ಬೆಂಗಳೂರು ರಸ್ತೆ ಗುಂಡಿ 
ರಾಜ್ಯ

ಗುಂಡಿಗಳಿಂದ ಮುಕ್ತವಾಗುತ್ತದೆಯೇ 'ಹೊಂಡ' ಸಿಟಿ ಬೆಂಗಳೂರು!

ರಸ್ತೆಗಳು ಎಂದಾದರೂ ಗುಂಡಿಗಳಿಂದ ಮುಕ್ತವಾಗುತ್ತವೆಯೇ, ಸಂಚಾರ ಸಮಸ್ಯೆಗಳನ್ನು ಎಂದಾದರೂ ಸರಿಪಡಿಸಲಾಗುತ್ತದೆಯೇ? ನಿಯಮಿತ ಪ್ರವಾಹವು ಎಂದಾದರೂ ಕೊನೆಗೊಳ್ಳುತ್ತದೆಯೇ ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ 470 ಪ್ರಮುಖ ರಸ್ತೆಗಳಿದ್ದು, 1,344.7 ಕಿ.ಮೀ. ಉದ್ದದ ರಸ್ತೆಗಳಲ್ಲಿ ಸುಮಾರು ಶೇ. 50 ರಷ್ಟು ಗುಂಡಿಗಳಿವೆ, ಸಂಚಾರ ಇಲಾಖೆಯು ಅಂತಹ ರಸ್ತೆಗಳಲ್ಲಿ 4,830 ಗುಂಡಿಗಳನ್ನು ಗುರುತಿಸಿದೆ.

ಸಂಚಾರ ಮತ್ತು ದೀರ್ಘ ಪ್ರಯಾಣದ ಸಮಯವನ್ನು ಉಲ್ಲೇಖಿಸಿ ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವುದಾಗಿ ಲಾಜಿಸ್ಟಿಕ್ಸ್ ಸಂಸ್ಥೆ ತಿಳಿಸಿದೆ. ನಗರದ ದೀರ್ಘಕಾಲದ ರಸ್ತೆ ಮತ್ತು ಸಂಚಾರ ಸಮಸ್ಯೆಗಳು ಹಾಗೆಯೇ ಉಳಿದಿವೆ. ರಸ್ತೆಗಳು ಎಂದಾದರೂ ಗುಂಡಿಗಳಿಂದ ಮುಕ್ತವಾಗುತ್ತವೆಯೇ, ಸಂಚಾರ ಸಮಸ್ಯೆಗಳನ್ನು ಎಂದಾದರೂ ಸರಿಪಡಿಸಲಾಗುತ್ತದೆಯೇ? ನಿಯಮಿತ ಪ್ರವಾಹವು ಎಂದಾದರೂ ಕೊನೆಗೊಳ್ಳುತ್ತದೆಯೇ ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ. ಒಂದು ವಾರದಲ್ಲಿ ನಡೆದ ಗುಂಡಿಗಳಿಗೆ ಸಂಬಂಧಿಸಿದ ಘಟನೆಗಳು ಐಟಿ ಬೆಲ್ಟ್ ಆಗಿರುವ ಮಹದೇವಪುರದಲ್ಲಿ ಮೂಲಸೌಕರ್ಯದ ಕೊರಕೃತೆ ಬಗ್ಗೆ ತಿಳಿಸಿವೆ.

ಕಳೆದ ವಾರ, 20 ಮಕ್ಕಳನ್ನು ಹೊತ್ತ ಶಾಲಾ ವ್ಯಾನ್ ಪಾಣತ್ತೂರಿನಲ್ಲಿ ರಸ್ತೆ ಬದಿಯ ಕಂದಕಕ್ಕೆ ಡಿಕ್ಕಿ ಹೊಡೆದು ಕೆಸರಿನಲ್ಲಿ ಸಿಲುಕಿತು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅದನ್ನು ಸರಿಪಡಿಸಲು ಮುಂದಾದಾಗ, ಲಾಜಿಸ್ಟಿಕ್ಸ್ ಸಂಸ್ಥೆಯೊಂದು ಬೆಂಗಳೂರಿನಿಂದ ಹೊರಹೋಗುತ್ತಿರುವುದಾಗಿ ಘೋಷಿಸಿತು, ಇದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಇದಿಂದ ಬೆಂಗಳೂರಿನ ಐಟಿ ರಾಜಧಾನಿ ಎಂಬ ಇಮೇಜ್‌ಗೆ ಮತ್ತೆ ಭಾರಿ ಹೊಡೆತ ನೀಡಿತು.

ಕೈಗಾರಿಕಾ ದಿಗ್ಗಜರಾದ ಕಿರಣ್ ಮಜುಂದಾರ್-ಶಾ ಮತ್ತು ಮೋಹನ್ ದಾಸ್ ಪೈ ಅವರು ಸರ್ಕಾರವನ್ನು ಎಚ್ಚರಿಸುತ್ತಾ, ಶಿಥಿಲಗೊಂಡಿರುವ ಮೂಲಸೌಕರ್ಯವನ್ನು ಸರಿಪಡಿಸುವಂತೆ ಹೇಳಿದರು. ಸರ್ಕಾರವು ತುರ್ತು ಆಧಾರದ ಮೇಲೆ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಶಾ ಹೇಳಿದರು, ವಿರೋಧ ಪಕ್ಷ ಬಿಜೆಪಿ ನಗರದ ಮೂಲಸೌಕರ್ಯವನ್ನು ಸರಿಯಾಗಿ ನಿರ್ವಹಿಸದಿದ್ದಕ್ಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು.

ಇದೇ ವೇಳೆ ಆಂಧ್ರಪ್ರದೇಶದ ಸಚಿವ ನರ ಲೋಕೇಶ್ ಕಂಪನಿಯನ್ನು ವೈಜಾಗ್‌ಗೆ ಆಹ್ವಾನಿಸಿದರು, ಇದರಿಂದ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಆಡಳಿತ ಇಕ್ಕಟ್ಟಿಗೆ ಸಿಲುಕಿತು. ಬೆಳ್ಳಂದೂರು, ಸರ್ಜಾಪುರ, ವೈಟ್‌ಫೀಲ್ಡ್, ಪಾಣತ್ತೂರು, ವರ್ತೂರು, ತುಬರಹಳ್ಳಿ, ಬಳಗೆರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ್ಯಂತದ ಶಾಲೆಗಳ 1,500 ಕ್ಕೂ ಹೆಚ್ಚು ಪೋಷಕರು ನಗರ ಸಂಚಾರ ಮುಖ್ಯಸ್ಥರಿಗೆ ಪತ್ರ ಬರೆದು ಸುಮಾರು 25,000 ಶಾಲಾ ಮಕ್ಕಳು ಪ್ರತಿದಿನ ಎರಡು ಗಂಟೆಗಳ ಕಾಲ ಸಂಚಾರದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ, ಸರ್ಕಾರ ಮಧ್ಯಸ ಪ್ರವೇಶಿಸುವಂತೆ ಕೋರಿದರು.

ಪರಿಶೀಲನೆಯ ನಂತರ, ಬೆಂಗಳೂರು ಸಂಚಾರ ಪೊಲೀಸರು ಇತ್ತೀಚೆಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ನಗರದ ಪ್ರಧಾನ ರಸ್ತೆಗಳಲ್ಲಿ 4,830 ಗುಂಡಿಗಳಿದ್ದು, ಸಂಚಾರ ಅವ್ಯವಸ್ಥೆಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಸ್ತೆ ಕಾಮಗಾರಿಗಳಿಗೆ 1,100 ಕೋಟಿ ರೂ.ಗಳನ್ನು ಘೋಷಿಸಿದ್ದು, ನಗರದ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ. ಹೀಗಾಗಲೇ 7,000 ಗುಂಡಿಗಳನ್ನು ಸರಿಪಡಿಸಲಾಗಿದೆ, ಇನ್ನೂ 5,000 ಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಎಲ್ಲಾ ಗುಂಡಿಗಳನ್ನು ಸರಿಪಡಿಸಲು ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳಿಗೆ ನವೆಂಬರ್ ಗಡುವು ನಿಗದಿಪಡಿಸಿದ್ದಾರೆ.

ಗುಂಡಿಗಳನ್ನು ತುಂಬುವುದು 'ವೃತ್ತಾಕಾರದ ಆರ್ಥಿಕತೆ'ಯನ್ನು ರೂಪಿಸುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಚಲನಶೀಲತಾ ತಜ್ಞ ಆಶಿಶ್ ವರ್ಮಾ ಹೇಳಿದರು. ಹಂಚಿಕೆಯಾದ ಹಣವು ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ. ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಪ್ರಯತ್ನಿಸುವಾಗ ಕೆಲವು ಸಂದರ್ಭಗಳಲ್ಲಿ ಗಾಯಗೊಂಡು ಪ್ರಾಣ ಕಳೆದುಕೊಳ್ಳುತ್ತಾರೆ. ಆಸ್ಪತ್ರೆಗೆ ವೆಚ್ಚ ಮತ್ತು ವಿಮಾ ಪರಿಹಾರವು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದೆ" ಎಂದು ಅವರು ವಿವರಿಸಿದರು.

ಪ್ರಯಾಣದ ಸಮಯದಲ್ಲಿ ಉತ್ಪಾದಕತೆಯ ನಷ್ಟದ ಜೊತೆಗೆ, ಕೆಟ್ಟ ರಸ್ತೆಗಳು ಗುಂಡಿಗಳಿಂದ ಬರುವ ಧೂಳು ವಾಯು ಮಾಲಿನ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಅವರು ಹೇಳಿದರು. ರಸ್ತೆ ಗುಂಡಿಗಳನ್ನು ಸರಿಪಡಿಸುವಾಗ ನಿಗಮವು ಉತ್ತಮ ಗುಣಮಟ್ಟದ ಡಾಂಬರು ಬಳಸಬೇಕು" ಎಂದು ಇಂಡಿಯನ್ ರೋಡ್ ಕಾಂಗ್ರೆಸ್ ಸದಸ್ಯ ಡಿ ಪ್ರಸಾದ್ ಹೇಳಿದರು.

ಡಾಂಬರು ಹಾಕುವ ಮೊದಲು, ರಸ್ತೆಯ ಮೂಲ ಸರಿಪಡಿಸುವುದು ಅತ್ಯಗತ್ಯ. ಇದರರ್ಥ ದುರ್ಬಲ ಅಂಶಗಳನ್ನು ಗುರುತಿಸಬೇಕು, ಇದನ್ನು ನಿರ್ಲಕ್ಷಿಸಿದರೆ, ಗುಂಡಿಗಳಾಗುತ್ತವೆ. ರಸ್ತೆಗಳ ಬಾಳಿಕೆಗಾಗಿ ನಿಗಮವು ಪಾಲಿಮರ್ ಮಾರ್ಪಡಿಸಿದ ಡಾಂಬರು ಬಳಸಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.

ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು ಮತ್ತು ನೀರು ರಸ್ತೆಗಳಿಂದ ಚರಂಡಿಗಳಿಗೆ ಹರಿಯಬೇಕು. ಮಳೆಯ ಸಮಯದಲ್ಲಿ ಕೆಲಸವನ್ನು ತಪ್ಪಿಸಬೇಕು. ರಸ್ತೆ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕಟ್ಟುನಿಟ್ಟಾದ ಷರತ್ತನ್ನು ಹೊರಡಿಸಬೇಕು" ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

EC ಬೇಜವಾಬ್ದಾರಿ ಸಂಸ್ಧೆ: ಸ್ವತಂತ್ರ ಸಂಸ್ಥೆಗಳನ್ನು ಪ್ರಧಾನಿ ಮೋದಿ ನಾಶಪಡಿಸಿದ್ದಾರೆ - ಸಿಎಂ ಸಿದ್ದರಾಮಯ್ಯ

Parliament Winter Session: ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಭಾರತ vs ಆಸ್ಟ್ರೇಲಿಯಾ 5ನೇ ಟಿ20 ಪಂದ್ಯ ಮಳೆಗಾಹುತಿ, ಟೀಂ ಇಂಡಿಯಾ ವಶಕ್ಕೆ ಸರಣಿ!

ಸೆಕ್ಸ್‌ಗೆ ಸಹಕರಿಸಲಿಲ್ಲ ಎಂದು 40 ವರ್ಷದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ 14 ವರ್ಷದ ಬಾಲಕ!

ನಟಿ ರುಕ್ಮಿಣಿ ವಸಂತ್ ಹೆಸರಲ್ಲಿ ವಂಚನೆ, ನಕಲಿ ಸಂದೇಶಗಳ ವಿರುದ್ಧ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ 'ಕನಕವತಿ'

SCROLL FOR NEXT