ಈಶಾನ್ಯ ಭಾರತದ ಮಹಿಳೆಗೆ ಕಿರುಕುಳ 
ರಾಜ್ಯ

'ನಮ್ಮ ಸ್ವಂತ ದೇಶದಲ್ಲೇ ರಕ್ಷಣೆ ಇಲ್ಲ': ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೇ Bengaluru Auto Driver ಕಿರುಕುಳ, ಈಶಾನ್ಯ ಭಾರತದ ಮಹಿಳೆ ಆರೋಪ

ಬೆಂಗಳೂರಿನ ಉಬರ್ ಆಟೋ ಚಾಲಕ ತನ್ನ ಆಟೋ ಹತ್ತಿದ ಈಶಾನ್ಯ ಭಾರತದ ಮಹಿಳೆಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಆಟೋ ಚಾಲಕರೊಬ್ಬರ ವಿರುದ್ಧ ಈಶಾನ್ಯ ಭಾರತದ ಮಹಿಳೆ ಗಂಭೀರ ಆರೋಪ ಮಾಡಿದ್ದು, ಕನ್ನಡ ಮಾತನಾಡಲು ಬಾರದಿದ್ದಕ್ಕೇ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹೌದು.. ಬೆಂಗಳೂರಿನ ಉಬರ್ ಆಟೋ ಚಾಲಕ ತನ್ನ ಆಟೋ ಹತ್ತಿದ ಈಶಾನ್ಯ ಭಾರತದ ಮಹಿಳೆಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಮಹಿಳೆ

ಆಟೋ ಚಾಲಕನೊಬ್ಬ ತನಗೆ ಅರ್ಥವಾಗದ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ. ಅಲ್ಲದೆ ಆಕೆಯನ್ನು ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಬೆಂಗಳೂರು ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ.

ಮಹಿಳೆಯ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ಹೆಚ್ಚಿನ ವಿವರಗಳನ್ನು ನೀಡುವಂತೆ ಮಹಿಳೆಗೆ ಕೇಳಿದ್ದಾರೆ. ಘಟನೆಯ ಸ್ಥಳ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಕೋರಿದ್ದಾರೆ.

ಅಂತೆಯೇ ಉಬರ್ ಸಂಸ್ಥೆ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಕ್ಷಮೆಯಾಚಿಸಿದೆ. "ಈ ನಡವಳಿಕೆಯು ಅತ್ಯಂತ ಕಳವಳಕಾರಿಯಾಗಿದೆ ಮತ್ತು ಇದು ಸಂಭವಿಸಿದ್ದಕ್ಕೆ ನಮಗೆ ತುಂಬಾ ವಿಷಾದವಿದೆ" ಎಂದು ಅದು ಹೇಳಿದೆ.

ಇಷ್ಟಕ್ಕೂ ಆಗಿದ್ದೇನು?

ಇದೇ ಅಕ್ಟೋಬರ್ 2 ರಂದು ಈಶಾನ್ಯ ಭಾರತದ ಎನ್ ಬೀ ಎಂಬ ಮಹಿಳೆ ಉಬರ್ ಆಟೋ ಬುಕ್ ಮಾಡಿದ್ದು, ಈ ವೇಳೆ ರೈಡ್ ಸ್ವೀಕರಿಸಿದ ಆಟೋ ಚಾಲಕ ತಡವಾಗಿದ್ದಾನೆ. ಈ ವೇಳೆ ಮಹಿಳೆ ಎನ್ ಬೀ ರೈಡ್ ಕ್ಯಾನ್ಸಲ್ ಮಾಡಿದ್ದಾಳೆ. ಬಳಿಕ ಮತ್ತೊಂದು ರೈಡ್ ಆಟೋ ಬುಕ್ ಮಾಡಿಕೊಂಡು ಹೊರಟಿದ್ದಾಳೆ.

ಈ ವೇಳೆ ಆಕೆಯನ್ನು ತಡೆದ ಈ ಹಿಂದಿನ ರೈಡ್ ನ ಆಟೋ ಚಾಲಕ ಆಕೆಯೊಂದಿಗೆ ಜಗಳಕ್ಕಿಳಿದಿದ್ದಾನೆ. ರೈಡ್ ಯಾಕೆ ಕ್ಯಾನ್ಸಲ್ ಮಾಡಿದ್ದೀರಿ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ನೋಡ ನೋಡುತ್ತಲೇ ಹಲ್ಲೆಗೂ ಮುಂದಾಗಿದ್ದಾನೆ. ಇಷ್ಟು ಘಟನೆಯನ್ನು ಮಹಿಳೆ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ.

ವಾಕ್ಸಮರದ ವೇಳೆ ಆತ ಎನ್ ಬೀಯೊಂದಿಗೆ ಕನ್ನಡ ಮಾತಾಡು ಎಂದು ಗದರಿಸಿದ್ದಾನೆ, ಈ ವೇಳೆ ಆಕೆ ತನಗೆ ಕನ್ನಡ ಬರುವುದಿಲ್ಲ ಎಂದಾಗ ಆತ ಮತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಈಶಾನ್ಯದಿಂದ ಬಂದವಳು ಎಂಬ ಕಾರಣಕ್ಕೆ ಅವನು ನನ್ನನ್ನು ಈ ರೀತಿ ನಿಂದಿಸುತ್ತಿದ್ದಾನೆ ಎಂದು ಅವಳು ವೀಡಿಯೊದಲ್ಲಿ ಹೇಳುತ್ತಿರುವುದು ಕೇಳಿಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT