ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಸೇವಾ ಶುಲ್ಕ ಕೈಬಿಡಬೇಕು: ಬಿಬಿಎಂಪಿಗೆ BNP ಒತ್ತಾಯ

ತ್ಯಾಜ್ಯವನ್ನು ಉತ್ಪಾದಿಸದ ಅಥವಾ ಬಿಬಿಎಂಪಿಯ ಸೇವೆ ಪಡೆಯದ ನಾಗರಿಕರಿಗೆ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ ವಸೂಲಿ ವಿರೋಧಿಸಿ #IWontPayಶೀರ್ಷಿಕೆಯಡಿ ಅಭಿಯಾನ ಆರಂಭಿಸಿದೆ.

ಬೆಂಗಳೂರು: ಬಿಬಿಎಂಪಿಯು ತ್ಯಾಜ್ಯ ಬಳಕೆದಾರರ ಶುಲ್ಕ ನಿಗದಿಪಡಿಸಿ, ವಸೂಲಿ ಮಾಡುತ್ತಿರುವುದಕ್ಕೆ ಬೆಂಗಳೂರು ನವ ನಿರ್ಮಾಣ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ.

ತ್ಯಾಜ್ಯವನ್ನು ಉತ್ಪಾದಿಸದ ಅಥವಾ ಬಿಬಿಎಂಪಿಯ ಸೇವೆ ಪಡೆಯದ ನಾಗರಿಕರಿಗೆ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ ವಸೂಲಿ ವಿರೋಧಿಸಿ #IWontPayಶೀರ್ಷಿಕೆಯಡಿ ಆರಂಭಿಸಿರುವ ಅಭಿಯಾನಕ್ಕೆ ನಗರದಾದ್ಯಂತ 2,800 ಕ್ಕೂ ಹೆಚ್ಚು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ.

ಇದು ಶೋಷಣೆಯಾಗಿದ್ದು, ಯಾರು ಪಾವತಿಸಬೇಕು ಮತ್ತು ಯಾರು ಪಾವತಿಸಬಾರದು ಎಂದು ತಿಳಿಯದೆ ಬಿಬಿಎಂಪಿ ಹೇಗೆ ಶುಲ್ಕವನ್ನು ಸಂಗ್ರಹಿಸುತ್ತದೆ ಎಂದು BNP ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್ ಹೇಳಿದ್ದಾರೆ.

ನಾಗರಿಕರ ತೀವ್ರ ವಿರೋಧದ ನಂತರ ಏಪ್ರಿಲ್ 20, 2025 ರ ಸುಮಾರಿಗೆ 'ಬೃಹತ್-ತ್ಯಾಜ್ಯ ಉತ್ಪಾದಕರು' ಎಂಬ ವಿನಾಯಿತಿಯನ್ನು ಪರಿಚಯಿಸಲಾಗಿದೆ. ಈ ಹೊತ್ತಿಗೆ ಬೃಹತ್ ತ್ಯಾಜ್ಯ ಉತ್ಪಾದಕ ಎಂದು ವರ್ಗೀಕರಿಸಲಾದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಸಾವಿರಾರು ನಿವಾಸಿಗಳು ಈಗಾಗಲೇ ಶುಲ್ಕವನ್ನು ಪಾವತಿಸಿದ್ದಾರೆ. ಹಲವರು ದುಪ್ಪಟ್ಟು ಪಾವತಿ ಮಾಡಿದ್ದಾರೆ. ಸಣ್ಣ ಅಪಾರ್ಟ್ಮೆಂಟ್ ಸಂಕೀರ್ಣಗಳನ್ನು (100 ಯೂನಿಟ್‌ಗಳ ಅಡಿಯಲ್ಲಿ) ಬೃಹತ್ ತ್ಯಾಜ್ಯ ಉತ್ಪಾದಕರಾಗಿ ಗುರುತಿಸಲ್ಪಟ್ಟಿಲ್ಲ ಅಥವಾ ಸ್ಪಷ್ಟತೆ ನೀಡಲಾಗಿಲ್ಲ, ಇದು ಮತ್ತೆ ಡಬಲ್ ಬಿಲ್ಲಿಂಗ್‌ಗೆ ಕಾರಣವಾಗುತ್ತದೆ. ಯಾವುದೇ ತ್ಯಾಜ್ಯವನ್ನು ಉತ್ಪಾದಿಸದಿದ್ದರೂ ಖಾಲಿ ಪ್ಲಾಟ್ ಮಾಲೀಕರಿಗೆ SWM ಶುಲ್ಕವನ್ನು ವಿಧಿಸಲಾಗಿದೆ ಎಂದು ಅವರು ದೂರಿದ್ದಾರೆ.

"ಬಿಬಿಎಂಪಿ ತಾನು ಒದಗಿಸದ ಸೇವೆಗಾಗಿ ಜನರಿಗೆ ಬಿಲ್ ನೀಡುವುದು ಹೇಗೆ ಸಮರ್ಥಿಸಿಕೊಳ್ಳುತ್ತದೆ? ಯಾವುದೇ ಹೊಣೆಗಾರಿಕೆ ಇಲ್ಲ, ಸಂವಹನವಿಲ್ಲ, ಮೂಲ ತರ್ಕವೂ ಇಲ್ಲದಂತಾಗಿದೆ. ಚುನಾಯಿತ ಬಿಬಿಎಂಪಿ ಕೌನ್ಸಿಲ್ ಇಲ್ಲದೆ, ಸರ್ಕಾರವು ಏಕಪಕ್ಷೀಯವಾಗಿ ಪಾರ್ಕಿಂಗ್ ಶುಲ್ಕ ಮತ್ತು ಕಸ ಬಳಕೆದಾರರ ಶುಲ್ಕದಂತಹ ಹೊಸ ಶುಲ್ಕಗಳನ್ನು ವಿಧಿಸುತ್ತಿದೆ ಎಂದು BNP ಆಡಳಿತ ಮಂಡಳಿಯ ಸದಸ್ಯ ಪೂಂಗೋಥೈ ಪರಮಶಿವನ್ ಹೇಳಿದ್ದಾರೆ.

ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಸೇವಾ ಶುಲ್ಕ ಕೈಬಿಡಬೇಕು ಮತ್ತು ಈ ವರ್ಷ ತಪ್ಪಾಗಿ ಸಂಗ್ರಹಿಸಿದ ಶುಲ್ಕವನ್ನು ಪೂರ್ಣ ಮರುಪಾವತಿ ಮಾಡಬೇಕು ಎಂದು ಆಗ್ರಹಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮತ್ತು ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರಿಗೆ ಬೆಂಗಳೂರು ನವ ನಿರ್ಮಾಣ ಪಕ್ಷ ಪತ್ರದ ಮೂಲಕ ಒತ್ತಾಯಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನರವಾಣೆ ಪುಸ್ತಕಕ್ಕೆ ಹೆದರಿ ಮೋದಿ ಲೋಕಸಭೆಗೆ ಗೈರು, ಭದ್ರತಾ ಕಾರಣದಿಂದ ಅಲ್ಲ: ರಾಹುಲ್ ಗಾಂಧಿ

'ಮತದಾರರ ತೀವ್ರ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡಲ್ಲ': ಮಮತಾ ಸರ್ಕಾರಕ್ಕೆ 'ಸುಪ್ರೀಂ' ಶಾಕ್

Sensex 485, Nifty 173 ಅಂಕ ಏರಿಕೆ, ಟೈಟನ್ ಷೇರು ಮೌಲ್ಯ ಶೇ.3%, ಅಲ್ಟ್ರಾಟೆಕ್ ಷೇರು ಮೌಲ್ಯ ಶೇ.2%ರಷ್ಟು ಏರಿಕೆ!

ಮೆಟ್ರೋ ಪ್ರಯಾಣ ದರ ಏರಿಕೆ ತಡೆದಿದ್ದು ನಾವೇ, ಕೇಂದ್ರ ಸರ್ಕಾರದ ಪಾತ್ರ ಇಲ್ಲ: DCM DK Shivakumar

ಸಂಸತ್ತಿನಲ್ಲಿ ಕೋಲಾಹಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಂದ ಸಭಾತ್ಯಾಗ; ಲೋಕಸಭೆ ನಾಳೆಗೆ ಮುಂದೂಡಿಕೆ

SCROLL FOR NEXT