ಧನುಷ್ ಮತ್ತು ಸಂತೋಷ್ 
ರಾಜ್ಯ

ರಾಮನಗರ: ಈಜಲು ಹೋಗಿದ್ದ ಇಬ್ಬರು PUC ವಿದ್ಯಾರ್ಥಿಗಳು ಕಬ್ಬಾಳು ಕೆರೆಯಲ್ಲಿ ಮುಳುಗಿ ಸಾವು

ಒಂದೇ ಕಾಲೇಜಿನ ಮೂವರು ಹುಡುಗಿಯರು ಸೇರಿದಂತೆ 11 ವಿದ್ಯಾರ್ಥಿಗಳು ಬುಧವಾರ ಕಬ್ಬಾಳು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪ್ರಾರ್ಥನೆ ಸಲ್ಲಿಸಿ ಊಟ ಮಾಡಿದ ನಂತರ, ಸಂಜೆ ಕಬ್ಬಾಳು ಕೆರೆಗೆ ಹೋದರು. ಅವರಲ್ಲಿ ಯಾರಿಗೂ ಈಜುವುದು ಹೇಗೆಂದು ತಿಳಿದಿರಲಿಲ್ಲ.

ಬೆಂಗಳೂರು : ಕೆರೆಯ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ‌ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದ ಬಳಿ ನಡೆದಿದೆ.

ಧನುಷ್(18) ಹಾಗೂ ಸಂತೋಷ್(18) ಮೃತರು. ಇವರು ಬೆಂಗಳೂರಿನ ಉತ್ತರಹಳ್ಳಿ ನಿವಾಸಿಗಳಾಗಿದ್ದು, ಬೆಂಗಳೂರಿನ ಬನಶಂಕರಿ ಬಳಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಪೊಲೀಸರ ಪ್ರಕಾರ, ಒಂದೇ ಕಾಲೇಜಿನ ಮೂವರು ಹುಡುಗಿಯರು ಸೇರಿದಂತೆ 11 ವಿದ್ಯಾರ್ಥಿಗಳು ಬುಧವಾರ ಕಬ್ಬಾಳು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪ್ರಾರ್ಥನೆ ಸಲ್ಲಿಸಿ ಊಟ ಮಾಡಿದ ನಂತರ, ಸಂಜೆ ಕಬ್ಬಾಳು ಕೆರೆಗೆ ಹೋದರು. ಅವರಲ್ಲಿ ಯಾರಿಗೂ ಈಜುವುದು ಹೇಗೆಂದು ತಿಳಿದಿರಲಿಲ್ಲ.

ಕೆರೆ ಆಳವಿದ್ದ ಕಾರಣ ಧನುಷ್ ನೀರಿಗೆ ಜಾರಿ ಮುಳುಗಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ಸಂತೋಷ್ ಅವರನ್ನು ರಕ್ಷಿಸಲು ಪ್ರಯತ್ನಿಸಿ ಆತನು ಮುಳುಗಿ ಸಾವನ್ನಪ್ಪಿದ್ದಾನೆ. ನಂತರ ಸ್ನೇಹಿತರು ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗೆ ಮಾಹಿತಿ ನೀಡಿದರು. ಗುರುವಾರ ಮಧ್ಯಾಹ್ನ, ರಕ್ಷಣಾ ಸಿಬ್ಬಂದಿ ಧನುಷ್ ಅವರ ಶವವನ್ನು ಹೊರತೆಗೆದರು ಮತ್ತು ಸಂತೋಷ್ ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರ ನಗರ ಪಾಲಿಕೆ ಮತ ಎಣಿಕೆ: ಮಹಾಯುತಿಗೆ ಆರಂಭಿಕ ಮುನ್ನಡೆ: ಮುಂಬೈನಲ್ಲಿ ಮಹಾಯುತಿ-ಠಾಕ್ರೆಗಳ ನಡುವೆ ನಿಕಟ ಸ್ಪರ್ಧೆ

ಇರಾನ್ ಸಂಘರ್ಷ: ಭಾರತೀಯರ ಕರೆತರಲು 'ಕೇಂದ್ರ' ಸಜ್ಜು, ಇಂದೇ ಮೊದಲ ವಿಮಾನದ ಹಾರಾಟ!

ಕುರ್ಚಿ ಹಗ್ಗ ಜಗ್ಗಾಟ: ದೆಹಲಿಗೆ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಜೊತೆ ಮಹತ್ವದ ಭೇಟಿ!

ಪುರುಷರ ವೇಷಧರಿಸಿ ಕಳ್ಳತನ; ಖತರ್ನಾಕ್ ಕಳ್ಳಿಯರು ಸಿಕ್ಕಿಬಿದ್ದಿದ್ದೇ ರೋಚಕ! Video

The UP Story: 'ಚೆನ್ನಾಗಿ ಕಾಣ್ತೀಯಾ..' ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿದ ಮುಸ್ಲಿಂ ಸ್ನೇಹಿತೆಯರು!, Video

SCROLL FOR NEXT