ಚಿತ್ರದುರ್ಗ: ಆಸ್ತಿ ವಿಚಾರಕ್ಕೆ ನಡೆದ ಗಲಾಟೆ ವೇಳೆ ಮಗನೇ ತಂದೆಯನ್ನು ಹತ್ಯೆಗೈದಿರುವ ದಾರುಣ ಘಟನೆ ಕಲ್ಕುಂಟೆ ಗ್ರಾಮದ ಬಳಿ ನಡೆದಿದೆ. ಕೊಲೆಯಾದವರನ್ನು 65 ವರ್ಷದ ಚಂದ್ರಣ್ಣ ಎಂದು ಗುರುತಿಸಲಾಗಿದ್ದು ಪುತ್ರ ಪ್ರಸನ್ನ ಕೊಲೆಗೈದ ಆರೋಪಿಯಾಗಿದ್ದಾನೆ.
ಪ್ರೀತಿಸಿ ಮದುವೆಯಾಗಿದ್ದ ಪ್ರಸನ್ನ ಪತ್ನಿ ಜೊತೆ ಬೇರೆ ಮನೆ ಮಾಡಿದ್ದನು. ಆದರೆ ಆಗಾಗ್ಗೆ ಮನೆಗೆ ಬಂದು ಅಪ್ಪನ ಹೆಸರಲ್ಲಿದ್ದ 5 ಎಕರೆ ಜಮೀನಿಗಾಗಿ ಗಲಾಟೆ ಮಾಡುತ್ತಿದ್ದನು. ಗಲಾಟೆಯ ವೇಳೆ ಕೋಲಿನಿಂದ ಹೊಡೆದು ತಂದೆಯನ್ನು ಹತ್ಯೆ ಮಾಡಿದ್ದಾನೆ. ಕೊಲೆ ಪ್ರಕರಣ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.