ವಿ ಸೋಮಣ್ಣ  
ರಾಜ್ಯ

'ನನಗೆ ಹಿಂದಿ ಬರುವುದಿಲ್ಲ, ಮಂತ್ರಿಗಿರಿ ಬೇಡ ಎಂದಿದ್ದೆ; ಅದಕ್ಕೆ ಪ್ರಧಾನಿ ಮೋದಿ ಹೇಳಿದ್ದು ಹೀಗೆ..': ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡ ವಿ ಸೋಮಣ್ಣ

ಕಳೆದ ವರ್ಷ ಲೋಕಸಭಾ ಚುನಾವಣೆಯ ವೇಳೆ ಹಲವು ವಿರೋಧ ಮತ್ತು ಒತ್ತಡಗಳ ನಡುವೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸೋಮಣ್ಣಗೆ ಒಲಿದಿತ್ತು.

ಬೆಂಗಳೂರು: ದೇಶದಲ್ಲಿ ಹಿಂದಿ ಭಾಷೆ ಹೇರಿಕೆ, ರಾಷ್ಟ್ರಭಾಷೆ ಜಿಜ್ಞಾಸೆ, ತ್ರಿಭಾಷಾ ಸೂತ್ರ ಇತ್ಯಾದಿಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ.

ಕಳೆದ ವರ್ಷ ಲೋಕಸಭಾ ಚುನಾವಣೆಯ ವೇಳೆ ಹಲವು ವಿರೋಧ ಮತ್ತು ಒತ್ತಡಗಳ ನಡುವೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸೋಮಣ್ಣಗೆ ಒಲಿದಿತ್ತು. ಅದಕ್ಕಿಂತ ಹಿಂದೆ ಅಂದರೆ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ, ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವಿನ ಲೆಕ್ಕಾಚಾರ ಫಿಫ್ಟಿ ಫಿಫ್ಟಿ ಎಂದು ಹೇಳಲಾಗುತ್ತಿತ್ತು.

ನಂತರ ತುಮಕೂರು ಲೋಕಸಭಾ ಕ್ಷೇತ್ರದಿಂದ 1,75,594 ಮತಗಳ ಭಾರೀ ಅಂತರದಿಂದ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ಕಾಂಗ್ರೆಸ್ಸಿನ ಎಸ್.ಪಿ.ಮುದ್ದಹನುಮೇಗೌಡ ಅವರ ವಿರುದ್ದ ಸೋಮಣ್ಣ ಗೆಲುವನ್ನು ಸಾಧಿಸಿದ್ದರು. ಆ ವೇಳೆ, ರಾಷ್ಟ್ರಪತಿ ಭವನದ ಸಮೀಪ ನಡೆದ ವಿದ್ಯಮಾನವೊಂದನ್ನು ಸ್ವತಃ ಸೋಮಣ್ಣ ಬಹಿರಂಗಪಡಿಸಿದ್ದಾರೆ.

ಮಂತ್ರಿಗಿರಿ ಬೇಡ ಎಂದಿದ್ದ ಸೋಮಣ್ಣ

ಗೆಲುವಿನ ಖುಷಿಯಲ್ಲಿದ್ದ ಸೋಮಣ್ಣ ಅವರಿಗೆ ದೆಹಲಿಗೆ ಬರುವಂತೆ, ಬಿಜೆಪಿ ಕೇಂದ್ರ ಕಚೇರಿಯಿಂದ ಪೋನ್ ಬಂತಂತೆ. ಅಲ್ಲಿ ಹೋದಾಗ, ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎನ್ನುವ ಮಾಹಿತಿ ದೊರೆತ ಸೋಮಣ್ಣ, ಪ್ರಧಾನಿ ಮೋದಿಯವರ ಬಳಿ, ನಾನು ಸಂಸದನಾಗಿಯೇ ಇರುತ್ತೇನೆ, ಮಂತ್ರಿಗಿರಿ ಬೇಡ ಎಂದಿದ್ದರಂತೆ.

ನಾವು ಹಳ್ಳಿಯಿಂದ ಬಂದವರು, ಕನ್ನಡ ಸರ್ಕಾರಿ ಶಾಲೆಯಲ್ಲಿ ಓದಿದವರು. ನಾವು ಶಾಲೆಗೆ ಹೋಗುತ್ತಿದ್ದ ವೇಳೆ, ಹಿಂದಿ ಇರಲಿಲ್ಲ. ಹಾಗಾಗಿ, ನನಗೆ ಹಿಂದಿ ಬರುತ್ತಿರಲಿಲ್ಲ. ಪ್ರಧಾನಿಯವರು ಕರೆದ ಹಿನ್ನಲೆಯಲ್ಲಿ ಅಲ್ಲಿಗೆ ಹೋದೆ. ನಿಮ್ಮನ್ನು ಮಂತ್ರಿ ಮಾಡುತ್ತಿದ್ದೇವೆ, ಅದಕ್ಕೆ ತಯಾರಿಗಿರಿ ಎಂದು ಹೇಳಿದರು. ನನಗೆ ಒಂದು ಕ್ಷಣ ಶಾಕ್, ಆದರೂ, ನನಗೆ ಮಂತ್ರಿಗಿರಿ ಬೇಡ ಎಂದೆ. ಅದಕ್ಕೆ ಯಾಕೆ ಎಂದು ಕೇಳಿದರು, ಆಗ ನಾನು ನನಗೆ ಹಿಂದಿ ಬರುವುದಿಲ್ಲ ಎಂದು ಹೇಳಿದೆ ಎಂದು ಸೋಮಣ್ಣ ಹೇಳಿದರು.

ಭಾಷೆಗಿಂತ ಕಾಮನ್ ಸೆನ್ಸ್ ಮುಖ್ಯ

ಯಾವುದು ಭಾಷೆ, ಎಲ್ಲಾ ಭಾಷೆಯೂ ಒಂದೇ. ನಮಗಿರಬೇಕಾದ ಒಂದು ಭಾಷೆ ಎಂದರೆ ಅದು ಕಾಮನ್ ಸೆನ್ಸ್. ಹೋಗಿ, ಪ್ರಮಾಣವಚನ ಸ್ವೀಕರಿಸಲು ಸಿದ್ದತೆಯನ್ನು ಮಾಡಿಕೊಳ್ಳಿ. ನೀವು ಉತ್ತಮವಾಗಿ ಕೆಲಸ ಮಾಡುತ್ತೀರಾ ಎನ್ನುವ ನಂಬಿಕೆಯಿದೆ ಎಂದು ಪ್ರಧಾನಿ ಮೋದಿ ಹೇಳಿದರು ಎಂದು ಸೋಮಣ್ಣ ನೆನಪಿಸಿಕೊಳ್ಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮತ್ತೆ ವೈಭವದತ್ತ ಮರಳಿದ್ದೇವೆ, ಹಿಂದೆಂದಿಗಿಂತ ಶ್ರೀಮಂತ ಮತ್ತು ಬಲಿಷ್ಠರಾಗಿದ್ದೇವೆ': ದೇಶವನ್ನುದ್ದೇಶಿಸಿ Donald Trump ಭಾಷಣ-Video

'ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಇರುವವರು ಸೇರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ'?: ಡಿ ಕೆ ಶಿವಕುಮಾರ್

ಕೇರಳ- ಕೇರಳಂ: ಯಾವುದೇ ಪ್ರಯೋಜನವಿಲ್ಲ, ಹೆಸರು ಬದಲಿಸುವ ಬದಲು ಹೆಚ್ಚಿನ ಅನುದಾನ ಘೋಷಿಸಿ; ಅಚ್ಚರಿ ಮೂಡಿಸಿದ ಶಶಿ ತರೂರ್ ವಿರೋಧ!

ಕೃಷಿ ಭೂಮಿ ಸೇರಿದಂತೆ ಎಲ್ಲಾ ಸ್ವತ್ತಿಗೂ ಸ್ವಯಂ ಚಾಲಿತ ಮ್ಯುಟೇಷನ್‌: ಕಂದಾಯ ಸಚಿವ ಕೃಷ್ಣಬೈರೇಗೌಡ

ಪಲಾಯನವಾದಿಯಲ್ಲ, ನಾನು ರಾಮನಗರಕ್ಕೆ ಫಿಕ್ಸ್: ಎಲ್ಲಾ ಕಡೆಯಿಂದಲೂ ವಿರೋಧಿಗಳು ನನ್ನ ರೌಂಡಪ್ ಮಾಡ್ತಾರೆ; ನಿಖಿಲ್

SCROLL FOR NEXT