ಸ್ಟಾಲಿನ್ ಮತ್ತು ಡಿ.ಕೆ ಶಿವಕುಮಾರ್ 
ರಾಜ್ಯ

ಕಾಂಗ್ರೆಸ್ ಪಕ್ಷ ಸ್ಟಾಲಿನ್ ಪರ ನಿಲ್ಲಲಿದೆ: ರಾಜಕೀಯದಲ್ಲಿ ಸಿನಿಮಾದಂತೆ ರಾತ್ರೋರಾತ್ರಿ ಸ್ಟಾರ್ ಆಗಲು ಸಾಧ್ಯವಿಲ್ಲ; ಡಿ.ಕೆ. ಶಿವಕುಮಾರ್

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಈ ಕಾರ್ಯಕ್ರಮಕ್ಕೆ ಶುಭಕೋರಿ ಸಂದೇಶ ರವಾನಿಸಿದ್ದಾರೆ. ಕರ್ನಾಟಕದ ಡಿಸಿಎಂ ಆಗಿ ನಾನು ಈ ಕಾರ್ಯಕ್ರಮಕ್ಕೆ ಬಂದಿಲ್ಲ. ನಮ್ಮ ನಾಯಕರ ಪರವಾಗಿ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ

ಚೆನ್ನೈ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸಿಎಂ ಸ್ಟಾಲಿನ್ ಅವರ ಪರವಾಗಿ ನಿಲ್ಲಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು.

ತಮಿಳುನಾಡು ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಶಿವಕುಮಾರ್ ಅವರು ಗುರುವಾರ ಭಾಗವಹಿಸಿ ಮಾತನಾಡಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಈ ಕಾರ್ಯಕ್ರಮಕ್ಕೆ ಶುಭಕೋರಿ ಸಂದೇಶ ರವಾನಿಸಿದ್ದಾರೆ. ಕರ್ನಾಟಕದ ಡಿಸಿಎಂ ಆಗಿ ನಾನು ಈ ಕಾರ್ಯಕ್ರಮಕ್ಕೆ ಬಂದಿಲ್ಲ. ನಮ್ಮ ನಾಯಕರ ಪರವಾಗಿ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಸ್ಟಾಲಿನ್ ಅವರು ನಮ್ಮ ಮೈತ್ರಿಕೂಟದಿಂದ ಸ್ಪರ್ಧೆ ಮಾಡುತ್ತಿರುವ ಹೊಸ ಅಭ್ಯರ್ಥಿಗಳನ್ನು ಪರಿಚಯಿಸಿ, ನಿಮ್ಮ ಮಡಿಲಿಗೆ ಹಾಕಿದ್ದಾರೆ. ನೀವು ನಿಮ್ಮ ಕೈಗಳಿಂದ ಅವರಿಗೆ ಹರಸಿ, ಮತ ಹಾಕಿ ಬೆಂಬಲಿಸಿ. ನಮ್ಮ ಮೈತ್ರಿಕೂಟದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದು, ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಆ ಮೂಲಕ ಡಿಎಂಕೆ ನೇತೃತ್ವದ ನಮ್ಮ ಮೈತ್ರಿಕೂಟ ಮತ್ತೆ ಗೆದ್ದು ನಿಮ್ಮ ಸೇವೆ, ದೇಶದ ಪ್ರಗತಿಗೆ ಕೆಲಸ ಮಾಡಲಿದೆ" ಎಂದು ಭರವಸೆ ನೀಡಿದರು.

ಸಿನಿಮಾ ರಂಗದವರು ರಾಜಕೀಯಕ್ಕೆ ಪ್ರವೇಶಿಸುವುದನ್ನು ಟೀಕಿಸಿದ ಶಿವಕುಮಾರ್, ರಾಜಕೀಯವನ್ನು ಕೃಷಿಗೆ ಹೋಲಿಸಿದರು, ಇದಕ್ಕೆ ರಾತ್ರೋರಾತ್ರಿ ಯಶಸ್ಸಿನ ಬದಲು ದೀರ್ಘಕಾಲೀನ ತಾಳ್ಮೆ ಮತ್ತು ತಳಮಟ್ಟದ ಕೆಲಸ ಬೇಕಾಗುತ್ತದೆ ಎಂದು ಒತ್ತಿ ಹೇಳಿದರು.

ರಾಜಕೀಯವು ಕೃಷಿಯಂತೆ. ಮಳೆ ಬರುತ್ತದೆ; ನೀವು ಬೀಜ ಬಿತ್ತಿರಬೇಕು , ಗೊಬ್ಬರ ಹಾಕಬೇಕು ಮತ್ತು ಕೊಯ್ಲು ಮಾಡುವ ಮೊದಲು ಬಹಳ ಸಮಯ ಕಾಯಬೇಕು. ಚಲನಚಿತ್ರಗಳಲ್ಲಿರುವಂತೆ, ತಕ್ಷಣದ ತಾರಾಪಟ್ಟ ಸಾಧ್ಯವಿಲ್ಲ.

ಜನರಿಗೆ ಸೇವೆ ಸಲ್ಲಿಸಲು, ನಿಮಗೆ ಬದ್ಧತೆ ಮತ್ತು ನಿರಂತರ ಪ್ರಯತ್ನ ಬೇಕು" ಎಂದು ಅವರು ಹೇಳಿದರು. ಡಿಎಂಕೆ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಬಿಜೆಪಿ "ಅಸೂಯೆಯಿಂದ ರಾಜ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ" ಎಂದು ಶಿವಕುಮಾರ್ ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್–ಲೆಬನಾನ್ ಶಾಂತಿ ಪ್ರಯತ್ನ: ಕದನ ವಿರಾಮವಿಲ್ಲದೆ ಮಾತುಕತೆ ಸಾಧ್ಯವಿಲ್ಲ; ಹಿಜ್ಬುಲ್ಲಾ ಷರತ್ತು, ಉದ್ವಿಗ್ನತೆ ಮುಂದುವರಿಕೆ ಸಾಧ್ಯತೆ

ಹಾರ್ಮುಜ್ ಟ್ಯಾಂಕರ್ ಶುಲ್ಕ ವಿವಾದ: ಕೂಡಲೇ ನಿಲ್ಲಿಸಿ...; ಇರಾನ್ ವಿರುದ್ಧ ಗುಡುಗಿದ ಟ್ರಂಪ್, ಕಠಿಣ ಎಚ್ಚರಿಕೆ

ಲೆಬನಾನ್ ಮೇಲೆ ಇಸ್ರೇಲ್ ದಾಳಿಗೆ ಪ್ರತೀಕಾರ; ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಇರಾನ್ ಹಿಂದೆ ಸರಿಯಿತು: ಉಪ ವಿದೇಶಾಂಗ ಸಚಿವ

4ನೇ ಪಂದ್ಯವನ್ನೂ ಸೋತ KKR: ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಟ್ಟ LSG ಆಟಗಾರ ಮುಕುಲ್ ಚೌಧರಿ!

ಲೆಬನಾನ್‌ನಲ್ಲಿ ಹತ್ಯಾಕಾಂಡ ನಿಲ್ಲಿಸದಿದ್ದರೆ ಹುಷಾರ್: ಇಸ್ರೇಲ್ ದಾಳಿ ವಿರುದ್ಧ ಪಾಕಿಸ್ತಾನ ಆಕ್ರೋಶ!

SCROLL FOR NEXT