ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ "72ನೇ ಸಹಕಾರ ಸಪ್ತಾಹ" ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ  
ರಾಜಕೀಯ

'ನೀನು ಹಾಗೆ ಮಾತನಾಡಿದ್ದೀಯ ಎಂದು ಯತೀಂದ್ರನ್ನ ಕೇಳಿದೆ, ಅದಕ್ಕವನು ಹೀಗೆ ಹೇಳಿದ...': ಪುತ್ರನ 'ಉತ್ತರಾಧಿಕಾರಿ' ಹೇಳಿಕೆಗೆ ಸಿಎಂ ಸಿದ್ದರಾಮಯ್ಯ; Video

ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಈ ಹೇಳಿಕೆ ಬಗ್ಗೆ ಎಂಎಲ್​ಸಿ ಡಾ.ಯತೀಂದ್ರ ಬಳಿಯೇ ಕೇಳಿದೆ.

ಬೆಂಗಳೂರು: ಬೆಳಗಾವಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಡಾ ಯತೀಂದ್ರ ಸಿದ್ದರಾಮಯ್ಯ ಸಿಎಂ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಬಗ್ಗೆ ನೀಡಿದ್ದ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ನಾನಾ ವಿಶ್ಲೇಷಣೆಯೂ ನಡೆಯುತ್ತಿದೆ.

ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಈ ಹೇಳಿಕೆ ಬಗ್ಗೆ ಎಂಎಲ್​ಸಿ ಡಾ.ಯತೀಂದ್ರ ಬಳಿಯೇ ಕೇಳಿದೆ. ಅದು ಸೈದ್ಧಾಂತಿಕವಾಗಿ ಮಾತ್ರ ಅಂತ ಹೇಳಿದ್ದಾರೆ. ಇಂಥವರೇ ಸಿಎಂ ಆಗಬೇಕು ಎಂದು ಡಾ.ಯತೀಂದ್ರ ಹೇಳಿಲ್ಲ. ತಿರುಚಿ ಏನಾದ್ರೂ ಹೇಳಿದ್ದಾರಾ ಎಂದು ಡಾ.ಯತೀಂದ್ರಗೆ ಕೇಳಿದೆ. ಇಲ್ಲ, ನಾನು ಸೈದ್ಧಾಂತಿಕವಾಗಿ ಮಾತಾಡಿದ್ದು ಎಂದಿದ್ದಾರೆ ಎಂದರು.

ಸೈದ್ಧಾಂತಿಕವಾಗಿ ಮಾತನಾಡಿದೆ ಎಂದ

ಯತೀಂದ್ರ ಮಾತನಾಡಿರುವ ವಿಷಯ ಅಷ್ಟು ಸುದ್ದಿಯಾದಾಗ ನಾನೇ ಅವನ ಬಳಿ ನೀನು ಏನು ಮಾತನಾಡಿದ್ದೀಯಾ ಎಂದು ಕೇಳಿದೆ, ಅದಕ್ಕೆ ಅವನು ಸೈದ್ಧಾಂತಿಕವಾಗಿ ಮಾತನಾಡಿದ್ದೀನಿ ಎಂದ. ಇಂಥವರೇ ಮುಂದೆ ಮುಖ್ಯಮಂತ್ರಿಯಾಗಬೇಕೆಂದು ಹೇಳಿಲ್ಲ.

ಅವರು ಆ ಮಾತುಗಳನ್ನು ಏಕೆ ಹೇಳಬೇಕಾಗಿತ್ತು ಎಂದದ್ದಕ್ಕೆ ಈಗ ನೀವು ಕೇಳಿದ್ದೀರಲ್ಲ, ನೀವು ಸುಮ್ನಿರಲ್ಲ, ಏನೋ ಪ್ರಶ್ನೆ ಕೇಳುತ್ತೀರಿ, ಹಾಗೆ ಅಲ್ಲಿ ಕೂಡ ಯಾರೋ ಏನೋ ಪ್ರಶ್ನೆ ಕೇಳಿರಬೇಕು, ಅದಕ್ಕೆ ಯತೀಂದ್ರ ಉತ್ತರ ನೀಡಿರಬೇಕು ಎಂದರು.

ಇಲ್ಲಿ ನಾವು ಸಹಕಾರ ಸಪ್ತಾಹದ ಬಗ್ಗೆ ಮಾತನಾಡಲು ಬಂದಿರುವುದು, ನೀವು ಈ ಪ್ರಶ್ನೆ ಕೇಳಿದ್ದೀರಿ, ಹಾಗೆಯೇ ಅಲ್ಲಿ ಕೂಡ ಯಾರೋ ಏನೋ ಪ್ರಶ್ನೆ ಕೇಳಿರಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಚೀನಾದಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಸಂಚು: ಕಾರಲ್ಲಿ ಕರೆದೊಯ್ದು ಪಾರುಮಾಡಿದ ಪುಟಿನ್; ಢಾಕಾದಲ್ಲಿ US ಅಧಿಕಾರಿ ನಿಗೂಢ ಸಾವು ಬಿಚ್ಚಿಟ್ಟ ಸ್ಫೋಟಕ ರಹಸ್ಯ!

ನನ್ನ ಹೇಳಿಕೆಗೆ ನಾನೂ ಈಗಲೂ ಬದ್ಧ, ಆದ್ರೆ ಸಿದ್ದರಾಮಯ್ಯ 5 ವರ್ಷ ಸಿಎಂ: ಯತೀಂದ್ರ

Musharraf ನ್ನು ಲಕ್ಷಾಂತರ ಡಾಲರ್ ಎಸೆದು ಖರೀದಿಸಿದ್ದೆವು, ಪಾಕಿಸ್ತಾನ ಸಂಪೂರ್ಣ ಅಣ್ವಸ್ತ್ರ ನಿಯಂತ್ರಣವನ್ನು ಅಮೆರಿಕಾಗೆ ಒಪ್ಪಿಸಿತ್ತು : ಮಾಜಿ ಸಿಐಎ ಅಧಿಕಾರಿ

ಬೆಂಗಳೂರು ಟನಲ್ ವಿರುದ್ಧ ಪ್ರಕಾಶ್ ಬೆಳವಾಡಿ ಅರ್ಜಿ; ತೇಜಸ್ವಿ ಸೂರ್ಯ ವಾದ ಮಂಡನೆ

Cricket: ಟೀಂ ಇಂಡಿಯಾಗೆ ಗಾಯದ ಭೀತಿ, ಶ್ರೇಯಸ್ ಅಯ್ಯರ್ ಆಸ್ಪತ್ರೆಗೆ ದೌಡು.. 'ಸೂಪರ್ ಕ್ಯಾಚ್' ಬಳಿಕ ಆಗಿದ್ದೇನು?

SCROLL FOR NEXT