ಪ್ರಾತಿನಿಧಿಕ ಚಿತ್ರ 
ರಾಜ್ಯ

ಬೆಂಗಳೂರು: ಯುವಕನ ಕಿರುಕುಳಕ್ಕೆ ಬೇಸತ್ತು ಅಗರ ಕೆರೆಗೆ ಹಾರಿದ ಶಿವಮೊಗ್ಗ ಮೂಲದ ಯುವತಿ

ಸಂತ್ರಸ್ತೆ ಎಚ್‌ಎಸ್‌ಆರ್ ಲೇಔಟ್‌ನ ಸೆಕ್ಟರ್-1ರಲ್ಲಿರುವ ಪೇಯಿಂಗ್ ಗೆಸ್ಟ್ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದರು ಮತ್ತು ಆ ಪ್ರದೇಶದ ಆಭರಣ ಮಳಿಗೆಯೊಂದರ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ಬೆಂಗಳೂರು: ಶಿವಮೊಗ್ಗ ಮೂಲದ 22 ವರ್ಷದ ಯುವತಿಯೊಬ್ಬರು, ಯುವಕನ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್‌ನಿಂದಾಗಿ ಇಲ್ಲಿನ ಅಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮೃತರನ್ನು ಸಾಗರ ತಾಲೂಕಿನ ಬೆಲ್ಲಲಮಕ್ಕಿ ಸಮೀಪದ ಅರೋಡಿ ನಿವಾಸಿ ವಾಣಿಶ್ರೀ ಎಂದು ಗುರುತಿಸಲಾಗಿದೆ.

ಸಂತ್ರಸ್ತೆ ಎಚ್‌ಎಸ್‌ಆರ್ ಲೇಔಟ್‌ನ ಸೆಕ್ಟರ್-1ರಲ್ಲಿರುವ ಪೇಯಿಂಗ್ ಗೆಸ್ಟ್ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದರು ಮತ್ತು ಆ ಪ್ರದೇಶದ ಆಭರಣ ಮಳಿಗೆಯೊಂದರ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಷೇಕ್ ಎಂಬ ವ್ಯಕ್ತಿ ತಮಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಮತ್ತು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ವಾಣಿಶ್ರೀ ಅವರು ಪತ್ರವೊಂದನ್ನು ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 22ರ ಬೆಳಿಗ್ಗೆ, ಆಕೆಯ ರೂಮ್‌ಮೇಟ್ ಆಕೆಯ ಸಹೋದರಿ ಪೂಜಾಗೆ ಆ ಚೀಟಿಯ ಬಗ್ಗೆ ತಿಳಿಸಿದ್ದಾರೆ. ಪೂಜಾ ಮತ್ತು ಪಿಜಿ ಮಾಲೀಕರು ವಾಣಿಶ್ರೀಗಾಗಿ ಹುಡುಕಾಟ ನಡೆಸಿದ್ದಾರೆ ಮತ್ತು ನಂತರ ಎಚ್‌ಎಸ್‌ಆರ್ (HSR) ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹಾಗೂ ಕುಟುಂಬದ ಸದಸ್ಯರು ಅಗರ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಶೋಧ ನಡೆಸಿದಾಗ, ಆಕೆಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದರು.

ಪೂಜಾ ನೀಡಿದ ದೂರಿನ ಆಧಾರದ ಮೇಲೆ, ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಅಭಿಷೇಕ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108ರ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಅಭಿಷೇಕ್, ಕರೆಗಳು, ಸಂದೇಶಗಳು, ಫೋಟೊಗಳು ಮತ್ತು ವಿಡಿಯೋಗಳ ಮೂಲಕ ವಾಣಿಶ್ರೀಗೆ ಕಿರುಕುಳ ನೀಡುತ್ತಿದ್ದ ಎಂದು ಪೂಜಾ ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನ ಪ್ರಕಾರ, ವಾಣಿಶ್ರೀ ಮತ್ತು ಅಭಿಷೇಕ್ ಪರಸ್ಪರ ಪರಿಚಿತರಾಗಿದ್ದು, ಪಿಯುಸಿ ಹಂತದಲ್ಲಿ ಒಟ್ಟಿಗೆ ಓದಿದ್ದರು. ಸಾಗರದಲ್ಲಿ ತಮ್ಮ ಪದವಿ ಶಿಕ್ಷಣ ಪೂರ್ಣಗೊಳಿಸಿದ ನಂತರ, ವಾಣಿಶ್ರೀ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ್ದರು.

ಈ ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Bengaluru Tunnel Road: ಸ್ವತಃ ಅಖಾಡಕ್ಕಿಳಿದ ಗೌತಮ್ ಅದಾನಿ; CM ಡಿಕೆಶಿ ನಿವಾಸಕ್ಕೆ ದಿಢೀರ್ ಭೇಟಿ – ಸುರಂಗ ರಸ್ತೆ ಕುರಿತು ಮಹತ್ವದ ಚರ್ಚೆ

Video: ಯಶ್​ಗೆ ಬಿಗ್ ಶಾಕ್! ‘ಟಾಕ್ಸಿಕ್’ ಇವೆಂಟ್​ನಲ್ಲಿ ಅವಘಡ; FIR ದಾಖಲು

ಅಮೆರಿಕದಲ್ಲಿ ಮಗಳ ಮುಂದೆಯೇ ಗುಜರಾತ್ ಉದ್ಯಮಿಗೆ ಗುಂಡಿಕ್ಕಿ ಹತ್ಯೆ; ಹೊಸ ವ್ಯವಹಾರ ಆರಂಭಿಸಿದ ವಾರದಲ್ಲೇ ಭೀಕರ ಕೃತ್ಯ!

ತಲೆಮಾರುಗಳ ಜನರ ಪರಿಶ್ರಮ; ಬೆಂಗಳೂರು ಭವಿಷ್ಯವನ್ನೇ ಹಾಳುಮಾಡಲು ಹೊರಟಿದ್ದೀರಾ?: ಸಿಎಂ ಡಿಕೆ ಶಿವಕುಮಾರ್ ವಿರುದ್ಧ ತೇಜಸ್ವಿ ಸೂರ್ಯ ಆಕ್ರೋಶ

ಯಾದಗಿರಿ: ವಿದ್ಯುತ್ ಕಂಬಕ್ಕೆ ಬೊಲೆರೊ ವಾಹನ ಡಿಕ್ಕಿ: ಭೀಕರ ಅಪಘಾತದಲ್ಲಿ ಮೂವರು ಸಾವು; 8 ಕಾರ್ಮಿಕರ ಸ್ಥಿತಿ ಗಂಭೀರ