ಪ್ರಾತಿನಿಧಿಕ ಚಿತ್ರ 
ರಾಜ್ಯ

ಕೋಗಿಲು ಲೇಔಟ್ ಬಳಿಕ ಹೊರಮಾವುವಿನಲ್ಲಿ 39 ಅನಧಿಕೃತ ಮನೆಗಳನ್ನು ಕೆಡವಲು ಬಿಇಸಿಸಿ ಆದೇಶ!

ಜನವರಿ 7 ರಂದು ಆದೇಶ ಹೊರಡಿಸಲಾಗಿದ್ದು, ಅನಧಿಕೃತ ಕಟ್ಟಡಗಳನ್ನು ತಾವೇ ತೆರವುಗೊಳಿಸಲು ಮಾಲೀಕರಿಗೆ 30 ದಿನಗಳ ಗಡುವನ್ನು ನೀಡಲಾಗಿದ್ದು, ಇದು ವಿಫಲವಾದರೆ ಬಿಇಸಿಸಿ ಅವುಗಳನ್ನು ನೆಲಸಮಗೊಳಿಸುತ್ತದೆ.

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ 160ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿದ ನಂತರ, ಹೊರಮಾವುವಿನಲ್ಲಿ 39 ಮನೆಗಳನ್ನು ಕೆಡವಲು ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ) ದೃಢೀಕರಣ ಆದೇಶ ಹೊರಡಿಸಿದೆ.

ಕೋಗಿಲು ಪ್ರಕರಣಕ್ಕಿಂತ ಭಿನ್ನವಾಗಿ, ತ್ಯಾಜ್ಯ ಸಂಸ್ಕರಣಾ ಘಟಕಕ್ಕಾಗಿ ಉದ್ದೇಶಿಸಲಾದ ಭೂಮಿಯನ್ನು ಆಕ್ರಮಿಸಿಕೊಂಡು ಜನರು ಮನೆಗಳನ್ನು ನಿರ್ಮಿಸಿದ್ದಾರೆ. ಇಲ್ಲಿ ಮಾಲೀಕರು ವಿವಿಧ ಸರ್ವೆ ನಂಬರ್‌ನ ಸುಮಾರು 1 ಎಕರೆ ಭೂಮಿಯಲ್ಲಿ 39 ಮನೆಗಳನ್ನು ನಿರ್ಮಿಸಿದ್ದಾರೆ. ಈ ಮನೆಗಳ ನಡುವೆ ಸರಿಯಾದ ಅಂತರವೇ ಇಲ್ಲ ಮತ್ತು ಅಗ್ನಿ ಸುರಕ್ಷತಾ ಎನ್‌ಒಸಿ ಹೊಂದಿಲ್ಲ.

ಜನವರಿ 7 ರಂದು ಆದೇಶ ಹೊರಡಿಸಲಾಗಿದ್ದು, ಅನಧಿಕೃತ ಕಟ್ಟಡಗಳನ್ನು ತಾವೇ ತೆರವುಗೊಳಿಸಲು ಮಾಲೀಕರಿಗೆ 30 ದಿನಗಳ ಗಡುವನ್ನು ನೀಡಲಾಗಿದ್ದು, ಇದು ವಿಫಲವಾದರೆ ಬಿಇಸಿಸಿ ಅವುಗಳನ್ನು ನೆಲಸಮಗೊಳಿಸುತ್ತದೆ ಮತ್ತು ಸಾರಿಗೆ, ಸಿಬ್ಬಂದಿ ಮತ್ತು ಯಂತ್ರೋಪಕರಣಗಳ ವೆಚ್ಚವನ್ನು ಆಸ್ತಿ ಮಾಲೀಕರಿಂದಸೇ ವಸೂಲಿ ಮಾಡುತ್ತದೆ.

ಕೆಆರ್ ಪುರಂ ಜಂಟಿ ಆಯುಕ್ತೆ ಸುಧಾ ಟಿಎನ್ಐಇ ಜೊತೆಗೆ ಮಾತನಾಡಿ, ಬಿಇಸಿಸಿ ಡಿಸೆಂಬರ್‌ನಲ್ಲಿ ಅಗತ್ಯವಿರುವ ಅಂತರ ಮಾರ್ಗಸೂಚಿಗಳನ್ನು ಅನುಸರಿಸದೆ ನಿರ್ಮಿಸಲಾಗಿರುವುದರಿಂದ ಮಳೆನೀರಿನ ಚರಂಡಿಯ ಉದ್ದಕ್ಕೂ ನಿರ್ಮಿಸಲಾದ 39 ಮನೆಗಳ ವಿರುದ್ಧ ತಾತ್ಕಾಲಿಕ ಆದೇಶವನ್ನು ಹೊರಡಿಸಿದೆ ಎಂದು ಹೇಳಿದರು. ಹೊರಮಾವು- ಕೆ.ಆರ್. ಪುರಂನ ಆಗ್ರಾದ ಸರ್ವೆ ನಂಬರ್ 11/1, 11/2, 11/3, 11/4, 11/5 ರಲ್ಲಿ ಡೆವಲಪರ್ ಒಟ್ಟು 2 ಎಕರೆ 10 ಗುಂಟೆ ವಿಸ್ತೀರ್ಣದಲ್ಲಿ ವಿಲ್ಲಾಗಳನ್ನು ನಿರ್ಮಿಸಿದ್ದಾರೆ.

'ಡೆವಲಪರ್ ಸೆಟ್‌ಬ್ಯಾಕ್ (ಅಂತರ) ನಿಯಮಗಳು ಮತ್ತು ಬಫರ್ ವಲಯ ನಿಯಮಗಳನ್ನು ಪಾಲಿಸಲು ವಿಫಲರಾಗಿದ್ದಾರೆ ಮತ್ತು ಮನೆಗಳು ಮಳೆನೀರಿನ ಚರಂಡಿಯ ಅಂಚಿನಲ್ಲಿವೆ. ತಾತ್ಕಾಲಿಕ ಆದೇಶಗಳನ್ನು ನೀಡಲಾಯಿತು ಮತ್ತು ಜನವರಿ 7 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೆಕ್ಷನ್ 356 ಮತ್ತು ಸಂಬಂಧಿತ ಜಿಬಿಎ ನಿಯಮಗಳ ಅಡಿಯಲ್ಲಿ ದೃಢೀಕರಣ ಆದೇಶವನ್ನು ನೀಡಲಾಯಿತು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರುವರಿ 6ರ ನಂತರ ಪಾಲಿಕೆಯು ಕಟ್ಟಡಗಳನ್ನು ನೆಲಸಮಗೊಳಿಸುತ್ತದೆ ಎಂದು ಅವರು ಹೇಳಿದರು.

ಮನೆಗಳನ್ನು ಕೆಡವದಿದ್ದರೆ, ಅವುಗಳನ್ನು ಮುಗ್ಧ ಖರೀದಿದಾರರಿಗೆ ಮಾರಾಟ ಮಾಡಲಾಗುತ್ತದೆ ಎಂದು BECC ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಂಗಡ ಹಣವನ್ನು ಸಹ ಪಾವತಿಸಲಾಗಿದೆ ಎಂದು ತೋರುತ್ತದೆ ಮತ್ತು ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ಡೆವಲಪರ್‌ಗಳು ಮಾರಾಟವನ್ನು ಪೂರ್ಣಗೊಳಿಸಬಹುದು. ಆಗ ಖರೀದಿದಾರರು ಮೋಸ ಹೋಗುತ್ತಾರೆ. ನಮ್ಮ ಅಧಿಕಾರಿಗಳು ಕಟ್ಟಡಗಳನ್ನು ಸೀಲ್ ಮಾಡಿ, ಗೇಟ್‌ಗಳಿಗೆ ಬೀಗ ಹಾಕಿದ್ದಾರೆ. ಮನೆಗಳನ್ನು ವಿಲ್ಲಾ ಮಾದರಿಯಲ್ಲಿ ನಿರ್ಮಿಸಲಾಗಿದೆ ಮತ್ತು ನಗರದೊಳಗೆ 18 ಕಿ.ಮೀ. ವ್ಯಾಪ್ತಿಯಲ್ಲಿ GBA ವಿಲ್ಲಾಗಳಿಗೆ ಅನುಮತಿ ನೀಡುವುದಿಲ್ಲ. ಡೆವಲಪರ್‌ ಬಳಿ ಯಾವುದಕ್ಕೂ ಅನುಮತಿ ಇಲ್ಲ' ಎಂದು ಪಟ್ಟಣ ಯೋಜನಾ ಅಧಿಕಾರಿಯೊಬ್ಬರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BMC Exit poll results: ಮತಗಟ್ಟೆ ಸಮೀಕ್ಷೆ ಪ್ರಕಟ! ಯಾರಿಗೆ ಎಷ್ಟು ಸ್ಥಾನ?

ತಪ್ಪಿದ ಮಹಾ ದುರಂತ: ಲಗೇಜ್ ಸಿಲುಕಿ ಏರ್ ಇಂಡಿಯಾ ವಿಮಾನದ ಇಂಜಿನ್ ಗೆ ಹಾನಿ, ಪ್ರಯಾಣಿಕರು ಬಚಾವ್! Video

BCCI ವಿರುದ್ಧ ತೊಡೆ ತಟ್ಟಿದ್ದ ಬಾಂಗ್ಲಾದೇಶಕ್ಕೆ ತನ್ನದೇ ಆಟಗಾರರಿಂದ ಮುಖಭಂಗ, BPL ಟೂರ್ನಿಯೇ ರದ್ದು?

ಸಾಯಿ ಲೇಔಟ್ ಪ್ರವಾಹ ಮರುಕಳಿಸುವುದಿಲ್ಲ, ಏಪ್ರಿಲ್ ಅಂತ್ಯದೊಳಗೆ ರೈಲ್ವೆ ವೆಂಟ್ ಕೆಲಸ ಮುಗಿಸಿ: ಜಿಬಿಎ ಮುಖ್ಯಸ್ಥ ಮಹೇಶ್ವರ ರಾವ್

Video: ದೇಗುಲ ಉತ್ಸವಕ್ಕೆ ಬಂದಿದ್ದ ಗಜೇಂದ್ರನ್ ಆನೆ ಕುಸಿದು ಸಾವು!

SCROLL FOR NEXT