ಸಂತ್ರಸ್ತೆ ಮಂಜುಳಾ - ವಿಡಿಯೋ ರೆಕಾರ್ಡ್ ಮಾಡಿದ್ದ ಪತಿ ಪ್ರದೀಪ್ 
ರಾಜ್ಯ

'ಹೆಂಡತಿ ಇಲ್ಲದೆ ನಾನಿರಲು ಸಾಧ್ಯವಿಲ್ಲ': ವಿಡಿಯೋ ಮಾಡಿಟ್ಟು ಹೋಂ ಗಾರ್ಡ್ ಪತ್ನಿಯನ್ನು ಇರಿದು ಕೊಂದ ಪತಿ!

ಪ್ರದೀಪ್ ಆನ್‌ಲೈನ್ ಬೆಟ್ಟಿಂಗ್‌ಗೆ ವ್ಯಸನಿಯಾಗಿದ್ದು, ಇದು ಆಗಾಗ್ಗೆ ಕೌಟುಂಬಿಕ ಕಲಹಗಳಿಗೆ ಕಾರಣವಾಗುತ್ತಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನ ಮಹದೇವಪುರ ಪ್ರದೇಶದಲ್ಲಿ ಭಾನುವಾರ ಗೃಹರಕ್ಷಕ ದಳದ 32 ವರ್ಷದ ಮಹಿಳೆಯನ್ನು ಆಕೆಯ ಪತಿಯೇ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ಮಂಜುಳಾ ಎಂದು ಗುರುತಿಸಲಾಗಿದ್ದು, ಮಹದೇವಪುರ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಜುಳಾ ಮತ್ತು ಪ್ರದೀಪ್ ಮದುವೆಯಾಗಿ 15 ವರ್ಷಗಳಾಗಿವೆ ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರದೀಪ್ ಆನ್‌ಲೈನ್ ಬೆಟ್ಟಿಂಗ್‌ಗೆ ವ್ಯಸನಿಯಾಗಿದ್ದು, ಇದು ಆಗಾಗ್ಗೆ ಕೌಟುಂಬಿಕ ಕಲಹಗಳಿಗೆ ಕಾರಣವಾಗುತ್ತಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಮಂಜುಳಾ ಬಗ್ಗೆ ಆಗಾಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಆತ, ಮಕ್ಕಳ ತಂದೆ ಯಾರೆಂದು ಪ್ರಶ್ನಿಸುತ್ತಿದ್ದ. ಈ ಕಿರುಕುಳವನ್ನು ಸಹಿಸಲಾಗದೆ, ಮಂಜುಳಾ ಕಳೆದ ಒಂದೂವರೆ ತಿಂಗಳಿನಿಂದ ಮಕ್ಕಳೊಂದಿಗೆ ತನ್ನ ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಪೊಲೀಸರ ಪ್ರಕಾರ, ಪ್ರದೀಪ್ ಭಾನುವಾರ ತನ್ನ ಜಾಕೆಟ್ ಒಳಗೆ ಚಾಕು ಇಟ್ಟುಕೊಂಡು ಅತ್ತೆ ಮನೆಗೆ ಬಂದಿದ್ದಾನೆ. ತನ್ನನ್ನು ಕ್ಷಮಿಸಿ ಮನೆಗೆ ಹಿಂತಿರುಗುವಂತೆ ಬೇಡಿಕೊಂಡಿದ್ದಾನೆ. ಆಕೆಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಆತ, ಇದ್ದಕ್ಕಿದ್ದಂತೆ ಆಕೆಯ ತಾಯಿ ಮತ್ತು ಇಬ್ಬರು ಮಕ್ಕಳ ಮುಂದೆ 20ಕ್ಕೂ ಹೆಚ್ಚು ಬಾರಿ ಮಂಜುಳಾಗೆ ಇರಿದಿದ್ದಾನೆ.

ಕೊಲೆಗೂ ಮುನ್ನ ಪ್ರದೀಪ್ ವಿಡಿಯೋ ಸಂದೇಶವೊಂದನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ತನ್ನ ಬೆಟ್ಟಿಂಗ್ ಚಟವು ತನ್ನ ಕುಟುಂಬವನ್ನು ಹಾಳು ಮಾಡಿದೆ. ನನ್ನ ಹೆಂಡತಿ ಇಲ್ಲದೆ ನಾನು ಇರಲು ಸಾಧ್ಯವಿಲ್ಲ. ನಾನು ಅವಳ ತಂದೆ ಮತ್ತು ಸೋದರ ಮಾವನೊಂದಿಗೆ ಮಾತನಾಡಿದ್ದೇನೆ. ಅವಳು ಸಂಜೆ ಕೆಲಸ ಮುಗಿಸಿ ಹಿಂತಿರುಗುತ್ತಾಳೆ. ನಾನು ಮತ್ತೊಮ್ಮೆ ಅವಳನ್ನು ನನ್ನ ಬಳಿಗೆ ಹಿಂತಿರುಗುವಂತೆ ಕೇಳುತ್ತೇನೆ. ಅವಳು ಮತ್ತೆ ಬರುವುದಿಲ್ಲ ಎಂದು ಹೇಳಿದರೆ, ನಾನು ಅವಳನ್ನು ಅಲ್ಲಿಯೇ ಕೊಲ್ಲುತ್ತೇನೆ' ಎಂದು ಅವನು ವಿಡಿಯೋದಲ್ಲಿ ಹೇಳಿದ್ದಾನೆ.

ದಾಳಿಯ ನಂತರ, ಪ್ರದೀಪ್ ಅದೇ ಚಾಕುವಿನಿಂದ ತನ್ನ ಕೈಯನ್ನು ಕತ್ತರಿಸಿಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹೇಡಿತನದ ಕೃತ್ಯ'; ಜೈಪುರದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ Abhijeet Dipkeಗೆ ಕಪಾಳ ಮೋಕ್ಷ, ಹಲ್ಲೆ ! Video Viral

RSS ನೋಂದಣಿ ಬಗ್ಗೆ ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಪತ್ರ: ಕಾನೂನು ಪಾಲನೆ ಕುರಿತು ಸ್ಪಷ್ಟನೆ ಕೇಳಿದ ಗೃಹ ಸಚಿವ!

ಸೂಪರ್ ಓವರ್​ನಲ್ಲಿ ಭಾರತ ಸೋಲುತ್ತಿದ್ದಂತೆ ಶ್ರೀಲಂಕಾ ಆಟಗಾರರು ಹಾಗೂ Vaibhav Sooryavanshi ನಡುವೆ ಗಲಾಟೆ, Video!

ತ್ರಿಕೋನ ಸರಣಿ: ರೋಚಕ ಪಂದ್ಯ ಟೈನಲ್ಲಿ ಅಂತ್ಯ; ಸೂಪರ್ ಓವರ್​ನಲ್ಲಿ ಲಂಕಾ ವಿರುದ್ಧ ಎಡವಿದ ಭಾರತಕ್ಕೆ ಸೋಲು!

ಮೈಸೂರು: ಮಟ ಮಟ ಮಧ್ಯಾಹ್ನವೇ ಪಬ್‌ನಲ್ಲಿ ಭೀಕರ ಅಗ್ನಿ ದುರಂತ; ಇಬ್ಬರು ಸುಟ್ಟು ಕರಕಲು, 7 ಮಂದಿ ಸ್ಥಿತಿ ಗಂಭೀರ!

SCROLL FOR NEXT