ಎಡಮುರಿ ಫಾಲ್ಸ್‌ ಸಾಂದರ್ಭಿಕ ಚಿತ್ರ 
ರಾಜ್ಯ

Edamuri Falls: ಎಡಮುರಿ ಫಾಲ್ಸ್‌ನಲ್ಲಿ ಮುಳುಗಿ ಇಬ್ಬರು ಬೆಂಗಳೂರು ವಿದ್ಯಾರ್ಥಿಗಳ ಸಾವು

ಮೃತ ವಿದ್ಯಾರ್ಥಿಗಳನ್ನು ಬಿಬಿಎ ವಿದ್ಯಾರ್ಥಿಗಳಾದ ವಿಲಿಯಂ ಶ್ಯಾಮ್(21) ಮತ್ತು ವೆಂಕಟೇಶ್ (21) ಎಂದು ಗುರುತಿಸಲಾಗಿದೆ.

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಎಡಮುರಿ ಜಲಪಾತದಲ್ಲಿ ಮುಳುಗಿ ಇಬ್ಬರು ಬೆಂಗಳೂರಿನ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ (Yedamuri Falls) ಶುಕ್ರವಾರ ನಡೆದಿದೆ.

ಎಡಮುರಿ ಫಾಲ್ಸ್‌ ನೋಡಲು ಬೆಂಗಳೂರಿನ ಡಾನ್ ಬಾಸ್ಕೋ ಪದವಿ ಕಾಲೇಜಿನ ಇಬ್ಬರು ತೆರಳಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಗಳನ್ನು ಬಿಬಿಎ ವಿದ್ಯಾರ್ಥಿಗಳಾದ ವಿಲಿಯಂ ಶ್ಯಾಮ್(21) ಮತ್ತು ವೆಂಕಟೇಶ್ (21) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ ವಿಷಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ, ಮೃಹದೇಹಗಳನ್ನು ಹೊರ ತೆಗೆದಿದ್ದಾರೆ.

ವಿಹಾರಕ್ಕೆಂದು ಏಳು ಮಂದಿ ವಿದ್ಯಾರ್ಥಿಗಳ ತಂಡ ಬೆಂಗಳೂರಿನಿಂದ ಎಡಮುರಿ ಫಾಲ್ಸ್ ಗೆ ಬಂದಿತ್ತು. ಈಜಲು ನದಿಗೆ ಇಳಿದಾಗ ವಿಲಿಯಂ ಶ್ಯಾಂ ಮತ್ತು ವೆಂಕಟೇಶ್ ಸುಳಿಗೆ ಸಿಕ್ಕಿ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಸಹಪಾಠಿಗಳು ಹಾಗೂ ಸ್ಥಳೀಯರು ನಡೆಸಿದ ಪ್ರಯತ್ನ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು: ಸ್ಪೀಕರ್ ಆಗಿ ಜೆ.ಸಿ.ಡಿ ಪ್ರಭಾಕರ್ ಅವಿರೋಧವಾಗಿ ಆಯ್ಕೆ, ನಾಳೆ ವಿಜಯ್ ಗೆ ಅಗ್ನಿಪರೀಕ್ಷೆ, AIADMK ಷಣ್ಮುಗಂ ಬಣ ಬೆಂಬಲ!

ಕೇರಳ ಸಿಎಂ ಬಿಕ್ಕಟ್ಟು: ವರಿಷ್ಠರೊಂದಿಗೆ ಮಾತುಕತೆಗಾಗಿ ದೆಹಲಿಗೆ ತೆರಳಿದ ಕೆ. ಸುಧಾಕರನ್, ಇಂದು ಅಂತಿಮ ನಿರ್ಧಾರ ಸಾಧ್ಯತೆ

'ಬಿಜೆಪಿ ನಾಯಕರು ಬುಟ್ಟಿಯೊಳಗಿನ ಏಡಿಗಳಂತೆ: BJP ಮತ್ತು ವಿಶ್ವಾಸ ದ್ರೋಹ ರಕ್ತ ಸಂಬಂಧಿಗಳು; ಮೋದಿಯದ್ದು ಢೋಂಗಿ ಬುದ್ದಿ'

'ಇಂದಿರಾಗಾಂಧಿ ಹೇಳಿದರೆ 'ಶಿಸ್ತು': ಮೋದಿ ಹೇಳಿದರೆ ಅಪರಾಧವೇ? ಚಿನ್ನದ ಮೇಲಿನ ವ್ಯಾಮೋಹ ಬಿಡಿ ಎಂದು ಚಿದಂಬರಂ ಗೋಗರೆದಿದ್ದು ನೆನಪಿಲ್ಲವೇ?'

ಐಶ್ವರ್ಯ ರೈಯಂತೆ ತ್ರಿಶಾ ಕೃಷ್ಣನ್ ಗೆಟಪ್! ನೆಟ್ಟಿಗರ ಕುತೂಹಲವೇನು?

SCROLL FOR NEXT