ಕೇಂದ್ರ ಸಚಿವ ಡಾ.ಎಲ್. ಮುರುಗನ್ 
ರಾಜ್ಯ

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

ತಪ್ಪು ಮಾಹಿತಿ ಇಲ್ಲದೇ ಕೇವಲ ಸತ್ಯ ಮಾಹಿತಿ ನೀಡುತ್ತದೆ. ಸಾರ್ವಜನಿಕರಿಗೆ ನಿಜವಾದ ಸಂಗತಿ ತಲುಪಿಸುವ ಕೆಲಸ ಮಾಡಿದೆ. ದೇಶದ ಆಕಾಶವಾಣಿ ದೂರದರ್ಶನದ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಾ.ಎಲ್.ಮುರುಗನ್ ತಿಳಿಸಿದರು.

ಶಿವಮೊಗ್ಗ: ಶಿವಮೊಗ್ಗದ ವಿದ್ಯಾನಗರದಲ್ಲಿ ನಿರ್ಮಿಸಿರುವ 10 ಕಿಲೋ ವ್ಯಾಟ್ FM ಟ್ರಾನ್ಸ್ ಮೀಟರ್ ಕೇಂದ್ರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಇಂದು ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಮೋದಿ ಅವರು ನಿರಂತರ ವಾಗಿ ದೇಶದ ಅಭಿವೃದ್ದಿಯತ್ತ ಪರಿಶ್ರಮಿಸುತ್ತಿದ್ದಾರೆ. ಎಫ್ ಎಂ ಶಿವಮೊಗ್ಗ ಭದ್ರಾವತಿ ಜನರಿಗೆ ಗಿಫ್ಟ್ ಆಗಿದೆ. ಈ ಎಫ್ ಎಂ ಸ್ಥಳೀಯ ಎಲ್ಲ ಸಂಸ್ಕೃತಿ ಚಟುವಟಿಕೆಗೆ ವೇದಿಕೆ ಆಗಿದೆ. ಎಫ್ ಎಂ ಒಂದು ಶಕ್ತಿ ಶಾಲಿ ಮಾಧ್ಯಮ ಆಗಿದೆ ಎಂದರು.

ಆಕಾಶವಾಣಿ ಜನರನ್ನು ಸುಲಭವಾಗಿ ತಲುಪುವ ಮಾರ್ಗ ಆಗಿದೆ. ತುರ್ತು ಪರಿಸ್ಥಿತಿಯಲ್ಲಿ ಆಕಾಶವಾಣಿ ಒಂದು ಸಂಪರ್ಕ ಮಾಧ್ಯಮ ಆಗಿತ್ತು. ತಪ್ಪು ಮಾಹಿತಿ ಇಲ್ಲದೇ ಕೇವಲ ಸತ್ಯ ಮಾಹಿತಿ ನೀಡುತ್ತದೆ. ಸಾರ್ವಜನಿಕರಿಗೆ ನಿಜವಾದ ಸಂಗತಿ ತಲುಪಿಸುವ ಕೆಲಸ ಮಾಡಿದೆ. ದೇಶದ ಆಕಾಶವಾಣಿ ದೂರದರ್ಶನದ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದರು.

ಡಿಜಿಟಲ್ ರೇಡಿಯೋ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಧ್ವನಿಯ ವ್ಯವಸ್ಥೆ ಮಾಡಲಾಗಿದೆ. ದೇಶದ ಮೂಲೆ ಮೂಲೆಗೆ ಆಕಾಶವಾಣಿ ಮೂಲಕ ತಲುಪುತ್ತಿದೆ ಎಂದು ಹೇಳಿದರು.

ಎಲ್ಲ 23 ಪ್ರಾದೇಶಿಕ ಭಾಷೆಯಲ್ಲಿ ಪ್ರಸಾರ ಆಗುತ್ತದೆ. ಆಲ್ ಇಂಡಿಯಾ ರೇಡಿಯೋ ಮೂಲಕ ತಲುಪುತ್ತಿದೆ.. 2024 ರಿಂದ ಆಕಾಶವಾಣಿ ಯಲ್ಲಿ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಮೋದಿ ಅಂದುಕೊಂಡಂತೆ ಎಫ್ ಎಂ ದೇಶದಲ್ಲಡೆ ತಲುಪುತ್ತಿದೆ. ಒಂದೇ ವರ್ಷದಲ್ಲಿ ಶಿವಮೊಗ್ಗ ಆಕಾಶವಾಣಿ ಯೋಜನೆ ಪೂರ್ಣ ಗೊಂಡಿದೆ. ಆಕಾಶವಾಣಿ ರಾಜ್ಯದಲ್ಲಿ ಪ್ರಮುಖ ಮಾಧ್ಯಮ ಆಗಿದೆ. ಇನ್ನೂ ಉಡುಪಿ ಮತ್ತು ಬೆಂಗಳೂರಿನಲ್ಲಿ ಆಕಾಶವಾಣಿ ವಿಸ್ತರಣೆ ಯೋಜನೆ ಶೀಘ್ರ ಆರಂಭವಾಗಲಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಪೈಲೆಟ್ ಯೋಜನೆಯಲ್ಲಿ ಶೀಘ್ರ ದಲ್ಲಿ ಶಿವಮೊಗ್ಗ ನಗರದ ಎಲ್ಲ ಪಾರ್ಕ್ ನಲ್ಲಿ ಆಕಾಶವಾಣಿ ಎಫ್ ಎಂ ಸೆಟ್ ಗಳ ವ್ಯವಸ್ಥೆ ಮಾಡಲಾಗುವುದು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

SCROLL FOR NEXT