ನೀಟ್ ಪರೀಕ್ಷೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ 89 ಪೇಪರ್ ಲೀಕ್ ಆಗಿದೆ. ಕೇಂದ್ರ ಸರ್ಕಾರ ಬೇಜವಬ್ದಾರಿ ಎಷ್ಟಿದೆ ಎಂದರೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇದೆಲ್ಲ ಸಹಜ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಹಾಗಾದರೆ ಈ ದೇಶದ ಯುವಜನತೆಯ ಭವಿಷ್ಯವೇನು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿಯಂತಹ ಸ್ವಯಂಪ್ರೇರಿತ ಪಕ್ಷ ಸಮಾಜದಲ್ಲಿ ತಲೆಯೆತ್ತುತ್ತಿದೆ ಎಂದರೆ ಜನರಲ್ಲಿ ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿರುವ ತಳಮಳವನ್ನು ತೋರಿಸುತ್ತದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷರು ಅದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಗಂಭೀರ ವಿಷಯವಲ್ಲವೇ, ಯಾಕೆ ಹೀಗಾಗುತ್ತಿದೆ ಎಂದು ಯೋಚನೆ ಮಾಡಬೇಕಾದ ವಿಷಯವಲ್ಲವೇ ಎಂದು ಕೇಳಿದರು.
ಸರ್ಕಾರದ ಅಸಮರ್ಥತೆ, ಜನರ ಗೊಂದಲ, ತಳಮಳದಿಂದ ಇಂತಹ ಪಕ್ಷಗಳು ಬರುತ್ತಿವೆ, ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ತೆಗೆಯುವ ಬದಲು ಅವರನ್ನು ಸನ್ಮಾನ ಮಾಡುತ್ತಿರುವುದು ದುರಂತ ಎಂದರು.