ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮಿನಿ ಮೃಗಾಲಯದಲ್ಲಿ (ಕೆಆರ್‌ಸಿಎಂ) 31 ಕೃಷ್ಣಮೃಗಗಳ ಸಾವು 
ರಾಜ್ಯ

ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು: ಸೆಪ್ಟೆಂಬರ್‌ನಲ್ಲಿ ನೀಡಲಾಗಿದ್ದ ಎಚ್ಚರಿಕೆ ನಿರ್ಲಕ್ಷ್ಯ!

ಬೆಳಗಾವಿ ಜಿಲ್ಲೆಯಲ್ಲಿ ಜಾನುವಾರು ಮತ್ತು ವನ್ಯಜೀವಿಗಳಲ್ಲಿ ಬ್ಯಾಕ್ಟೀರಿಯಾದ ಸೋಂಕು - ಹೆಚ್ ಎಸ್ ಏಕಾಏಕಿ ಸಂಭವಿಸಬಹುದು ಎಂದು ಮುನ್ಸೂಚನೆ ನೀಡಿದ್ದವು ಎಂದು TNIE ಗೆ ವಿಶ್ವಾಸನೀಯ ಮೂಲಗಳಿಂದ ತಿಳಿಬಂದಿದೆ.

ಬೆಂಗಳೂರು: ಕಳೆದ ಸೆಪ್ಟೆಂಬರ್‌ನಲ್ಲಿ ನೀಡಲಾಗಿದ್ದ ಹೆಮರಾಜಿಕ್ ಸೆಪ್ಟಿಸೆಮಿಯಾ (HS) ಸಂಭವನೀಯ ದುರಂತದ ಬಗ್ಗೆ ನೀಡಿದ್ದ ಎಚ್ಚರಿಕೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಜಾಗ್ರತೆ ವಹಿಸಿದ್ದರೆ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮಿನಿ-ಝೂ (KRCM) ನಲ್ಲಿ 31 ಕೃಷ್ಣಮೃಗಗಳ ಸಾವನ್ನು ತಪ್ಪಿಸಬಹುದಾಗಿತ್ತು.

ಐಸಿಎಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ & ಡಿಸೀಸ್ ಇನ್ಫರ್ಮ್ಯಾಟಿಕ್ಸ್(ರಕ್ತಸ್ರಾವದ ಸೆಪ್ಟಿಸೆಮಿಯಾ) (NIVEDI) ಬೆಂಗಳೂರಿನಿಂದ ಅಭಿವೃದ್ಧಿಪಡಿಸಲಾದ ರಾಷ್ಟ್ರೀಯ ಪ್ರಾಣಿ ರೋಗ ಉಲ್ಲೇಖ ತಜ್ಞರ ವ್ಯವಸ್ಥೆ (NADRES) ಹವಾಮಾನ ಬದಲಾವಣೆಗಳು ಸೇರಿದಂತೆ ಹಲವಾರು ನಿಯತಾಂಕಗಳನ್ನು ಆಧರಿಸಿ ಬೆಳಗಾವಿ ಜಿಲ್ಲೆಯಲ್ಲಿ ಜಾನುವಾರು ಮತ್ತು ವನ್ಯಜೀವಿಗಳಲ್ಲಿ ಬ್ಯಾಕ್ಟೀರಿಯಾದ ಸೋಂಕು - ಹೆಚ್ ಎಸ್ ಏಕಾಏಕಿ ಸಂಭವಿಸಬಹುದು ಎಂದು ಮುನ್ಸೂಚನೆ ನೀಡಿದ್ದವು ಎಂದು TNIE ಗೆ ವಿಶ್ವಾಸನೀಯ ಮೂಲಗಳಿಂದ ತಿಳಿಬಂದಿದೆ.

"NADRES-NIVEDI ಸೆಪ್ಟೆಂಬರ್‌ನಲ್ಲಿ ರಾಜ್ಯ ಪಶುಸಂಗೋಪನಾ ಇಲಾಖೆ, ರೈತರು ಮತ್ತು ಪಶುವೈದ್ಯರು ಸೇರಿದಂತೆ ಇತರ ಸಂಬಂಧಪಟ್ಟವರಿಗೆ 'ವೆಟ್ ಅಲರ್ಟ್' ನೀಡಿದ್ದವು. ಈ ತಿಂಗಳು ಮತ್ತೆ ಸಲಹೆಯನ್ನು ನೀಡಲಾಗಿತ್ತು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉನ್ನತ ಮೂಲಗಳು TNIE ಗೆ ತಿಳಿಸಿವೆ. ಸಕಾಲಕ್ಕೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೆ HS ಅನ್ನು ಸಾವುನೋವುಗಳಿಲ್ಲದೆ ನಿರ್ವಹಿಸಬಹುದಿತ್ತು. ಹಾರ್ಡ್ ಕಾಪಿಗಳು ಮತ್ತು ಸಾಫ್ಟ್ ಕಾಪಿಗಳಿಂದ SMS ವರೆಗಿನ ಎಲ್ಲಾ ರೀತಿಯ ಸಂವಹನ ಮಾರ್ಗಗಳನ್ನು ಎಲ್ಲಾ ಪಾಲುದಾರರಿಗೆ ಮುಂಚಿನ ಎಚ್ಚರಿಕೆ/ಸಲಹೆಗಳನ್ನು ಕಳುಹಿಸಲು ಬಳಸಲಾಗುತ್ತದೆ" ಎಂದು ಮೂಲಗಳು ತಿಳಿಸಿವೆ.

'ಹವಾಮಾನ ಬದಲಾವಣೆ, ಸೋಂಕಿನ ಹಿಂದೆ ನೈರ್ಮಲ್ಯದ ಕೊರತೆ'

"ಬ್ಯಾಕ್ಟೀರಿಯಾದ ಸೋಂಕಾದ HS ಹರಡಲು ಕಾರಣಗಳಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾಗುವ ಒತ್ತಡ (ಹವಾಮಾನ ಏರಿಳಿತಗಳು, ತಾಪಮಾನದಲ್ಲಿ ಹಠಾತ್ ಕುಸಿತ), ಉತ್ತಮ, ಸ್ವಚ್ಛವಾದ ಆಶ್ರಯಗಳ ಕೊರತೆ, ನೈರ್ಮಲ್ಯ ಇತ್ಯಾದಿ ಸೇರಿವೆ. ಹೆಚ್ ಎಸ್ ಗೆ ಕಾರಣವಾಗುವ ಹವಾಮಾನ ಏರಿಳಿತಗಳಿಂದಾಗಿ ಪ್ರಾಣಿಗಳು ಉಸಿರಾಟದ ತೊಂದರೆಯನ್ನು ಬೆಳೆಸಿಕೊಳ್ಳುತ್ತವೆ. ಬ್ಯಾಕ್ಟೀರಿಯಾದ ಸೋಂಕಿಗೆ ಲಸಿಕೆಗಳಿವೆ. ಹೆಚ್ ಎಸ್ ಇರುವ ಪ್ರಾಣಿಯನ್ನು ಅದರ ಹರಡುವಿಕೆಯನ್ನು ತಡೆಗಟ್ಟಲು ಉಳಿದವುಗಳಿಂದ ಪ್ರತ್ಯೇಕಿಸಬೇಕು ಎಂದು ಮೂಲಗಳು ತಿಳಿಸಿವೆ.

ಏನಿದು ಹೆಚ್ ಎಸ್ , Hemorrhagic Septicemia (HS)

ಹೆಮರಾಜಿಕ್ ಸೆಪ್ಟಿಸೆಮಿಯಾ (HS) ಒಂದು ತೀವ್ರವಾದ, ಹೆಚ್ಚು ಮಾರಕ ಬ್ಯಾಕ್ಟೀರಿಯಾದ ಕಾಯಿಲೆಯಾಗಿದ್ದು, ಇದು ಪ್ರಾಥಮಿಕವಾಗಿ ದನಗಳು ಮತ್ತು ಎಮ್ಮೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ಯಾಶ್ಚುರೆಲ್ಲಾ ಮಲ್ಟೋಸಿಡಾ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಜ್ವರ, ಪ್ರಾಣಿಗಳು ಚಟುವಟಿಕೆಯಿಲ್ಲದೆ ಮಂಕಾಗಿರುವುದು ಮತ್ತು ಸೆಪ್ಟಿಸೆಮಿಯಾ (ರಕ್ತದ ಬ್ಯಾಕ್ಟೀರಿಯಾದ ಸೋಂಕು) ಬೆಳವಣಿಗೆಯಂತಹ ತ್ವರಿತ-ಪ್ರಾರಂಭದ ಲಕ್ಷಣಗಳನ್ನು ಹೊಂದಿರುತ್ತವೆ. ಈ ರೋಗವು ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿರುತ್ತದೆ. ಹೆಚ್ಚಿನ ಮರಣ ಪ್ರಮಾಣವನ್ನು ಉಂಟುಮಾಡಬಹುದು, ಆಗಾಗ್ಗೆ ಆರಂಭಿಕ ಚಿಹ್ನೆಗಳಿಂದ ಗಂಟೆಗಳು ಅಥವಾ ಕೆಲವು ದಿನಗಳಲ್ಲಿ ಸಾವಿನವರೆಗೆ ಮುಂದುವರಿಯುತ್ತದೆ.

ಹೆಚ್ ಎಸ್ ಒಂದು ಝೂನೋಟಿಕ್ ಕಾಯಿಲೆಯಲ್ಲ. ರೋಗ ಕಣ್ಗಾವಲು, ಕಟ್ಟುನಿಟ್ಟಾದ ಜೈವಿಕ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಜಾರಿಗೊಳಿಸುವುದು, ನಿಯಂತ್ರಿತ ಪ್ರವೇಶ, ಪ್ರಾಣಿಗಳಿಗೆ ಉಪಕರಣಗಳ ಸೋಂಕುಗಳೆತ ಮತ್ತು ಕ್ವಾರಂಟೈನ್, ಏಕಾಏಕಿ ಹರಡುವಿಕೆಯನ್ನು ತಡೆಗಟ್ಟಲು ಸ್ಥಳೀಯ ವಲಯಗಳಲ್ಲಿ ಪ್ರಾಣಿಗಳಿಗೆ ಲಸಿಕೆ ಹಾಕುವುದು, ವಯಸ್ಸಿಗೆ ಸೂಕ್ತವಾದ ಮತ್ತು ಸಿರೊಟೈಪ್-ನಿರ್ದಿಷ್ಟ ಲಸಿಕೆಗಳನ್ನು ನೀಡುವುದು, ನಿರ್ದಿಷ್ಟ ರೋಗಗಳಿಗೆ ಸೂಕ್ತವಾದ ಲಸಿಕೆಗಳನ್ನು ಬಳಸಿಕೊಂಡು ಪೀಡಿತ ಪ್ರದೇಶಗಳಲ್ಲಿ 5 ಕಿಮೀ ವ್ಯಾಪ್ತಿಯೊಳಗೆ ಲಸಿಕೆ ಅಭಿಯಾನಗಳನ್ನು ನಡೆಸುವುದು; ಶಿಫಾರಸು ಮಾಡಿದ ವಯಸ್ಸಿನಲ್ಲಿ ಪ್ರಾಥಮಿಕ ಲಸಿಕೆಗಳನ್ನು ನೀಡುವುದು, ನಂತರ ವರ್ಷಕ್ಕೊಮ್ಮೆ ಅಥವಾ ಸಲಹೆಯಂತೆ ಬೂಸ್ಟರ್ ಡೋಸ್‌ಗಳನ್ನು ನೀಡುವುದು ಸೇರಿದಂತೆ ಹಲವಾರು ತಡೆಗಟ್ಟುವ ಕ್ರಮಗಳನ್ನು NADRES ಸಲಹೆಗಳು ಒಳಗೊಂಡಿತ್ತು.

ರೋಗಕಾರಕಗಳಿಂದ ಸಂಭಾವ್ಯ ಅಪಾಯಗಳನ್ನು (ಜಾನುವಾರು ಮತ್ತು ವನ್ಯಜೀವಿಗಳಿಗೆ) ಎರಡು ತಿಂಗಳ ಮುಂಚಿತವಾಗಿ ನೀಡಲು ಮತ್ತು ಸಂಬಂಧಪಟ್ಟವರಿಗೆ ಜಾಗೃತಿ ಮತ್ತು ಕಾರ್ಯನಿರ್ವಹಿಸಲು ಸಿದ್ಧತೆಗಾಗಿ ಸಾಕಷ್ಟು ಸಮಯವನ್ನು ಒದಗಿಸಲು 2015 ರಲ್ಲಿ NADRES-NIVEDI ನ್ನು ಅಭಿವೃದ್ಧಿಪಡಿಸಲಾಯಿತು.

NADRES ಎಂಬುದು ಹವಾಮಾನ ಆಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆಯಾಗಿದ್ದು, ICAR-NIVEDI ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ (AIML) ವ್ಯವಸ್ಥೆಯೊಂದಿಗೆ ಸಕ್ರಿಯಗೊಳಿಸಲಾಗಿದೆ. ಇದು ಎರಡು ತಿಂಗಳ ಮುಂಚಿತವಾಗಿ ರೋಗಕಾರಕಗಳಿಂದ ಸಂಭಾವ್ಯ ಬೆದರಿಕೆಗಳನ್ನು ಶೇಕಡಾ 95ರಷ್ಟು ನಿಖರತೆಯೊಂದಿಗೆ ನೀಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi blast: ಸ್ಫೋಟಕ್ಕೂ ಮುನ್ನ 'ಆತ್ಮಾಹುತಿ ಬಾಂಬ್ ದಾಳಿ' ಬಗ್ಗೆ ಮಾತಾಡಿದ ಡಾ. ಉಮರ್; ಉಗ್ರ ಹೇಳಿದ್ದೇನು?

Delhi Red Fort blast: ಅಲ್-ಫಲಾಹ್ ವಿಶ್ವವಿದ್ಯಾಲಯದ ಕಚೇರಿ-25 ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ..!

ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಮಾರಣಹೋಮ: 31ಕ್ಕೇರಿದ ಸಾವಿನ ಸಂಖ್ಯೆ, ನಿರ್ಲಕ್ಷ್ಯವೇ ಕಾರಣ ಎಂದ ತಜ್ಞರು

ಸೌದಿ ಅರೇಬಿಯಾ ಬಸ್ ದುರಂತ ಪ್ರಕರಣ: 45 ಮಂದಿ ಪೈಕಿ ಓರ್ವ ಕನ್ನಡಿಗನೂ ಬಲಿ, ಜೀವನಾಧಾರ ಕಳೆದುಕೊಂಡ ಹುಬ್ಬಳ್ಳಿ ಕುಟುಂಬ..!

ಈ ವರ್ಷ ಇಲ್ಲಿಯವರೆಗೆ 255 ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದ BSF

SCROLL FOR NEXT