ರಿಜ್ವಾನ್ ಅರ್ಷದ್ 
ರಾಜ್ಯ

ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ವಾಪಸ್: ರಾಜ್ಯಪಾಲರ ಅನುಮಾನ ಪರಿಹರಿಸಲು ಸದನ ಸಮಿತಿ ಸಿದ್ಧ- ಶಾಸಕ ರಿಜ್ವಾನ್

ಅಸಮಾನ ಆದಾಯ ವಿತರಣೆಯಿಂದಾಗಿ ದೆಹಲಿ ನಾಗರಿಕ ಸಂಸ್ಥೆಯನ್ನು ಮೂರು ಭಾಗವಾಗಿ ವಿಭಜನೆ ಮಾಡಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಕುರಿತು ರಾಜ್ಯಪಾಲರ ಕಳವಳ ಪರಿಹರಿಸಲು ಸದನ ಸಮಿತಿ ಸಿದ್ಧವಾಗಿದೆ ಎಂದು ಶಾಸಕಾಂಗ ಸಮಿತಿಯ ಮುಖ್ಯಸ್ಥರಾಗಿರುವ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ರಾಜ್ಯಪಾಲರು ಮಸೂದೆಯನ್ನು ತಿರಸ್ಕರಿಸಿಲ್ಲ, ಬದಲಿಗೆ ಕೆಲವು ನಿರ್ದಿಷ್ಟ ಸ್ಪಷ್ಟೀಕರಣಗಳನ್ನು ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ವಿಶೇಷವಾಗಿ 74 ನೇ ತಿದ್ದುಪಡಿಯ ಬಗೆಗಿರುವ ಆತಂಕದ ಬಗ್ಗೆ ವಿವರಿಸಿದ್ದಾರೆ. ಕಾಯ್ದೆಯ ಬಗ್ಗೆ ಯಾವುದೇ ನಿಖರವಾದ ಅಂಶವನ್ನು ಎತ್ತಲಾಗಿಲ್ಲ. ಮಸೂದೆಯಲ್ಲಿನ ಸಾಂವಿಧಾನಿಕ ನ್ಯೂನತೆಗಳ ಹಕ್ಕು ಇಲ್ಲ ಎಂದರು.

ಕಾಂಗ್ರೆಸ್ ಸರ್ಕಾರವು ಮೊದಲು ಮಸೂದೆಯಲ್ಲಿ ಪರಿಚಯಿಸಿದ ಪ್ರಸ್ತಾವಿತ ಮೆಟ್ರೋಪಾಲಿಟನ್ ಯೋಜನೆ ಕುರಿತ ಬಗ್ಗೆ ಮಾತನಾಡಿದ ಅವರು, ಅರ್ಷದ್ ನೇತೃತ್ವದ ಸಮಿತಿಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಹಾನಗರ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು. "ಮುಂದೆ ಅದರ ಎಲ್ಲಾ ಅಂಶಗಳನ್ನು ನಾವು ಪರಿಗಣಿಸುತ್ತೇವೆ," ಎಂದು ಅವರು ಹೇಳಿದರು, ಸಮಿತಿಯು ಮಸೂದೆಯನ್ನು ಪರಿಷ್ಕರಿಸಲು ಮುಕ್ತವಾಗಿದೆ ಎಂದು ಸೂಚಿಸಿದರು. ಅತ್ಯಂತ ವಿವಾದಾತ್ಮಕ ವಿಷಯವೆಂದರೆ ಬಿಬಿಎಂಪಿ ವಿಭಜನೆ ಎಂದು ತೋರುತ್ತದೆ, ಇದು ವಿಮರ್ಶಕರ ಪ್ರಕಾರ, ದೆಹಲಿ ನಾಗರಿಕ ಸಂಸ್ಥೆಯ ಹಾದಿಗೆ ಹೋಗುತ್ತದೆ.

ಅಸಮಾನ ಆದಾಯ ವಿತರಣೆಯಿಂದಾಗಿ ದೆಹಲಿ ನಾಗರಿಕ ಸಂಸ್ಥೆಯನ್ನು ಮೂರು ಭಾಗವಾಗಿ ವಿಭಜನೆ ಮಾಡಲಾಗಿದೆ ಎಂದು ಅವರು ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ, ಬೆಂಗಳೂರಿನ ಭವಿಷ್ಯಕ್ಕಾಗಿ ಸಮತೋಲಿತ ವಿಧಾನವನ್ನು ಖಚಿತಪಡಿಸಿಕೊಳ್ಳುವ ಮೂಲಕ ನಾವು ಅದನ್ನು ಎಚ್ಚರಿಕೆಯಿಂದ ಲೆಕ್ಕ ಹಾಕಿದ್ದೇವೆ. ಆಡಳಿತಾತ್ಮಕ ದಕ್ಷತೆಗಾಗಿ ಬೆಂಗಳೂರನ್ನು ವಿಭಜಿಸಬೇಕಾಗಿದೆ ಮತ್ತು ನಾವು ಎಲ್ಲಾ ಆಕ್ಷೇಪಣೆಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದೇವೆ" ಎಂದು ಅವರು ಹೇಳಿದರು.

ಮಸೂದೆಯ ಕುರಿತು ರಾಜ್ಯಪಾಲರು ಕೆಲವು ಸ್ಪಷ್ಟೀಕರಣಗಳನ್ನು ಕೋರಿದ್ದಾರೆ, ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿಲ್ಲ ಎಂದು ಪುನರುಚ್ಚರಿಸಿದ ಅವರು, "ನಾವು ಎಲ್ಲಾ ಸ್ಪಷ್ಟೀಕರಣಗಳನ್ನು ನೀಡಲು ಸಂಪೂರ್ಣವಾಗಿ ಸಿದ್ಧರಿದ್ದೇವೆ. ಆತಂಕಕ್ಕೆ ಯಾವುದೇ ಕಾರಣವಿಲ್ಲ" ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT