ಅತ್ಯಾಚಾರ ಆರೋಪ (ಸಂಗ್ರಹ ಚಿತ್ರ) online desk
ರಾಜ್ಯ

Bengaluru: 5 ಸ್ಟಾರ್ ಹೋಟೆಲ್‌ನಲ್ಲಿ ಮಹಿಳಾ ಪೈಲಟ್ ಮೇಲೆ ಅತ್ಯಾಚಾರ; 60 ವರ್ಷದ ಪೈಲಟ್ ವಿರುದ್ಧ ಗಂಭೀರ ಆರೋಪ

ಬೆಂಗಳೂರಿನ ಹೋಟೆಲೊಂದರಲ್ಲಿ ತಮ್ಮ ಮೇಲೆ ವಿಶೇಷ ವಿಮಾನದ ಪೈಲಟ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕ್ಯಾಬಿನ್‌ ಸಿಬ್ಬಂದಿ ಇಲ್ಲಿನ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು: ಖಾಸಗಿ ವಿಮಾನಯಾನ ಸಂಸ್ಥೆಯ ಪೈಲಟ್ ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಗಂಭೀರ ಆರೋಪ ಹೊರಿಸಲಾಗಿದೆ.

ಬೆಂಗಳೂರಿನ ಹೋಟೆಲೊಂದರಲ್ಲಿ ತಮ್ಮ ಮೇಲೆ ವಿಶೇಷ ವಿಮಾನದ ಪೈಲಟ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕ್ಯಾಬಿನ್‌ ಸಿಬ್ಬಂದಿ ಇಲ್ಲಿನ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.

ನವೆಂಬರ್‌ 18ರಂದು ಬೆಂಗಳೂರಿನಲ್ಲಿ ಘಟನೆ ನಡೆದಿದ್ದು,ಬೇಗಂಪೇಟೆ ಠಾಣೆಯಲ್ಲಿ ಝೀರೊ ಎಫ್‌ಐಆರ್‌ (ಬೇರೊಂದು ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅಪರಾಧದ ದೂರು) ದಾಖಲಾಗಿದೆ.

‘ಬೆಂಗಳೂರಿನಿಂದ ಮರಳಿದ ನಂತರ ಸಂತ್ರಸ್ತೆ, ಇಲ್ಲಿನ ಠಾಣೆಗೆ ಬಂದು ದೂರು ನೀಡಿದ್ದಾರೆ. ನಾವು ಪ್ರಕರಣ ದಾಖಲಿಸಿಕೊಂಡು ಅದನ್ನು ಬೆಂಗಳೂರಿನ ಹಲಸೂರು ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದೇವೆ. ಬೆಂಗಳೂರಿನ ಪೊಲೀಸರು ತನಿಖೆ ನಡೆಸಲಿದ್ದಾರೆ’ ಎಂದು ಬೇಗಂಪೇಟೆ ಠಾಣೆಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ಮೂಲಗಳ ಪ್ರಕಾರ ನವೆಂಬರ್ 18 ರಂದು ಆರೋಪಿ ಪೈಲಟ್ ರೋಹಿತ್ ಸರನ್ ತನ್ನ ಸಹೋದ್ಯೋಗಿ ಸಂತ್ರಸ್ಥೆ ಜೊತೆ ಹೈದರಾಬಾದ್‌ನ ಬೇಗಂಪೇಟೆ ಮತ್ತು ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಚಾರ್ಟರ್ಡ್ ವಿಮಾನದಲ್ಲಿ ಹೋಟೆಲ್‌ಗೆ ಆಗಮಿಸಿದಾಗ ಈ ಘಟನೆ ನಡೆದಿದೆ.

ಇಬ್ಬರು ಪೈಲಟ್‌ಗಳು ಮತ್ತು ಸಂತ್ರಸ್ಥೆ ನವೆಂಬರ್ 19 ರಂದು ಪುಟ್ಟಪರ್ತಿಗೆ ಹಿಂತಿರುಗಬೇಕಿತ್ತು ಮಾರ್ಗಮಧ್ಯೆ ಸ್ವಲ್ಪ ವಿಶ್ರಾಂತಿಗಾಗಿ ಹೋಟೆಲ್‌ಗೆ ಬಂದಿದ್ದರು.

ತನ್ನ ದೂರಿನಲ್ಲಿ, ರೋಹಿತ್ ಧೂಮಪಾನಕ್ಕಾಗಿ ಹೊರಗೆ ಹೋಗುವ ನೆಪದಲ್ಲಿ ತನ್ನ ಹೋಟೆಲ್ ಕೋಣೆಯ ಬಳಿಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಬಲವಂತವಾಗಿ ಕೋಣೆಯೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ನವೆಂಬರ್ 20 ರಂದು ಬೇಗಂಪೇಟೆಗೆ ಹಿಂತಿರುಗಿದ ನಂತರ, ಸಂತ್ರಸ್ಥೆ ತಕ್ಷಣ ವಿಮಾನಯಾನ ಸಂಸ್ಥೆಯ ಆಡಳಿತವನ್ನು ಸಂಪರ್ಕಿಸಿ ಬೇಗಂಪೇಟೆ ಪೊಲೀಸ್ ಠಾಣೆಯಲ್ಲಿ ಶೂನ್ಯ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾಳೆ.

ಭಾರತೀಯ ನ್ಯಾಯ ಸಂಹಿತಾ (ಅತ್ಯಾಚಾರ ಅಪರಾಧ) ಸೆಕ್ಷನ್ 63 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಬೆಂಗಳೂರು ನಗರದ ಹಲಸೂರು ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಟ ಧರ್ಮೇಂದ್ರ, ಬಾಲಿವುಡ್ ನ 'ಹೀ-ಮ್ಯಾನ್' ಇನ್ನಿಲ್ಲ

ಭಾರತದ ಮೇಲೆ ಫಾಲೋ-ಆನ್ ಹೇರದೇ ಇದ್ದಿದ್ದೇಕೆ? ಕೈ-ಸನ್ನೆ ಮೂಲಕ Team India ಗೆ ಬವುಮಾ ಕೊಟ್ಟ ಸಂದೇಶ ಏನು?

ಆಪ್ತ ಸ್ನೇಹಿತ ಅಂಬರೀಶ್ ಪುಣ್ಯಸ್ಮರಣೆ ದಿನದಂದೇ Bollywood ನಟ ಧರ್ಮೇಂದ್ರ ನಿಧನ: ಸುಮಲತಾ ಸಂತಾಪ!

Bengaluru ATM Van Robbery: ದರೋಡೆ ಮಾಡಿದ್ದು 7.11 ಕೋಟಿ, ಖರ್ಚಾಗಿದ್ದು ಕೇವಲ 1 ಲಕ್ಷ! ಕಳ್ಳರ ಜರ್ನಿ ಹೇಗಿತ್ತು?

'ಭಯ್ಯಾ ಅನ್ನಬೇಡಿ, ಆ್ಯಟಿಟ್ಯೂಡ್ ನಿಮ್ಮ ಜೇಬಲ್ಲಿಡಿ': ಪ್ರಯಾಣಿಕರಿಗೆ ಬೆಂಗಳೂರು ಕ್ಯಾಬ್ ಚಾಲಕನ 6 ರೂಲ್ಸ್; ಪೋಸ್ಟ್ ವೈರಲ್!

SCROLL FOR NEXT