ಶಾಲೆಯಲ್ಲಿ ಪಾಠ ಕೇಳುತ್ತಿರುವ ಮಕ್ಕಳು 
ರಾಜ್ಯ

ಗದಗ: ಒಂದೇ ಕಟ್ಟಡದಲ್ಲಿ ಶಾಲಾ ತರಗತಿ ಮತ್ತು ಗ್ರಾಮ ಪಂಚಾಯತ್ ಕಚೇರಿ; ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

ವಿದ್ಯಾರ್ಥಿಗಳು ಎರಡು ಸಣ್ಣ ಕೊಠಡಿಗಳಲ್ಲಿ ಒಟ್ಟಿಗೆ ಕೂರುತ್ತಾರೆ , ಕಟ್ಟಡದಲ್ಲಿ ಗ್ರಾಮ ಪಂಚಾಯತ್ ಕಚೇರಿ ಕೂಡ ಇದೆ. ಈ ಸಂಬಂಧ ಹಲವು ಮನವಿಗಳನ್ನು ಮಾಡಲಾಗಿದೆ,

ಗದಗ: ಬಹುಶಃ ಇದು ಹೊಸ ಶಿಕ್ಷಣ ನೀತಿಯಾಗಿರುವಂತೆ ಕಾಣುತ್ತದೆ. ಏಕೆಂದರೆ ಗದಗ ಜಿಲ್ಲೆಯ ಕಣಗಿನಹಾಳ ಎಂಬ ಹಳ್ಳಿಯಲ್ಲಿ, ಸ್ಥಳೀಯ ಸರ್ಕಾರಿ ಶಾಲೆಯ ಸುಮಾರು 82 ವಿದ್ಯಾರ್ಥಿಗಳು ಕ್ಯಾಸ್ 1 ರಿಂದ 5 ನೇ ತರಗತಿಯವರೆಗೆ ಪ್ರತಿದಿನ ಸಾಮಾನ್ಯ ಆಡಳಿತದ ಪಾಠಗಳನ್ನು ಕಲಿಯುತ್ತಿದ್ದಾರೆ.

ವಿದ್ಯಾರ್ಥಿಗಳು ಸ್ವತಃ ಎರಡು ಸಣ್ಣ ಕೊಠಡಿಗಳಲ್ಲಿ ಒಟ್ಟಿಗೆ ಸೇರಿದ್ದಾರೆ, ಕಟ್ಟಡದಲ್ಲಿ ಗ್ರಾಮ ಪಂಚಾಯತ್ ಕಚೇರಿ ಕೂಡ ಇದೆ. ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಹಲವು ಮನವಿಗಳನ್ನು ಮಾಡಲಾಗಿದೆ, ಆದರೆ ಅಧಿಕಾರಿಗಳು ಇನ್ನೂ ಈ ಕಡೆ ಗಮನ ಹರಿಸಲಿಲ್ಲ. ಹೀಗಾಗಿ ವಿದ್ಯಾರ್ಥಿಗಳ ದುಃಸ್ಥಿತಿ ಇನ್ನೂ ಕೊನೆಗೊಂಡಿಲ್ಲ.

ಶಾಲೆಯಲ್ಲಿ ಕೇವಲ ಎರಡು ಉತ್ತಮ ಕೊಠಡಿಗಳಿವೆ. ಒಂದು ತರಗತಿಯಲ್ಲಿ 1, 2 ಮತ್ತು 3 ನೇ ತರಗತಿಯ ವಿದ್ಯಾರ್ಥಿಗಳು ನಿಜವಾದ ಪ್ರಜಾಪ್ರಭುತ್ವ ಮನೋಭಾವದಿಂದ ಒಟ್ಟಿಗೆ ಕುಳಿತು ಪಾಠ ಕೇಳುತ್ತಾರೆ. ಇನ್ನೊಂದು ಕೋಣೆಯಲ್ಲಿ, 4, 5 ನೇ ತರಗತಿಯ ವಿದ್ಯಾರ್ಥಿಗಳು ಒಟ್ಟುಗೂಡಿ ಕುಳಿತುಕೊಳ್ಳುತ್ತಾರೆ.

ಇದರ ಜೊತೆಗೆ ಗ್ರಾಮಸ್ಥರು ತಮ್ಮ ದೈನಂದಿನ ಕೆಲಸ ಕಾರ್ಯಗಳಗಾಗಿ ಪಂಚಾಯತ್ ಕಚೇರಿಗೆ ಬರುತ್ತಾರೆ. ಜಾತಿ ಪ್ರಮಾಣಪತ್ರ ಪಡೆಯುವುದು, ಫಾರ್ಮ್ ಭರ್ತಿ ಮಾಡುವುದು ಮತ್ತು ಅಂತಹ ಹಲವಾರು ಅಗತ್ಯಗಳು ಅವರಿಗಿರುತ್ತವೆ.

ಪೋಷಕರು ಗ್ರಾಮ ಪಂಚಾಯಿತಿ ಕಚೇರಿಯನ್ನು ಸ್ಥಳಾಂತರಿಸಲು ಮತ್ತು ಶಿಥಿಲಗೊಂಡ ತರಗತಿ ಕೊಠಡಿಗಳನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಮೊದಲು ಶಿಥಿಲಗೊಂಡ ಕಟ್ಟಡದಲ್ಲಿ ಇದ್ದಿದ್ದರಿಂದ ಅದನ್ನು ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಯಿತು ಎಂದು ಗ್ರಾಮ ಪಂಚಾಯತ್ ಅಧಿಕಾರಿಯೊಬ್ಬರು ಹೇಳಿದರು.

ನಾವು ಇದನ್ನು ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದ್ದಿದ್ದಾರೆ. ಬಲವಾದ ಸಹಕಾರಿ ಚಳುವಳಿಯ ಇತಿಹಾಸವನ್ನು ಹೊಂದಿರುವ ಕನಗಿನಹಾಳ್ ಈಗ ತಮ್ಮ ಮಕ್ಕಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಾಮೂಹಿಕವಾಗಿ ಪ್ರಯತ್ನ ಮಾಡಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅತ್ಯಾಧುನಿಕ'ಆಕಾಶ್-ಎನ್ ಜಿ ಕ್ಷಿಪಣಿ' ವ್ಯವಸ್ಥೆ ಯಶಸ್ವಿ ಪರೀಕ್ಷೆ: ಭಾರತೀಯ ಸೇನೆಗೆ ಮತ್ತಷ್ಟು ಬಲ! Video

ಅಸ್ಸಾಂನಲ್ಲಿ ಹಿಂಸಾತ್ಮಕ ಪ್ರತಿಭಟನೆ: ವಿಶೇಷಚೇತನ ವ್ಯಕ್ತಿ ಸೇರಿ ಇಬ್ಬರು ಸಾವು; 45 ಕ್ಕೂ ಹೆಚ್ಚು ಮಂದಿಗೆ ಗಾಯ

ಪಾಕ್ ಗೆ ಭಾರತದ ನೌಕಪಡೆಯ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ: ಉಡುಪಿಯಲ್ಲಿ ಮೂರನೇ ಆರೋಪಿ ಬಂಧನ

'ಅವರಿಗಾಗಿ' ಒಂದೇ ಒಂದು ಶಾಟ್ ಗೆ ಕರೆದರೂ ಖುಷಿಯಾಗಿ ಮಾಡುತ್ತೇನೆ: ಸ್ಕ್ರೀನ್‌ಟೈಮ್‌ ಬಗ್ಗೆ ನನಗೆ ಬೇಸರವಿಲ್ಲ- ಉಪೇಂದ್ರ

ಸಾರಿಗೆ ನಿಗಮ ಮಹಿಳಾ ನೌಕರರಿಗೆ Good News: ಋತುಚಕ್ರದ ರಜೆಗೆ ಸರ್ಕಾರ ಒಪ್ಪಿಗೆ, ಜನವರಿ 1ರಿಂದ ಸೌಲಭ್ಯ ಲಭ್ಯ..!

SCROLL FOR NEXT