ಸಾಂದರ್ಭಿಕ ಚಿತ್ರ 
ರಾಜ್ಯ

ಹದಗೆಟ್ಟ ರಸ್ತೆ: ನವೆಂಬರ್ 29 ರಂದು ಆನೇಕಲ್ ಸುತ್ತಮುತ್ತಲಿನ ಸುಮಾರು 10,000 ಕ್ಕೂ ಹೆಚ್ಚು ನಿವಾಸಿಗಳಿಂದ ಪ್ರತಿಭಟನೆ!

ಆನೇಕಲ್ ತಾಲ್ಲೂಕು ನಾಗರಿಕರ ಕಲ್ಯಾಣ ಸಮಿತಿಯಡಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಹೀಲಳಿಗೆ, ಸಿಂಗೇನ ಅಗ್ರಹಾರ, ಅನಂತ ನಗರ ಮತ್ತು ಸಂಪಿಗೆ ನಗರ ರಸ್ತೆಗಳನ್ನು ಆದಷ್ಟು ಬೇಗ ಡಾಂಬರೀಕರಣಗೊಳಿಸಬೇಕೆಂದು ಒತ್ತಾಯಿಸಲಾಗಿದೆ.

ಬೆಂಗಳೂರು: ಆನೇಕಲ್ ತಾಲ್ಲೂಕಿನ ಮುತ್ತನಲ್ಲೂರು, ಹೆಬ್ಬಗೋಡಿ ಮತ್ತು ಸಿಂಗೇನ ಅಗ್ರಹಾರದ 10,000 ಕ್ಕೂ ಹೆಚ್ಚು ನಿವಾಸಿಗಳು ನವೆಂಬರ್ 29 ರಂದು ಎಎಸ್‌ಬಿ ಕಾಲೇಜು ಮೈದಾನದಲ್ಲಿ ತಮ್ಮ ಪ್ರದೇಶಗಳಲ್ಲಿನ ಹದಗೆಟ್ಟ ರಸ್ತೆಗಳ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

ಆನೇಕಲ್ ತಾಲ್ಲೂಕು ನಾಗರಿಕರ ಕಲ್ಯಾಣ ಸಮಿತಿಯಡಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಹೀಲಳಿಗೆ, ಸಿಂಗೇನ ಅಗ್ರಹಾರ, ಅನಂತ ನಗರ ಮತ್ತು ಸಂಪಿಗೆ ನಗರ ರಸ್ತೆಗಳನ್ನು ಆದಷ್ಟು ಬೇಗ ಡಾಂಬರೀಕರಣಗೊಳಿಸಬೇಕೆಂದು ಒತ್ತಾಯಿಸಲಾಗಿದೆ.

ಸುಮಾರು ಎರಡು ದಶಕಗಳಿಂದ ಈ ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಪದೇ ಪದೇ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಮಿತಿ ಆರೋಪಿಸಿದೆ. 20 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಜನರು ಸರಿಯಾದ ರಸ್ತೆ, ಒಳಚರಂಡಿ ಮತ್ತು ನೀರು ಪೂರೈಕೆಯಲ್ಲಿದೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಲಾಗಿದೆ.

ಸಮಸ್ಯೆ ಬಗ್ಗೆ ಸ್ಥಳೀಯ ಪಂಚಾಯತ್, ತಹಶೀಲ್ದಾರ್ ಮತ್ತು ಶಾಸಕರ ಗಮನಕ್ಕೆ ತಂದಾಗ ಪ್ಯಾಚ್‌ವರ್ಕ್ ಮಾಡಲಾಯಿತು. ಆದರೆ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಈ ಪ್ಯಾಚ್‌ವರ್ಕ್ ಕೆಲವೇ ವಾರಗಳಲ್ಲಿ ಕಿತ್ತುಹೋಗುತ್ತಿದೆ.

“ಹುಸ್ಕೂರು ರಸ್ತೆಯಿಂದ ಅನಂತ ನಗರ ಮತ್ತು ಹೀಲಳಿಗೆವರೆಗಿನ 3 ಕಿ.ಮೀ. ರಸ್ತೆ ಕೆಟ್ಟ ಸ್ಥಿತಿಯಲ್ಲಿದೆ. ಅನಂತ ನಗರದಲ್ಲಿನ ಭೂಗತ ಒಳಚರಂಡಿ ಮಾರ್ಗವು ಹಾನಿಗೊಳಗಾಗಿದ್ದು, ಕೊಳಚೆ ನೀರು ಮುಖ್ಯ ರಸ್ತೆಗೆ ಹರಿಯುತ್ತದೆ. ಚಂದಾಪುರ, ಬೊಮ್ಮಸಂದ್ರ ಮತ್ತು ಹೆಬ್ಬಗೋಡಿ ಪಂಚಾಯತ್‌ಗಳು ರೂ. 25 ಕೋಟಿ ಆಸ್ತಿ ತೆರಿಗೆಯನ್ನು ಸಂಗ್ರಹಿಸುತ್ತವೆ. ಆದರೆ ನಿವಾಸಿಗಳಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಆನೇಕಲ್‌ನ ಶಿವ ರೆಡ್ಡಿ ಹೇಳಿದರು.

ಆನೇಕಲ್ ಶಾಸಕ ಬಿ. ಶಿವಣ್ಣ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಕೆಲವು ನಿವಾಸಿಗಳು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಹೋರಾಟ ನಡೆಸುತ್ತೇವೆಂದ ಸಿಎಂ ಸಿದ್ದರಾಮಯ್ಯ

SCROLL FOR NEXT