ಬೆಂಗಳೂರು: ಮೈಸೂರು ರಾಜಮನೆತನವು ಕಾಫಿ ವ್ಯವಹಾರಕ್ಕೆ ಎಂಟ್ರಿ ನೀಡಿದ್ದು , ಬೇರುಂಡ ಕಾಫಿ ಎಂಬ ಬ್ರಾಂಡ್ ಅನಾವರಣಗೊಳಿಸಿದೆ. ಗಂಡಬೆರುಂಡ ಎಂಬುದು ಪೌರಾಣಿಕ ಪಕ್ಷಿಯಾಗಿದ್ದು, ಇದು ಒಡೆಯರ್ ರಾಜವಂಶದ ರಾಜ ಲಾಂಛನವಾಗಿ ಕಾರ್ಯನಿರ್ವಹಿಸಿತು.
ಕಾಫಿ ಪ್ರಭೇದಗಳಿಗೆ ಅರಮನೆಯ ಆನೆಗಳ ಹೆಸರನ್ನು ಇಡಲಾಗಿದೆ - ದ್ರೋಣ ಮತ್ತು ಅರ್ಜುನ ಮತ್ತು ಗಜೇಂದ್ರ ಎಂಬ ಅರಮನೆಯ ಆನೆಗಳ ಹೆಸರನ್ನು ಈ ಕಾಫಿಗಳಿಗೆ ಇಡಲಾಗಿದೆ. ಮೂರೂ ಎಎ-ದರ್ಜೆಯ, ಚಿಕೋರಿ-ಮುಕ್ತ, ಹುರಿದು ಪುಡಿ ಮಾಡಿರುವ ಕಾಫಿಯಾಗಿದೆ. ಚಿಕ್ಕಮಗಳೂರು, ಬಿಳಿಗಿರಿ ರಂಗನ ಬೆಟ್ಟಗಳು ಮತ್ತು ಕೂರ್ಗ್ನಿಂದ ಕಾಫಿ ಬೀಜಗಳನ್ನು ಪಡೆಯಲಾಗಿದೆ.
ಜಯಚಾಮರಾಜ ಒಡೆಯರ್ ಅವರ ಮೊಮ್ಮಗಳು ರಾಜಕುಮಾರಿ ಜಯಪಾಲಶ್ರೀ ಅನಿಲ್ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಕಾಫಿ ಸಂಗ್ರಹಗಳನ್ನು ಪರಿಚಯಿಸುವುದು, ನೆರಳು ಆಧಾರಿತ ಕಾಫಿ ಬೆಳೆ ಹಾಗೂ ಸನ್-ಡ್ರೈಡ್ ಪ್ರಕ್ರಿಯೆಯಂತಹ ಸುಸ್ಥಿರ ಕೃಷಿ ಪದ್ಧತಿಗಳಿಗೆ ಆದ್ಯತೆ ನೀಡುವುದು ಮತ್ತು ಕಾಫಿ ಉದ್ಯಮದ ವಿವಿಧ ಹಂತಗಳಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು ಸಂಸ್ಥೆಯ ಪ್ರಮುಖ ಗುರಿಗಳಾಗಿವೆ ಎಂದು ಸಂಸ್ಥಾಪಕರು ತಿಳಿಸಿದರು.
ನನ್ನ ತಾಯಿ ತಮ್ಮ ಬಾಲ್ಯದ ದಿನಗಳಲ್ಲಿ ಬೆಳಗಿನ ಜಾವ ಹೊಸದಾಗಿ ತಯಾರಿಸಿದ ಕಾಫಿಯ ಪರಿಮಳದೊಂದಿಗೆ ದಿನ ಆರಂಭವಾಗುತ್ತಿದ್ದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ನಮ್ಮ ಕುಟುಂಬದಲ್ಲಿ ಕಾಫಿ ಎಂದರೆ ಕೇವಲ ಪಾನೀಯವಲ್ಲ, ಅದು ತಲೆಮಾರುಗಳನ್ನು ಜೋಡಿಸುವ ಭಾವನಾತ್ಮಕ ಬಾಂಧವ್ಯ. ಆದ್ದರಿಂದ ಇಂದು ನಾವು ಕೇವಲ ಒಂದು ಬ್ರ್ಯಾಂಡ್ ಆಗಿ ಪರಿಚಯಿಸುತ್ತಿಲ್ಲ; ನಮ್ಮ ಕುಟುಂಬದ ಪರಂಪರೆಯ ಒಂದು ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇವೆ ಎಂದರು.