ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸುರಂಗ ಯೋಜನೆಯಿಂದ ಆಗುವ ತೊಂದರೆಯನ್ನು ಮನದಟ್ಟು ಮಾಡಲು ಪ್ರಯತ್ನಿಸಿದ ತೇಜಸ್ವಿ ಸೂರ್ಯ  
ರಾಜ್ಯ

'ಕಾರು ಇಲ್ಲದ ಹುಡುಗನಿಗೆ ಹುಡುಗೀನ ಮದುವೆ ಮಾಡಿ ಕೊಡೋಕೆ ಒಪ್ಪಲ್ಲ, ಇದೆಲ್ಲ ತೇಜಸ್ವಿ ಸೂರ್ಯಗೆ ಯಾಕೆ ಅರ್ಥ ಆಗಲ್ಲ': ಡಿ.ಕೆ ಶಿವಕುಮಾರ್; Video

ಒಂದೇ ಮನೆಯಲ್ಲಿರುವ ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಅವರು ತಮ್ಮ ಮಕ್ಕಳನ್ನು ಖಾಸಗಿ ಸಾರಿಗೆಯ ಮೂಲಕ ಶಾಲೆಗೆ ಕಳುಹಿಸುತ್ತಾರೆ.

ಬೆಂಗಳೂರು: ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸುವ ಸರ್ಕಾರದ ನಿರ್ಧಾರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬದ್ಧರಾಗಿದ್ದಾರೆ, ಪ್ರತಿದಿನ ಹೊಸ ವಾಹನಗಳು ರಸ್ತೆಗಳಿಗೆ ಇಳಿಯುವುದರಿಂದ ಈ ಯೋಜನೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ನೀಡಿದ ಸಲಹೆಗಳಲ್ಲಿ ಯಾವುದೇ ಪರ್ಯಾಯ ಪರಿಹಾರಗಳು ಕಂಡುಬಂದಿಲ್ಲ ಎಂದು ಅವರು ಹೇಳಿದರು. ಎಷ್ಟು ಜನರು ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ, ಈಗ, ಒಂದೇ ಮನೆಯಲ್ಲಿರುವ ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಅವರು ತಮ್ಮ ಮಕ್ಕಳನ್ನು ಖಾಸಗಿ ಸಾರಿಗೆಯ ಮೂಲಕ ಶಾಲೆಗೆ ಕಳುಹಿಸುತ್ತಾರೆ. ಮದುವೆಯಾಗುವ ಹುಡುಗನ ಬಳಿ ಕಾರು ಇಲ್ಲದಿದ್ದರೆ ಹುಡುಗಿ ಮನೆಯವರು ಮದುವೆ ಪ್ರಸ್ತಾಪವನ್ನೇ ತಿರಸ್ಕರಿಸುತ್ತಾರೆ. ಇದು ಸಂಸದ ತೇಜಸ್ವಿ ಸೂರ್ಯ ಅವರಿಗೆ ತಿಳಿದಿಲ್ಲದ ಸಾಮಾಜಿಕ ವಾಸ್ತವ ಎಂದು ಶಿವಕುಮಾರ್ ಸುರಂಗ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಾ ಹೇಳಿದರು.

ಮೆಟ್ರೋ ಮಾರ್ಗ ಮತ್ತು ಉಪನಗರ ಜಾಲವನ್ನು ಹೆಚ್ಚಿಸಲು ಸಂಸದರು ಸಲಹೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ನಾನು ಈ ಯೋಜನೆ ಸಂಪೂರ್ಣ ಪರವಾಗಿದ್ದೇನೆ ಆದರೆ ಕೇಂದ್ರವು ತನ್ನ ಕೊಡುಗೆಯನ್ನು ಹೆಚ್ಚಿಸಬೇಕು. ಯಾವುದೇ ಯೋಜನೆಯನ್ನು ಮಾಡಲು ಹಣದ ಅಗತ್ಯವಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್‌ಗಳು ಮತ್ತು ಟೀಕೆಗಳಿಂದ ಮಾತ್ರ ನೀವು ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲಎಂದು ಅವರು ಹೇಳಿದರು.

ಸಾರ್ವಜನಿಕ ಸಾರಿಗೆ ಬಳಸಲು ಹೇಳಿ

ಕಾರುಗಳನ್ನು ಬಳಸುವುದನ್ನು ನಿಲ್ಲಿಸಿ ಮೆಟ್ರೋ ಮತ್ತು ಬಸ್ ಸಾರಿಗೆಗೆ ಬದಲಾಯಿಸುವಂತೆ ತಮ್ಮ ಮತದಾರರಿಗೆ ಮನವಿ ಮಾಡುವಂತೆ ಅವರು ಬೆಂಗಳೂರಿನ ನಾಲ್ವರು ಸಂಸದರಿಗೆ ಸವಾಲು ಹಾಕಿದರು. ಎಷ್ಟು ಜನ ಅದನ್ನು ಮಾಡುತ್ತಾರೆಂದು ನೋಡೋಣ ಎಂದರು.

ಸಾರ್ವಜನಿಕ ಸಾರಿಗೆ ಮಾತ್ರ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಪರಿಹರಿಸುತ್ತದೆ ಎಂಬ ಕಲ್ಪನೆಯನ್ನು ತಳ್ಳಿಹಾಕಿದರು. ತೇಜಸ್ವಿ ಸೂರ್ಯ ಬಿಎಂಎಲ್‌ಟಿಎ ರಚನೆಯ ಬಗ್ಗೆ ಮಾತನಾಡಿದರು. ನಿಮ್ಮ ಅವಧಿಯಲ್ಲಿ ಅದನ್ನು ಏಕೆ ಮಾಡಲಿಲ್ಲ ಎಂದು ನಾನು ಕೇಳಿದೆ. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಎಷ್ಟು ಹಣವನ್ನು ನೀಡುತ್ತದೆ ಎಂದು ನಾನು ಕೇಳಿದೆ. ನಿಮ್ಮ ಎಲ್ಲಾ ಸಂಸದರು ಬನ್ನಿ, ನಾನು ಕೂಡ ಬರುತ್ತೇನೆ. ನಾವು ಪ್ರಧಾನಿಯನ್ನು ಭೇಟಿ ಮಾಡಿ ನಿಧಿಗಾಗಿ ಒತ್ತಾಯಿಸೋಣ" ಎಂದು ಹೇಳಿದೆ ಎಂದರು.

ಲಾಲ್ ಬಾಗ್ ಭೂಮಿ ಸ್ವಾಧೀನ ಇಲ್ಲ

ಸುರಂಗ ಮಾರ್ಗ ಯೋಜನೆಗಾಗಿ ಆರು ಎಕರೆ ಲಾಲ್‌ಬಾಗ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ ಎಂದು ಶಿವಕುಮಾರ್ ಪ್ರತಿಪಾದಿಸಿದರು. ಸುರಂಗ ರಸ್ತೆಗೆ ಪ್ರವೇಶ ಮತ್ತು ನಿರ್ಗಮನವನ್ನು ಲಾಲ್‌ಬಾಗ್‌ನ ಮೂಲೆಯಲ್ಲಿ ಮಾತ್ರ ಅನುಮತಿಸಲಾಗುತ್ತದೆ ಎಂದು ಹೇಳಿದರು. ಸುರಂಗ ಯೋಜನೆಯ ವಿರುದ್ಧ ಸಲ್ಲಿಸಲಾದ ಪಿಐಎಲ್ ಬಗ್ಗೆ ಕೇಳಿದಾಗ, ಶಿವಕುಮಾರ್ ನ್ಯಾಯಾಂಗ ಪರಿಶೀಲನೆಗೆ ಯಾವುದೇ ಆಕ್ಷೇಪಣೆಗಳಿಲ್ಲ ಎಂದು ಹೇಳಿದರು. ನ್ಯಾಯಾಲಯವು ಸ್ವತಃ ಸಮಿತಿಯನ್ನು ರಚಿಸಿ ಎಲ್ಲಾ ಸ್ಥಳಗಳನ್ನು ಪರಿಶೀಲಿಸಲಿ. ನಮ್ಮ ಅಧಿಕಾರಿಗಳು ಅಥವಾ ನಾನು ಏನಾದರೂ ತಪ್ಪು ಮಾಡಿದ್ದರೆ, ಅವರು ನಮಗೆ ತಿಳಿಸಲಿ. ಅದನ್ನು ಸರಿಪಡಿಸಲು ನಾವು ಸಿದ್ಧರಿದ್ದೇವೆ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವ್ಯಾಪಾರ ಉದ್ವಿಗ್ನತೆ ನಂತರ ಅಮೆರಿಕ-ಚೀನಾ ಸಂಬಂಧ ಸ್ಥಿರಗೊಳಿಸುವ ಪ್ರಯತ್ನ: ಇಂದು ದ.ಕೊರಿಯಾದಲ್ಲಿ ಟ್ರಂಪ್-ಜಿನ್ ಪಿಂಗ್ ಭೇಟಿ, ಮಾತುಕತೆ

ಮ್ಯಾನ್ಮಾರ್ ನಿಂದ ಪಲಾಯನ, ಥಾಯ್ಲೆಂಡ್ ನಲ್ಲಿ 500 ಭಾರತೀಯರ ಬಂಧನ: ವಾಪಾಸ್ ಕರೆತರಲು ಪ್ರಯತ್ನ ಎಂದ ಕೇಂದ್ರ

'ಭಾರತದಲ್ಲಿ ಸ್ವತಂತ್ರವಾಗಿ ಧೈರ್ಯದಿಂದ ಬದುಕುತ್ತಿದ್ದೇನೆ., ಬಾಂಗ್ಲಾದೇಶಕ್ಕೆ ಬರಲ್ಲ.. ಆದರೆ': ಶೇಖ್ ಹಸೀನಾ

South Africa vs England, ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದ 2ನೇ ಅತೀ ದೊಡ್ಡ ಸೋಲು, ಇಂಗ್ಲೆಂಡ್ ಗೆ ತೀವ್ರ ಮುಖಭಂಗ

ICC Women's ODI WorldCup 2025: ಇತಿಹಾಸ ಬರೆದ ದಕ್ಷಿಣ ಆಫ್ರಿಕಾ, ಪ್ರಪ್ರಥಮ ಬಾರಿಗೆ ಫೈನಲ್ ಪ್ರವೇಶ

SCROLL FOR NEXT