ಕಡಬಗೆರೆ ಬಳಿಯ ಬಿಡಿಎ ರಸ್ತೆಯಲ್ಲಿ ಹಾನಿಗೊಳಗಾದ ಭಾಗ Photo | Express
ರಾಜ್ಯ

ಬೆಂಗಳೂರು: ಉದ್ಘಾಟನೆಗೂ ಮುನ್ನವೇ ಕಡಬಗೆರೆ-ಮೈಸೂರು ರೋಡ್ ಆರ್ಟೀರಿಯಲ್ ರಸ್ತೆಗೆ ಹಾನಿ!

ಅಧಿಕಾರಿಗಳು ಪ್ಯಾಚ್ ಅನ್ನು ಸರಿಪಡಿಸಲು ಅಗ್ರಿಗೇಟರ್‌ಗಳನ್ನು ಮಿಶ್ರಣ ಮಾಡುತ್ತಿರುವುದು ಕಂಡುಬಂದಿದೆ.

ಬೆಂಗಳೂರು: ಜೂನ್ 27 ರಂದು ಉದ್ಘಾಟನೆಗೆ ಕಾಯುತ್ತಿರುವ ಒಂದು ಪ್ರಮುಖ ರಸ್ತೆಯು ಉದ್ಘಾಟನೆಗೂ ಮುನ್ನವೇ ಹಾನಿಗೊಂಡಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ರಚನೆಯ 50 ವರ್ಷಗಳನ್ನು ಪೂರೈಸಿದ್ದು, ಜೂನ್ 27 ರಂದು ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ 10.7 ಕಿಮೀ ಮೇಜರ್ ಆರ್ಟೀರಿಯಲ್ ರಸ್ತೆಯನ್ನು ಉದ್ಘಾಟಿಸಲು ಸಜ್ಜಾಗುತ್ತಿದೆ. ಜೊತೆಗೆ 15 ಲಕ್ಷ ಸಸಿಗಳನ್ನು ನೆಡಲು ಸಹ ಸಿದ್ಧವಾಗುತ್ತಿದೆ.

ಸೋಮವಾರ ಕಡಬಗೆರೆ ಬಳಿ ಸುಮಾರು 20 ಮೀಟರ್ ಪ್ಯಾಚ್ ಕಂಡುಬಂದಿದೆ. ಜಲ್ಲಿಕಲ್ಲು ಸಡಿಲವಾಗಿರುವುದು ಕಂಡುಬಂದಿದ್ದು, ಪ್ಯಾಚ್ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ವರದಿಯಾಗಿದೆ. ಅಧಿಕಾರಿಗಳು ಪ್ಯಾಚ್ ಅನ್ನು ಸರಿಪಡಿಸಲು ಅಗ್ರಿಗೇಟರ್‌ಗಳನ್ನು ಮಿಶ್ರಣ ಮಾಡುತ್ತಿರುವುದು ಕಂಡುಬಂದಿದೆ. ಈ ಸುದ್ದಿ ಶೀಘ್ರದಲ್ಲೇ ಹರಡಿ, ಉದ್ಘಾಟನೆಯಾಗದ ರಸ್ತೆಯ ಗುಣಮಟ್ಟಕ್ಕಾಗಿ ಬಿಡಿಎಯನ್ನು ಟ್ರೋಲ್ ಮಾಡಲಾಯಿತು.

ಭಾರೀ ಮಳೆ ಮತ್ತು ನೀರಿನ ಹರಿವಿನಿಂದ ಹಾನಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ತುಮಕೂರು, ಕುಣಿಗಲ್ ನಿಂದ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನ ಬಳಕೆದಾರರು ಸಹ ಈ ಮಾರ್ಗವನ್ನು ಆಯ್ಕೆ ಮಾಡಬಹುದಾಗಿದೆ. ಇದು ಬೆಂಗಳೂರಿನ ಹೊರವಲಯದಲ್ಲಿ, ವಿಶೇಷವಾಗಿ ಉತ್ತರ ಬೆಂಗಳೂರಿನ ಬಳಿ ಸಂಚಾರದ ಹೊರೆಯನ್ನು ಕಡಿಮೆ ಮಾಡುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬಿಡಿಎ ಅಧಿಕಾರಿಗಳು ಮತ್ತು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಲಭ್ಯವಿರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮುಸ್ಲಿಮರೇ ಈ ಕಳ್ಳರಿಂದ ದೂರವಿರಿ': TMC 'ಸರ್ಕಸ್ ಪಾರ್ಟಿ', ಡ್ರಾಮಾ ಇನ್ನೂ ನಡೆಯುತ್ತಿದೆ: ಸಚಿವ ದಿಲೀಪ್ ಘೋಷ್

ಫ್ಲೈಓವರ್ ನಿರ್ಮಿಸುತ್ತಿರುವಾಗ ರಸ್ತೆಗೆ ವೈಟ್‌ಟಾಪಿಂಗ್ ಏಕೆ? ಬಿಲ್ ಗಾಗಿ ಕಾಮಗಾರಿಯೇ; B-SMILE ನಿರ್ದೇಶಕರಿಗೆ ಕೃಷ್ಣಬೈರೇಗೌಡ ತರಾಟೆ

'ಗಿಲ್ಲಿ' ಜೋಡಿ ಬ್ರೇಕಪ್? ವಿಜಯ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದ ತ್ರಿಷಾ; ಇನ್ ಸ್ಟಾದಲ್ಲಿ Unfollow ಮಾಡಿದ ನಟಿ!

ಕತಾರ್ ಕಾರ್ಖಾನೆಯಲ್ಲಿ ಸ್ಫೋಟ: ಮೃತರಲ್ಲಿ 12 ಮಂದಿ ಭಾರತೀಯರು, ಘಟನೆ ವಿಧ್ವಂಸಕ ಕೃತ್ಯವಲ್ಲ ಎಂದು ಇಂಧನ ಸಚಿವಾಲಯ ಸ್ಪಷ್ಟನೆ

ಕಾವೇರಿ ನದಿ ನೀರು: ಇಂದು CWMA ನಿಂದ ವಾಸ್ತವ ಪರಿಸ್ಥಿತಿ ಪರಿಶೀಲನೆ