ಬೆಂಗಳೂರು: ನನಗೆ ದುಡ್ಡಿನ ಅವಶ್ಯಕತೆಯಿಲ್ಲ, ಆದರೆ ಈ ರಾಜ್ಯಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆಯಿದೆ, ಅದಕ್ಕೆ ನನಗೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಿನ್ನೆ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ನನಗೆ ದುಡ್ಡಿನ ಅವಶ್ಯಕತೆ ಇಲ್ಲ, ನನ್ನ ತಂದೆ-ತಾಯಿ ಮಾಡಿಟ್ಟಿದ್ದು, ನಾನು ಸಂಪಾದನೆ ಮಾಡಿರುವ ಹಣವೇ ಎರಡು-ಮೂರು ತಲೆಮಾರಿಗೆ ಆಗುವಷ್ಟು ಇದೆ. ನನಗೆ ಈ ರಾಜ್ಯದಲ್ಲಿ ಇತಿಹಾಸ ನಿರ್ಮಿಸುವ ಆಸೆಯಿದೆ, ಈ ರಾಜ್ಯದ ಜನತೆಗೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಆಸೆಯಿದೆ ಎಂದರು.
ನನಗೆ ಮುಖ್ಯಮಂತ್ರಿಯಾಗಿ ಆಡಳಿತದಲ್ಲಿ ಮುಂದುವರಿಯಲು ದೇವರು ಎಷ್ಟು ದಿನ ಅನುಗ್ರಹಿಸುತ್ತಾರೋ ಗೊತ್ತಿಲ್ಲ, ಆದರೆ ಅಷ್ಟರೊಳಗೆ ಈ ರಾಜ್ಯಕ್ಕೆ ಏನಾದರೊಂದು ಕೊಡುಗೆಯನ್ನು ನೀಡಬೇಕೆಂದು ಆಸೆಯಿದೆ. ಆದರೆ ಅದು ನನ್ನೊಬ್ಬನಿಂದ ಮಾತ್ರ ಸಾಧ್ಯವಿಲ್ಲ.
ನನಗೆ ಈ ಸೇನೆ ಮುಖ್ಯ. ನಿಮ್ಮೆಲ್ಲರ ಸಹಕಾರ ಬೇಕು, ಮುಂದಿನ 25 ವರ್ಷಕ್ಕೆ ಈ ರಾಜ್ಯದ ನೀರಾವರಿಯನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು, ಅದಕ್ಕೆ ಹಣ ಯಾವ ರೀತಿ ತರಬೇಕು, ಯಾವ ಸೋರಿಕೆ ಮಾಡಬೇಕು, ಪರಿಶುದ್ಧ ಆಡಳಿತ ಹೇಗೆ ತರಬೇಕು, ಭ್ರಷ್ಟಾಚಾರವನ್ನು ಹೇಗೆ ನಿಯಂತ್ರಿಸಬೇಕು ಎಂದು ಸಲಹೆ ನೀಡಿ, ನಾನು ನಿಮಗೆ ಸಹಕಾರ ನೀಡಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.