ಡಿ ಕೆ ಶಿವಕುಮಾರ್, ಕಿಚ್ಚ ಸುದೀಪ್  
ರಾಜ್ಯ

ಬಿಗ್ ಬಾಸ್ ಷೋ ಬಂದ್ ಮಾಡಿಸಿದ ನಟ್ಟು ಬೋಲ್ಟ್ ಮಿನಿಸ್ಟರ್ ಡಿ ಕೆ ಶಿವಕುಮಾರ್: ಜೆಡಿಎಸ್ ಕಿಡಿ

ಸದ್ಯದ ಮಟ್ಟಿಗೆ ಸ್ಪರ್ಧಿಗಳನ್ನು ಹತ್ತಿರದ ರೆಸಾರ್ಟ್​ನಲ್ಲೇ ಇರಿಸಲಾಗಿದೆ. ಸ್ಟಾರ್​ ನಟ ಕಿಚ್ಚ ಸುದೀಪ್ ನಿರೂಪಣೆ ಮಾಡುವ ಬಿಗ್​ ಬಾಸ್ ಕಾರ್ಯಕ್ರಮಕ್ಕೆ ತಡೆ ನೀಡಿದ್ದರ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.

ಬೆಂಗಳೂರು: ರಾಮನಗರದ ಬಿಡದಿ ಬಳಿ ನಡೆಯುತ್ತಿದ್ದ ಕನ್ನಡದ ಬಿಗ್​ ಬಾಸ್​ ಶೋ ಸೀಸನ್ 12 ಸೆಟ್​​ಗೆ ಬೀಗ ಬಿದ್ದಿದೆ. ಶೋ ಅರ್ಧಕ್ಕೆ ನಿಂತಿದ್ದು, ಸ್ಫರ್ಧಿಗಳನ್ನು ಜಿಲ್ಲಾಡಳಿತ ಸಿಬ್ಬಂದಿ ಹೊರಕಳಿಸಿದ್ದಾರೆ.

ಸದ್ಯದ ಮಟ್ಟಿಗೆ ಸ್ಪರ್ಧಿಗಳನ್ನು ಹತ್ತಿರದ ರೆಸಾರ್ಟ್​ನಲ್ಲೇ ಇರಿಸಲಾಗಿದೆ. ಸ್ಟಾರ್​ ನಟ ಕಿಚ್ಚ ಸುದೀಪ್ ನಿರೂಪಣೆ ಮಾಡುವ ಬಿಗ್​ ಬಾಸ್ ಕಾರ್ಯಕ್ರಮಕ್ಕೆ ತಡೆ ನೀಡಿದ್ದರ ಬಗ್ಗೆ ಈಗ ಚರ್ಚೆ ನಡೆಯುತ್ತಿದ್ದು ಈ ಹಿಂದೆ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಕಲಾವಿದರರ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದ ಮಾತು ತೀವ್ರ ಚರ್ಚೆಗೆ ಬರುತ್ತಿದೆ.

ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಯದಲ್ಲಿ ನಟ್ಟು-ಬೋಲ್ಟ್ ಸಮರ

ಸರ್ಕಾರ-ಸಿನಿಮಾ ರಂಗದ ಸಮರ ಮತ್ತೆ ಮುಂದುವರೆಯಿತಾ ಎನ್ನುವ ಪ್ರಶ್ನೆ ಮೂಡಿದೆ. ಅಂದು ಡಿಸಿಎಂ ಡಿಕೆ ಶಿವಕುಮಾರ್ ಆಡಿದ ನಟ್ಟು-ಬೋಲ್ಟ್​ ಹೇಳಿಕೆಯನ್ನು ಅನೇಕ ಕಲಾವಿದರು ಖಂಡಿಸಿದ್ದರು. ಇತ್ತೀಚಿಗಷ್ಟೇ ಬಿಗ್​ ಬಾಸ್ ಶೋ ಆರಂಭದ ಪ್ರೆಸ್​ಮೀಟ್ ​​ನಲ್ಲೂ ಈ ನಟ್ಟುಬೋಲ್ಟ್​ ಹೇಳಿಕೆ ಪ್ರಸ್ತಾಪವಾಗಿತ್ತು. ಸುದೀಪ್​ ಕೂಡ ಈ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ರು. ಇದೀಗ ಬಿಗ್​ ಬಾಸ್​ ಶೋ ನಡೆಯುತ್ತಿದ್ದ ಜಾಗಕ್ಕೆ ಬೀಗ ಬಿದ್ದಿದ್ದಕ್ಕೆ ಇದೇ ಕಾರಣವಾ ಎಂದು ಜೆಡಿಎಸ್ ಡಿಸಿಎಂ ಅವರನ್ನು ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಕುಟುಕಿದೆ.


ಸೇಡು ತೀರಿಸಿಕೊಂಡಿದ್ದು ಡಿಕೆಶಿ?-ಜೆಡಿಎಸ್​

ಬಿಗ್​ ಬಾಸ್​ ಮನೆಗೆ ಬೀಗ ಬೀಳಲು ಡಿಸಿಎಂ ಡಿಕೆ ಶಿವಕುಮಾರ್ ಕಾರಣ ಎಂದು ಜೆಡಿಎಸ್​ ನೇರವಾಗಿ ಆರೋಪ ಮಾಡುತ್ತಿದೆ. ನಟ್ಟು ಬೋಲ್ಟ್​ ವಿಚಾರದ ಸಮರ ಸೇಡು ತೀರಿಸಿಕೊಳ್ಳಲು ಡಿಕೆಶಿಯೇ ಬೀಗ ಹಾಕಿದ್ದಾರೆ ಎನ್ನುವಂತೆ ಜೆಡಿಎಸ್ ಟ್ವೀಟ್ ಮಾಡಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡರೇ ನಟ್ಟು ಬೋಲ್ಟ್ ಮಿನಿಸ್ಟರ್ ಡಿಕೆ ಶಿವಕುಮಾರ್ ಎಂದು ಜೆಡಿಎಸ್ ಎಕ್ಸ್ ಖಾತೆ ಮೂಲಕ ಕಿಡಿಕಾರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಷ್ಯಾ ಸೇನೆ ಸೇರಿದ್ದ ಭಾರತ ಮೂಲದ ವ್ಯಕ್ತಿ ಬಂಧನ': ಭಾರತಕ್ಕೆ ಉಕ್ರೇನ್ ಮಾಹಿತಿ!

ಕೊಪ್ಪಳದ ಗಂಗಾವತಿಯಲ್ಲಿ ಹರಿಯಿತು ನೆತ್ತರು: BJP ಯುವ ಮೋರ್ಚಾ ಅಧ್ಯಕ್ಷನ ಬರ್ಬರ ಹತ್ಯೆ

ಮಧ್ಯಪ್ರದೇಶ: ಕಾಫ್ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯ; ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳ ಮರಣ; ಸಾವಿನ ಸಂಖ್ಯೆ 20ಕ್ಕೆ ಏರಿಕೆ

BiggBoss Kannada: ಬಿಗ್ ಬಾಸ್ 12 ಮನೆಗೆ ಬೀಗಮುದ್ರೆ, ಜಾಲಿವುಡ್ ಸ್ಟುಡಿಯೋಸ್ ಇಂದು ಹೈಕೋರ್ಟ್ ಮೊರೆ?

ರಾಜಕೀಯ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸಮೀಕ್ಷೆ ನಡೆಸುತ್ತಿದ್ದಾರೆ: BJP ಟೀಕೆ

SCROLL FOR NEXT