ವಿಧಾನಸೌಧ (ಸಂಗ್ರಹ ಚಿತ್ರ) 
ರಾಜ್ಯ

ಸಚಿವ ಸಂಪುಟ ವಿಸರ್ಜನೆ ಬಳಿಕ ಸಿಎಂಒ ಸಿಬ್ಬಂದಿಗಳ ಬಿಡುಗಡೆ; ಮೇ 29ರಿಂದಲೇ ಆದೇಶ ಜಾರಿಗೆ

ಜೂನ್ 3ರಂದು ಹೊರಡಿಸಲಾದ ಅಧಿಕೃತ ಆದೇಶದಲ್ಲಿ, ಪಟ್ಟಿಯಲ್ಲಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮೇ 29ರಿಂದ ಪೂರ್ವಾನ್ವಯವಾಗುವಂತೆ (retrospective effect) ಕರ್ತವ್ಯಗಳಿಂದ ಬಿಡುಗಡೆ ಮಾಡಲಾಗಿದೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ವಿಸರ್ಜನೆಯಾದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಕಚೇರಿ (CMO) ಅಧಿಕಾರಿಗಳನ್ನು ತಮ್ಮ ತಮ್ಮ ಕರ್ತವ್ಯಗಳಿಂದ ಬಿಡುಗಡೆ ಮಾಡಲಾಗಿದೆ.

ಮೂಲಗಳ ಪ್ರಕಾರ ಮುಖ್ಯಮಂತ್ರಿ ಕಚೇರಿ (CMO), ಸಲಹೆಗಾರರ ಕಚೇರಿಗಳು ಹಾಗೂ ದೆಹಲಿಯ ಕರ್ನಾಟಕ ವಿಶೇಷ ಪ್ರತಿನಿಧಿ ಕಚೇರಿಯಲ್ಲಿ ನಿಯೋಜನೆ, ಗುತ್ತಿಗೆ ಮತ್ತು ಔಟ್‌ಸೋರ್ಸಿಂಗ್ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರ್ನಾಟಕ ಸರ್ಕಾರ ಬಿಡುಗಡೆಗೊಳಿಸಿದೆ.

ಜೂನ್ 3ರಂದು ಹೊರಡಿಸಲಾದ ಅಧಿಕೃತ ಆದೇಶದಲ್ಲಿ, ಪಟ್ಟಿಯಲ್ಲಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮೇ 29ರಿಂದ ಪೂರ್ವಾನ್ವಯವಾಗುವಂತೆ (retrospective effect) ಕರ್ತವ್ಯಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಸರ್ಕಾರದ ಆದೇಶದಂತೆ, ಬಿಡುಗಡೆಗೊಂಡ ಸಿಬ್ಬಂದಿ ತಮ್ಮ ವಶದಲ್ಲಿರುವ ಕಡತಗಳು, ದಾಖಲೆಗಳು ಮತ್ತು ಇತರೆ ಆಡಳಿತಾತ್ಮಕ ಜವಾಬ್ದಾರಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು. ಜೊತೆಗೆ, ಸರ್ಕಾರ ನೀಡಿರುವ ವಾಹನಗಳು, ಗುರುತಿನ ಚೀಟಿಗಳು, ಕಚೇರಿ ಉಪಕರಣಗಳು ಸೇರಿದಂತೆ ಎಲ್ಲಾ ಸರ್ಕಾರಿ ಆಸ್ತಿಗಳನ್ನು ಹಿಂತಿರುಗಿಸುವಂತೆ ಸೂಚಿಸಲಾಗಿದೆ.

ಆಡಳಿತಾತ್ಮಕ ವರ್ಗಾವಣೆಯು ಸುಗಮವಾಗಿ ನಡೆಯುವ ಉದ್ದೇಶದಿಂದ, ನಿಯಮಗಳ ಪ್ರಕಾರ ಇಂತಹ ಸಿಬ್ಬಂದಿಗೆ ಗರಿಷ್ಠ ಏಳು ದಿನಗಳವರೆಗೆ ಕಾರ್ಯನಿರ್ವಹಿಸಲು ಅವಕಾಶವಿದೆ. ಈ ಅವಧಿಯಲ್ಲಿ ಅವರು ಕಡತಗಳ ಹಸ್ತಾಂತರ, ಬಾಕಿ ಕೆಲಸಗಳ ಪೂರ್ಣಗೊಳಿಸುವಿಕೆ ಹಾಗೂ ಇತರ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಮುಗಿಸಬೇಕಾಗುತ್ತದೆ.

ಸಾಮಾನ್ಯವಾಗಿ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಅಥವಾ ಸಚಿವ ಸಂಪುಟ ವಿಸರ್ಜನೆಯಾದಾಗ ಮುಖ್ಯಮಂತ್ರಿ ಕಚೇರಿ, ಸಚಿವರ ಕಚೇರಿಗಳು ಹಾಗೂ ವಿಶೇಷ ಪ್ರತಿನಿಧಿಗಳ ಕಚೇರಿಗಳಲ್ಲಿ ರಾಜಕೀಯ ನೇಮಕಾತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡುವುದು ರೂಢಿಯಾಗಿದೆ. ಹೊಸ ಮುಖ್ಯಮಂತ್ರಿ ಮತ್ತು ಹೊಸ ಆಡಳಿತ ವ್ಯವಸ್ಥೆ ಅಧಿಕಾರ ವಹಿಸಿಕೊಂಡ ನಂತರ ಅಗತ್ಯವಿದ್ದರೆ ಹೊಸ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

ಈ ಕ್ರಮದೊಂದಿಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಅವಧಿಗೆ ಸಂಬಂಧಿಸಿದ ಕಚೇರಿ ವ್ಯವಸ್ಥೆಯ ಅಧಿಕೃತ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಂತಾಗಿದೆ. ಹೊಸ ಸರ್ಕಾರ ಅಧಿಕಾರ ಸ್ವೀಕರಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಚೇರಿಯ ಆಡಳಿತಾತ್ಮಕ ಪುನರ್‌ರಚನೆಗೆ ಇದು ಮೊದಲ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

DK Shivakumar and cabinet swearing-in LIVE updates | ಕರ್ನಾಟಕ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ

ಕರ್ನಾಟಕದ 18ನೇ ಸಿಎಂ ಆಗಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್

ವೈಮಾನಿಕ ಇಂಧನ ಬೆಲೆ ಸ್ಥಿರಗೊಳಿಸಲು ಕೇಂದ್ರ ಸರ್ಕಾರದಿಂದ 10,000 ಕೋಟಿ ರೂ. ನೆರವು

ಡಿಕೆ ಶಿವಕುಮಾರ್ ಪ್ರಮಾಣವಚನ: 13 ಶಾಸಕರಿಗೆ ಮಂತ್ರಿ ಸ್ಥಾನ, ಯಾರಿಗೆಲ್ಲಾ ಸಚಿವಗಿರಿ? ಇಲ್ಲಿದೆ ಪಟ್ಟಿ

ನೂತನ ಸಿಎಂ ಆಗಿ DK Shivakumar ಪ್ರಮಾಣ ವಚನ: ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ UT Khader ರಾಜೀನಾಮೆ

SCROLL FOR NEXT