ಮೃತಪಟ್ಟ ಲಾವಣ್ಯ, ಆರೋಪಿ ಚೇತನ್ 
ರಾಜ್ಯ

ಮಂಗಳೂರು: ಹಾಡಹಗಲೇ ಭಯಾನಕ ಘಟನೆ; ಜನರ ಎದುರೇ ಮಚ್ಚಿನಿಂದ ಕೊಚ್ಚಿ ಯುವತಿಯ ಕಗ್ಗೊಲೆ!

ಕಕ್ಕೆಪದವು ನಿವಾಸಿ ಲಾವಣ್ಯ (23) ಮೃತಪಟ್ಟ ಯುವತಿ. ಕಲ್ಲಡ್ಕದ ಚಿಕಿತ್ಸಾಲಯವೊಂದರಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದ ಈಕೆ ಕೆಲಸ ಮುಗಿಸಿಕೊಂಡು ಬಿ.ಸಿ. ರೋಡ್ ನ KSRTC ಬಸ್ ನಿಲ್ದಾಣದಿಂದ ಬಸ್ ಹತ್ತಿ ಕುಳಿತಿದ್ದಾಗ ಹಲ್ಲೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಯುವಕನೋರ್ವ ಸಾರ್ವಜನಿಕರ ಎದುರೇ ಮಚ್ಚಿನಿಂದ ಹಲ್ಲೆ ನಡೆಸಿ ಯುವತಿಯನ್ನು ಕಗ್ಗೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಕಕ್ಕೆಪದವು ನಿವಾಸಿ ಲಾವಣ್ಯ (23) ಮೃತಪಟ್ಟ ಯುವತಿ. ಕಲ್ಲಡ್ಕದ ಚಿಕಿತ್ಸಾಲಯವೊಂದರಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದ ಈಕೆ ಕೆಲಸ ಮುಗಿಸಿಕೊಂಡು ಬಿ.ಸಿ. ರೋಡ್ ನ KSRTC ಬಸ್ ನಿಲ್ದಾಣದಿಂದ ಬಸ್ ಹತ್ತಿ ಕುಳಿತಿದ್ದಾಗ, ಬಸ್ ಹತ್ತಿದ್ದ ಆರೋಪಿ ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ.

ಅದನ್ನು ನೋಡಿದ ಯುವತಿ ಓಡಿ ಹೋಗಿದ್ದು, ಆಕೆಯನ್ನು ಹಿಂಬಾಲಿಸಿದ ದುಷ್ಕರ್ಮಿ, ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಆಕೆಯ ಕುತ್ತಿಗೆಯ ಹಿಂಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ಮಚ್ಚಿನ ಏಟಿಯಿಂದ ತೀವ್ರವಾಗಿ ಗಾಯಗೊಂಡ ಯುವತಿಯನ್ನು ಕೂಡಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.

ಆರೋಪಿಯನ್ನು ಚೇತನ್ ಎಂದು ಗುರುತಿಸಲಾಗಿದೆ. ಈತ ಯುವತಿಯ ದೂರದ ಸಂಬಂಧಿಯಾಗಿದ್ದು, ಆತ ಮಾತ್ರ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Puri Rath Yatra: ಭಾರಿ ಜನಸಾಗರ; ಕಾಲ್ತುಳಿತ ಓರ್ವ ಸಾವು, ನೂರಾರು ಮಂದಿಗೆ ಗಾಯ!

India Vs England: ರಿಕಿ ಪಾಂಟಿಂಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ; ಸಾರ್ವಕಾಲಿಕ ಟಾಪ್-ಫೈವ್ ಪಟ್ಟಿಗೆ ಸೇರ್ಪಡೆ!

ಕಿಸ್ಮತ್ ಕಿ ಕಹಾನಿ: ಅಂದು Lionel Messi ಬಾತ್ ಟಬ್ ನಲ್ಲಿ ಮುದ್ದಾಡಿದ್ದ ಮಗುವೇ ಇಂದು FIFA WorldCup ಫೈನಲ್ ನಲ್ಲಿ ಎದುರಾಳಿ!

ಫೋಟೋಗೆ ಪೋಸ್ ಕೊಡುತ್ತಿದ್ದಾಗಲೇ ಬಿಹಾರದ ಸ್ನೇಕ್ ಲೇಡಿಗೆ ಕಚ್ಚಿದ king cobra; 51ನೇ ಬಾರಿ ಕಡಿತ! Video

ಧರ್ಮೇಂದ್ರ ಪ್ರಧಾನ್ ಕಿತ್ತು ಹಾಕಿ ಸೋನಂ ವಾಂಗ್ಚೂಕ್‌ ರನ್ನು ದೇಶದ ಶಿಕ್ಷಣ ಸಚಿವರನ್ನಾಗಿ ನೇಮಿಸಿ: ಕೇಜ್ರಿವಾಲ್ ಆಗ್ರಹ