೆದೊಯ್ಯಲಾಯಿತು, ಪರೀಕ್ಷೆ ನಂತರ ಅವರಿಗೆ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳಿಲ್ಲ ಎಂದು ತಿಳಿಸಲಾಯಿತು.

ಜಿಲ್ಲಾ ಸಾರ್ವಜನಿಕ ಸಾರಿಗೆ ಅಧಿಕಾರಿ ಗೋಪಾಲ್ ರೆಡ್ಡಿ ಅವರು ಆರ್‌ಟಿಸಿ ಎಂಡಿ ದ್ವಾರಕಾ ತಿರುಮಲ ರಾವ್ ಮತ್ತು ಕಡಪ ಆರ್‌ಟಿಸಿ ವಲಯ ಅಧ್ಯಕ್ಷ ಪೂಲಾ ನಾಗರಾಜು ಅವರಿಗೆ ಮಾಹಿತಿ ನೀಡಿದರು, ಅವರು ರೆಡ್ಡಿಗೆ ವೈದ್ಯಕೀಯ ಆರೈಕೆ ಮತ್ತು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಗಾಯಗೊಂಡ ಚಾಲಕನನ್ನು ಭೇಟಿ ಮಾಡಿದ ನಾಗರಾಜು ಧೈರ್ಯ ತುಂಬಿದರು.

ಕರ್ನಾಟಕ ಆರ್‌ಟಿಸಿ ಅಧಿಕಾರಿಗಳು ಹನುಮಂತು ಬೆಲಿವಿಡಿ ಅವರನ್ನು ಅಮಾನತುಗೊಳಿಸಿದರು. ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಆರ್‌ಟಿಸಿ ಅಗತ್ಯ ಸಹಾಯವನ್ನು ನೀಡಲಿದೆ ಎಂದು ಗೋಪಾಲ್ ರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್