ಉಳುವಪ್ಪ ತೆಗೂರು, ಅನಿತಾ, ಯತೀಶ್ ಕುಮಾರ್‌ 
ರಾಜ್ಯ

ರಾಜಸ್ಥಾನದಲ್ಲಿ ಲಂಚಕ್ಕೆ ಕೈಯೊಡ್ಡಿ ರಾಜ್ಯಕ್ಕೆ ಕಳಂಕ: PSI ಅನಿತಾ ಸೇರಿ ಮೂವರ ಅಮಾನತು- ಪ್ರಿಯಾಂಕ್ ಖರ್ಗೆ

ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸಲು ರಾಜಸ್ಥಾನಕ್ಕೆ ಹೋಗಿದ್ದಾಗ ಲಂಚಕ್ಕೆ ಕೈಯೊಡ್ಡಿದ್ದ ವೇಳೆ ಎಚ್‌ಎಎಲ್ ಮಹಿಳಾ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ಗಳಾದ ಉಳುವಪ್ಪ ತೆಗೂರು ಹಾಗೂ ಯತೀಶ್ ಕುಮಾರ್‌ ಅವರನ್ನು ಜೈಪುರದ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತ್ತು.

ಬೆಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸಲು ರಾಜಸ್ಥಾನಕ್ಕೆ ಹೋಗಿದ್ದಾಗ ಲಂಚಕ್ಕೆ ಕೈಯೊಡ್ಡಿದ್ದ ವೇಳೆ ಎಚ್‌ಎಎಲ್ ಮಹಿಳಾ ಠಾಣೆಯ PSI ಕೆ.ಅನಿತಾ, ಹೆಡ್‌ ಕಾನ್‌ಸ್ಟೇಬಲ್‌ಗಳಾದ ಉಳುವಪ್ಪ ತೆಗೂರು ಹಾಗೂ ಯತೀಶ್ ಕುಮಾರ್‌ ಅವರನ್ನು ಜೈಪುರದ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತ್ತು. ಇದರ ಬೆನ್ನಲ್ಲೇ ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, PSI ಕೆ.ಅನಿತಾ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಯಾರಾದಾರೂ ಭಾಗಿಯಾಗಿದ್ದಾರಾ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ. ಯಾರಾದರೂ ಶಾಮೀಲಾಗಿರುವುದು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು. ವ್ಯವಸ್ಥೆಯನ್ನು ಸರಿಪಡಿಸಲು ಸ್ವಲ್ಪ ಸಮಯಬೇಕು. ಬೇರು ಮಟ್ಟದಲ್ಲಿ ಸರಿಪಡಿಸಬೇಕಿದೆ ಎಂದು ಹೇಳಿದರು.

ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆಗಾಗಿ ಪಿಎಸ್‌ಐ ಅನಿತಾ ಮತ್ತು ತಂಡ ಜೈಪುರಕ್ಕೆ ತೆರಳಿತ್ತು. ಆದರೆ, ಪ್ರಕರಣದಿಂದ ಕೈಬಿಡಲು ಆರೋಪಿಗಳ ಕುಟುಂಬದವರಿಂದ 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕುಟುಂಬದವರು ರಾಜಸ್ಥಾನದ ಎಸಿಬಿಗೆ ದೂರು ನೀಡಿದ್ದರು. ನಂತರ ಜೈಪುರದ ಹೋಟೆಲ್ ಗಂಗೌರ್‌ನಲ್ಲಿ 40 ಸಾವಿರ ರೂ. ಲಂಚ ಸ್ವೀಕರಿಸುವಾಗ ಉಳುವಪ್ಪ ತೆಗೂರು ಅವರನ್ನು ಹಣ ಸಮೇತ ಬಂಧಿಸಿತ್ತು. ವಿಚಾರಣೆಯಲ್ಲಿ ಪಿಎಸ್‌ಐ ಕೆ.ಅನಿತಾ ಮತ್ತು ಮತ್ತೊಬ್ಬ ಹೆಡ್‌ಕಾನ್‌ಸ್ಟೇಬಲ್‌ ಯತೀಶ್ ಕುಮಾರ್‌ ಅವರನ್ನು ಬಂಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾನಿಲ್ಲದಿದ್ದರೆ ಇಸ್ರೇಲ್ ಇರುತ್ತಿರಲಿಲ್ಲ': ನೆತನ್ಯಾಹು ವಿರುದ್ಧ ಟ್ರಂಪ್ ಅಸಮಾಧಾನ; 'ಅವರಿಗೆ' ಸಾಧ್ಯವಾಗದಿದ್ದರೆ ಹಿಜ್ಬೊಲ್ಲಾನ ಸಿರಿಯಾ ನೋಡಿಕೊಳ್ಳುತ್ತೆ; Video

ಅತಿಕ್ರಮಣ ಆರೋಪ: ವಾರಣಾಸಿಯ Ganj Shaheeda ಮಸೀದಿ ತೆರವಿಗೆ ರೈಲ್ವೆ ಇಲಾಖೆ ನೋಟಿಸ್

ಕರ್ನಾಟಕದ ಬೆಳವಣಿಗೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬದ್ಧರಾಗಿದ್ದಾರೆ: Biocon ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ

ಹನಿಮೂನ್ ಗೆ ತೆರಳಿದ್ದ ಮಹಿಳಾ ಟೆಕ್ಕಿ ಶವವಾಗಿ ರಕ್ತ-ಮೂತ್ರದ ಮಡುವಿನಲ್ಲಿ ಪತ್ತೆ! ಆ ನಿಗೂಢರಾತ್ರಿ ಆಗಿದ್ದೇನು?

ಮಹಾರಾಷ್ಟ್ರದಲ್ಲಿ 'Operation Tiger' ಭೀತಿ: DCM ಶಿಂಧೆ ಸಂಪರ್ಕದಲ್ಲಿ ಉದ್ಧವ್ ಬಣದ 7 ಸಂಸದರು, 16 ಶಾಸಕರು!

SCROLL FOR NEXT