ಡಿ ಕೆ ಶಿವಕುಮಾರ್  
ರಾಜ್ಯ

'ಬೆಂಗಳೂರಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಹೊರಗಿನವರು, SIR ನಿಂದ ಅವಕಾಶನೂ ಇದೆ, ಅಪಾಯನೂ ಇದೆ ಮತದಾನ ಹಕ್ಕು ಉಳಿಸಿಕೊಳ್ಳಿ': CM ಡಿಕೆ ಶಿವಕುಮಾರ್-Video

ಮತದಾರರ ಪಟ್ಟಿಯಿಂದ ಹೊರಹೋದರೆ ಸರ್ಕಾರದ ಸವಲತ್ತು, ಹಕ್ಕು ಸಿಗುವುದಿಲ್ಲ, ಅದನ್ನು ರಾಜ್ಯದ ಜನತೆ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ ಅವಕಾಶನೂ ಇದೆ, ಅಪಾಯನೂ ಇದೆ, ಮತದಾರರ ಪಟ್ಟಿಯನ್ನು ಹೊಸದಾಗಿ ಮಾಡಲಾಗುತ್ತದೆ, ವಿಶೇಷ ಪರಿಷ್ಕರಣೆಯಲ್ಲಿ ಬಿಎಲ್ ಒಗಳು ನಿಮ್ಮ ಮನೆ ಬಾಗಿಲಿಗೆ ಬಂದು ಫಾರ್ಮ್ ಕೊಟ್ಟಾಗ ಅದನ್ನು ಭರ್ತಿ ಮಾಡಿದರೆ ಮಾತ್ರ ಮತದಾರರಿಗೆ ಮತದಾನ ಹಕ್ಕು ಇರುತ್ತದೆ, ಇಲ್ಲದಿದ್ದರೆ ಮತದಾನ ಹಕ್ಕು ಕಳೆದುಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.

ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶೇಕಡಾ 90ರಷ್ಟು ಮ್ಯಾಪಿಂಗ್ ನಡೆದಿರುವುದು ನಮ್ಮ ಮುಂದೆ ನೆರೆ ರಾಜ್ಯಗಳ ಉದಾಹರಣೆಯಿದೆ. ಮತದಾರರ ಪಟ್ಟಿಯಿಂದ ಹೊರಹೋದರೆ ಸರ್ಕಾರದ ಸವಲತ್ತು, ಹಕ್ಕು ಸಿಗುವುದಿಲ್ಲ, ಅದನ್ನು ರಾಜ್ಯದ ಜನತೆ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಂದ ಕಿತ್ತುಹಾಕುವುದಿಲ್ಲ. ಬೆಂಗಳೂರು ನಗರದಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಹೊರಗಿನವರಿದ್ದಾರೆ. ಅವರ ಮತದಾನ ಇಲ್ಲಿದೆಯೇ, ಅವರ ಊರುಗಳಲ್ಲಿದಿಯೇ ಎಂದು ಪರಿಶೀಲಿಸಬೇಕು, ಇಲ್ಲಿ ಮತದಾನ ಹಕ್ಕು ಇರುವವರಿಗೆ ಆದ್ಯತೆ, ರಕ್ಷಣೆ ನೀಡಬೇಕೆಂಬುದು ನಮ್ಮ ಉದ್ದೇಶ ಎಂದರು.

ಕರ್ನಾಟಕದಲ್ಲಿ ಮತದಾನ ಹಕ್ಕು ಇಲ್ಲದವರಿಗೆ ಸರ್ಕಾರದ ಗ್ಯಾರಂಟಿ ಯೋಜನೆ ಏಕೆ ಕೊಡಬೇಕು, ಒಂದೊಂದು ಮನೆಗೆ ಒಬ್ಬೊಬ್ಬರಿಗೆ ಮಾತ್ರ ಸರ್ಕಾರದ ಗ್ಯಾರಂಟಿ ಸವಲತ್ತು ಸಿಗಬೇಕು ಎಂಬ ಉದ್ದೇಶದಿಂದ ಮತ್ತೆ ಅರ್ಜಿ ಸಲ್ಲಿಸಲು ಹೇಳುತ್ತಿದ್ದೇವೆ ಎಂದರು. ಬಡವರಿಗೆ ನೀಡಿದ ಸವಲತ್ತುಗಳನ್ನು ಪಡೆಯಲು ಮೂಲ ಮತದಾನ ಹಕ್ಕು ಇರಬೇಕು, ಮತದಾನ ಹಕ್ಕು ಕಾಪಾಡಿಕೊಳ್ಳಿ ಎಂದು ಡಿ ಕೆ ಶಿವಕುಮಾರ್ ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ವೈಮಾನಿಕ ದಾಳಿಗೆ ತತ್ತರಿಸಿದ ಲೆಬನಾನ್: 16 ಮಂದಿ ಬಲಿ; ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

NEET ಭದ್ರತೆಗೆ ಆದ್ಯತೆ; ದೇಶಾದ್ಯಂತ Telegram app ತಾತ್ಕಾಲಿಕ ನಿಷೇಧ, ಕೇಂದ್ರದ ಆದೇಶ ಎತ್ತಿಹಿಡಿದ Delhi ಹೈಕೋರ್ಟ್..!

US-Iran ಒಪ್ಪಂದ ಬೆನ್ನಲ್ಲೇ Hormuzನಲ್ಲಿ ತೈಲ ಸಾಗಣೆ ಪುನರಾರಂಭ: ಲೆಬನಾನ್'ನಲ್ಲಿ ಮುಂದುವರೆದ ಉದ್ವಿಗ್ನತೆ, ಮಧ್ಯಪ್ರಾಚ್ಯ ಶಾಂತಿಗೆ ಕಂಟಕ..!

ಪಶ್ಚಿಮ ಬಂಗಾಳದಲ್ಲಿ ತೃಣಮೂಲಕ್ಕೆ ಕುಸಿದ ಮಮತಾ (ನೇರ ನೋಟ)

ಶತ್ರು ಮುಂದೆ ಶರಣಾಗುವ ಪ್ರಶ್ನೆಯೇ ಇಲ್ಲ, ಹತಾಶೆಯಿಂದ ಒಪ್ಪಂದಕ್ಕೆ ಮುಂದಾಗಿದ್ದಾರೆ: ಇರಾನ್‌ ಪರಮೋಚ್ಛ ನಾಯಕ ಮೊಜ್ತಾಬಾ ಖಮೇನಿ