ನೆಫಿಲಾ ಜಾತಿಯ ದೈತ್ಯ ಜೇಡ 
ರಾಜ್ಯ

Nephila giant spider: ಗದಗ ಅರಣ್ಯದಲ್ಲಿ ನೆಫಿಲಾ ಜಾತಿಯ ದೈತ್ಯ ಜೇಡ ಪತ್ತೆ; ಹನುಮಂತನ ಹೆಸರಿಡುವಂತೆ ತಜ್ಞರ ಸೂಚನೆ

ಈ ದೈತ್ಯ ಜೇಡವು ಹನುಮನಂತೆ ಕಾಣುತ್ತದೆ. ಕೀಟಗಳಿಗೆ ಜನಪ್ರಿಯ ವ್ಯಕ್ತಿಗಳ ಹೆಸರನ್ನು ಇಡುವ ಪ್ರವೃತ್ತಿ ಪ್ರಾರಂಭವಾಗಿದೆ. ಜರ್ಮನ್ ಸರ್ವಾಧಿಕಾರಿಯ ಮುಖವನ್ನು ಹೋಲುವ ಕಾರಣ ಕ್ಯಾಟಕಾಂಥಸ್ ಇನ್‌ಕಾರ್ನಾಟಸ್‌ಗೆ ಹಿಟ್ಲರ್ ಎಂದು ಹೆಸರಿಡಲಾಗಿತ್ತು.

ಗದಗ: ಕೀಟಗಳಿಗೆ ಜನಪ್ರಿಯ ವ್ಯಕ್ತಿಗಳ ಹೆಸರನ್ನಿಡುವ ಪ್ರವೃತ್ತಿ ಬೆಳೆಯುತ್ತಲೇ ಬಂದಿದ್ದು, ಅದಾಗ್ಯೂ ಬೆಂಗಳೂರು ಮತ್ತು ಗದಗದ ಸಂಶೋಧಕರು ಇತ್ತೀಚೆಗೆ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸಸರ್ವಾಡ ಅರಣ್ಯ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನೆಫಿಲಾ ಜಾತಿಯ ದೈತ್ಯ ಜೇಡಕ್ಕೆ ಹನುಮಂತನ ಹೆಸರಿಡುವಂತೆ ಸೂಚಿಸಿದ್ದಾರೆ.

ಇಂತಹ ವರ್ಣರಂಜಿತ ಜೀವಿಯನ್ನು ಸೃಷ್ಟಿಸಿದ್ದಕ್ಕಾಗಿ ದೇವರ ಹೆಸರನ್ನು ಇಡುವುದು ಇದರ ಉದ್ದೇಶ ಎಂದು ಸಂಶೋಧಕರು ಹೇಳಿದ್ದಾರೆ.

ಕೀಟಗಳಿಗೆ ಹೆಸರಿಡುವುದು ಕೀಟಗಳ ಅಧ್ಯಯನವನ್ನು ಗುರುತಿಸಲು ಸುಲಭಗೊಳಿಸುತ್ತದೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ದೈತ್ಯ ಜೇಡವು ಹನುಮನಂತೆ ಕಾಣುತ್ತದೆ. ಕೀಟಗಳಿಗೆ ಜನಪ್ರಿಯ ವ್ಯಕ್ತಿಗಳ ಹೆಸರನ್ನು ಇಡುವ ಪ್ರವೃತ್ತಿ ಪ್ರಾರಂಭವಾಗಿದೆ. ಜರ್ಮನ್ ಸರ್ವಾಧಿಕಾರಿಯ ಮುಖವನ್ನು ಹೋಲುವ ಕಾರಣ ಕ್ಯಾಟಕಾಂಥಸ್ ಇನ್‌ಕಾರ್ನಾಟಸ್‌ಗೆ ಹಿಟ್ಲರ್ ಎಂದು ಹೆಸರಿಡಲಾಗಿತ್ತು. ಅದೇ ರೀತಿ, 'ಮಿಸ್ಟರ್ ಇಂಡಿಯಾ' ಸಿನಿಮಾದಲ್ಲಿ ಅಮರೀಶ್ ಪುರಿ ಅವರ ಪಾತ್ರವನ್ನು ಹೋಲುವ ಕಾರಣಕ್ಕೆ ಕೀಟಕ್ಕೆ ಮೊಗಾಂಬೊ ಎಂದು ಹೆಸರಿಡಲಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

“ಗೋಲ್ಡನ್ ಆರ್ಬ್ ವೀವರ್ ಜೇಡ"ವು ಗದಗದಂತಹ ಪ್ರದೇಶಗಳಲ್ಲಿ ಕಂಡು ಬರುವುದು ಅಪರೂಪ. ಈ ದೈತ್ಯ ಜೇಡವು ಕೆಲ ವಿಶೇಷ ಲಕ್ಷಣಗಳನ್ನು ಒಳಗೊಂಡಿದೆ. ಜೈಂಟ್‌ವುಡ್‌ ಸ್ಪೈಡರ್‌ಗಳಲ್ಲಿ ಗಂಡಿಗಿಂತ ಹೆಣ್ಣು ಬಲಿಷ್ಠ. ಹೆಣ್ಣು ಜೇಡ ಮೂರು ಇಂಚಿನಷ್ಟು ಉದ್ದ ಇರುತ್ತದೆ. ಗಂಡು ಜೇಡಗಳು ಸಣ್ಣದಿದ್ದು, ಹೆಣ್ಣು ಜೇಡ ಹೆಣೆದ ಬಲೆಯ ಮೇಲೆ ವಾಸ ಮಾಡುತ್ತವೆ.

ಈ ಜೇಡಗಳಿಂದ ಮನುಷ್ಯರಿಗೆ ಅಪಾಯ ಇಲ್ಲ. ಈ ಜೇಡದಲ್ಲಿರುವ ವಿಷದ ಅಂಶ ಕೀಟಗಳನ್ನು ಹಿಡಿಯಲು ಬಳಕೆ ಆಗುತ್ತದೆ ಎಂದು ಸಂಶೋಧಕ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT