ದೂರುದಾರ ಸಿಎನ್ ಚಿನ್ನಯ್ಯ 
ರಾಜ್ಯ

Dharmasthala case: 'ಕೆಲವು ವ್ಯಕ್ತಿಗಳ ಆಜ್ಞೆಯ ಮೇರೆಗೆ ಇದನ್ನು ಮಾಡಿದ್ದೆ'; ಮ್ಯಾಜಿಸ್ಟ್ರೇಟ್ ಮುಂದೆ ದೂರುದಾರ ಚಿನ್ನಯ್ಯ

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 183ರ ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂಗಳೂರು: ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಮುಂದೆ ಶನಿವಾರ ಸಂಜೆ ಹಾಜರಾಗಿದ್ದು, ಸ್ವಯಂಪ್ರೇರಿತ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯ (45) ಅವರನ್ನು ಬೆಳಿಗ್ಗೆ ಪೊಲೀಸ್ ಬೆಂಗಾವಲಿನಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 183ರ ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜುಲೈ 11 ರಂದು ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸುವ ಸಮಯದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡ (SIT) ಚಿನ್ನಯ್ಯ ಅವರನ್ನು ಬಂಧಿಸಿತ್ತು.

ಪೊಲೀಸರ ಪ್ರಕಾರ, ಚಿನ್ನಯ್ಯ ತನ್ನ ಸ್ವಯಂಪ್ರೇರಿತ ಹೇಳಿಕೆಯಲ್ಲಿ, ಧರ್ಮಸ್ಥಳದಲ್ಲಿ ಎರಡು ದಶಕಗಳ ಅವಧಿಯಲ್ಲಿ ನಡೆದ ಅನೇಕ ಅತ್ಯಾಚಾರಗಳು, ಕೊಲೆಗಳು ಮತ್ತು ಸಾಮೂಹಿಕ ಅಂತ್ಯಕ್ರಿಯೆ ಕುರಿತಾದ ದೂರು ಮತ್ತು ಅವರು ಈ ಹಿಂದೆ ನೀಡಿದ ಸಾಕ್ಷ್ಯ ಎರಡೂ ಸುಳ್ಳು ಮತ್ತು ಕೆಲವು ವ್ಯಕ್ತಿಗಳ ಆಜ್ಞೆಯ ಮೇರೆಗೆ ಮಾಡಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.

ತಾಂತ್ರಿಕ ಸಮಸ್ಯೆಗಳಿಂದಾಗಿ ಪೊಲೀಸರು ಆ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ. ಜುಲೈ 11 ರಂದು ಸಾಕ್ಷ್ಯವಾಗಿ ತಾನು ಹಾಜರುಪಡಿಸಿದ ತಲೆಬುರುಡೆಯನ್ನು ಸೌಜನ್ಯಾಳ ಚಿಕ್ಕಪ್ಪ ವಿಠ್ಠಲ ಗೌಡ ತನಗೆ ನೀಡಿದ್ದನು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಂದುವರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Karur Stampede: ಚುನಾವಣೆ ಹೊಸ್ತಿಲಲ್ಲಿ ವಿಜಯ್ ಗೆ ಸಂಕಷ್ಟ! TVK ರ‍್ಯಾಲಿಗೆ ತಡೆ ನೀಡಲು ಹೈಕೋರ್ಟ್ ಮೊರೆ ಹೋದ ಸಂತ್ರಸ್ತ!

ಟ್ರಂಪ್‌ಗೆ ಅಪರೂಪದ ಖನಿಜಗಳನ್ನು ತೋರಿಸಿ ಹೂಡಿಕೆ ಮಾಡುವಂತೆ ದುಂಬಾಲು ಬಿದ್ದ ಪಾಕಿಸ್ತಾನ!

Karur Stampede: ವಿಜಯ್ ತಪ್ಪಲ್ಲ, ಡಿಎಂಕೆ ಸರ್ಕಾರವನ್ನು ದೂಷಿಸಿದ ಬಿಜೆಪಿ, ಮೃತರ ಕುಟುಂಬಗಳಿಗೆ ರೂ.1 ಲಕ್ಷ ಪರಿಹಾರ ಘೋಷಣೆ!

ಭಾರತಕ್ಕೆ 'ಬುದ್ಧಿ ಕಲಿಸುವ' ಅಗತ್ಯವಿದೆ: 'ಅಮೆರಿಕಕ್ಕೆ ಹಾನಿ ಮಾಡುವ' ಕ್ರಮಗಳಿಂದ ದೂರವಿರಿ; ಮತ್ತೆ ಕಿಡಿಕಾರಿದ Trump ಸಹಾಯಕ ಲುಟ್ನಿಕ್!

"ಕರೂರ್ ಕಾಲ್ತುಳಿತ" ಆಕಸ್ಮಿಕವಲ್ಲ, ಅದೊಂದು ಪಿತೂರಿ, ಸ್ವತಂತ್ರ ತನಿಖೆ ನಡೆಯಲಿ: ವಿಜಯ್ ನೇತೃತ್ವದ ಟಿವಿಕೆ ಪಕ್ಷದ ವಾದ!

SCROLL FOR NEXT