ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಪಿಜಿ ಮಾಲೀಕನ ಮೇಲೆ ಬ್ಯಾಟ್‌ನಿಂದ ಹಲ್ಲೆ ನಡೆಸಿ ಕೊಲೆ; ಇಬ್ಬರು ಕಾಲೇಜು ವಿದ್ಯಾರ್ಥಿಗಳ ಬಂಧನ!

ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಬ್ಯಾಟ್‌ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಪೇಯಿಂಗ್ ಗೆಸ್ಟ್ (PG) ವಸತಿ ಸೌಕರ್ಯದ ಮಾಲೀಕ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಮಾಧವ್ ಮಟ್ಲೆ (37) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಸಂಜೆ 6.30ರ ಸುಮಾರಿಗೆ ಕಸ್ತೂರಿನಗರ ಮುಖ್ಯ ರಸ್ತೆಯ ಬಳಿಯಿರುವ ಪಿಜಿ ಮುಂದೆ ಈ ಘಟನೆ ನಡೆದಿದೆ. ಆರೋಪಿಗಳು ತಮ್ಮ ಆವರಣದೊಳಗೆ ಕಾಲು ತೊಳೆಯುವುದಕ್ಕೆ ಸಂತ್ರಸ್ತ ಆಕ್ಷೇಪಿಸಿದ ನಂತರ ಈ ಘಟನೆ ನಡೆದಿದೆ.

ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ರಾಕೇಶ್ ಮತ್ತು ಡಾನ್ ಬ್ರೈಟ್ ಸನ್ ಎಂಬುವವರು ಪಿಜಿ ಆವರಣದೊಳಗೆ ಟ್ಯಾಪ್ ನೀರನ್ನು ಬಳಸಿ ಕಾಲು ತೊಳೆಯುತ್ತಿದ್ದರು. ಇದಕ್ಕೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ಅವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಘಟನೆ ನಡೆದ ಪಿಜಿಯಲ್ಲಿ ಸ್ನೇಹಿತರಾದ ಇಬ್ಬರು ಆರೋಪಿಗಳು ತಂಗಿರಲಿಲ್ಲ. ಘಟನೆ ನಡೆದ ಸಮಯದಲ್ಲಿ ಅವರು ಮದ್ಯದ ಅಮಲಿನಲ್ಲಿದ್ದರೆಂದು ಆರೋಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಮಧ್ಯೆ, ಮಟ್ಲೆ ಆರೋಪಿಗಳಿಗೆ ಹೊಡೆಯಲು ಬ್ಯಾಟ್ ತಂದಿದ್ದಾರೆ. ಆದರೆ, ಆರೋಪಿಗಳಿಬ್ಬರು ಅದೇ ಬ್ಯಾಟ್ ಅನ್ನು ಕಸಿದುಕೊಂಡು ಸಂತ್ರಸ್ತನ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಕೇಶ್ ಅಂತಿಮ ವರ್ಷದ ಬಿಕಾಂ (BCom) ವಿದ್ಯಾರ್ಥಿಯಾಗಿದ್ದರೆ, ಡಾನ್ ಬ್ರೈಟ್ ಸನ್ ಪ್ರಥಮ ವರ್ಷದ ಬಿಬಿಎ (BBA) ವಿದ್ಯಾರ್ಥಿಯಾಗಿದ್ದಾನೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮುಸ್ಲಿಮರೇ ಈ ಕಳ್ಳರಿಂದ ದೂರವಿರಿ': TMC 'ಸರ್ಕಸ್ ಪಾರ್ಟಿ', ಡ್ರಾಮಾ ಇನ್ನೂ ನಡೆಯುತ್ತಿದೆ: ಸಚಿವ ದಿಲೀಪ್ ಘೋಷ್

ಫ್ಲೈಓವರ್ ನಿರ್ಮಿಸುತ್ತಿರುವಾಗ ರಸ್ತೆಗೆ ವೈಟ್‌ಟಾಪಿಂಗ್ ಏಕೆ? ಬಿಲ್ ಗಾಗಿ ಕಾಮಗಾರಿಯೇ; B-SMILE ನಿರ್ದೇಶಕರಿಗೆ ಕೃಷ್ಣಬೈರೇಗೌಡ ತರಾಟೆ

ಕತಾರ್ ಕಾರ್ಖಾನೆಯಲ್ಲಿ ಸ್ಫೋಟ: ಮೃತರಲ್ಲಿ 12 ಮಂದಿ ಭಾರತೀಯರು, ಘಟನೆ ವಿಧ್ವಂಸಕ ಕೃತ್ಯವಲ್ಲ ಎಂದು ಇಂಧನ ಸಚಿವಾಲಯ ಸ್ಪಷ್ಟನೆ

ಕಾವೇರಿ ನದಿ ನೀರು: ಇಂದು CWMA ನಿಂದ ವಾಸ್ತವ ಪರಿಸ್ಥಿತಿ ಪರಿಶೀಲನೆ

CRED ನಲ್ಲಿ ಬರೋಬ್ಬರಿ 8,550 ಕೋಟಿ ಹೂಡಿಕೆ ಮಾಡಲಿರುವ ಮೆಟಾ: ಭಾರತೀಯನ ಕೈಗೆ ವಾಟ್ಸಾಪ್ ಚುಕ್ಕಾಣಿ!