ಪ್ರಿಯಾಂಕ್ ಖರ್ಗೆ  
ರಾಜ್ಯ

'ಮೋದಿ ಅವರಿಂದ ಕಲಿಯಬೇಕಾದ್ದು ಏನೂ ಇಲ್ಲ, ಅವರು ಸೇರಿದ ಚಿಂತನಾ ಪರಂಪರೆ ದೇಶದ ಸಂವಿಧಾನವಾಗಿ ಮನುಸ್ಮೃತಿಯನ್ನು ಬಯಸಿತ್ತು': ಪ್ರಿಯಾಂಕ್ ಖರ್ಗೆ; Video

ಸಂವಿಧಾನದ ಬಗ್ಗೆ ನಮಗೆ ಮೋದಿ ಅವರಿಂದ ಕಲಿಯಬೇಕಾದ ಅಗತ್ಯವಿಲ್ಲ. ಅವರು ಸಂವಿಧಾನವನ್ನು ನಿರ್ಲಕ್ಷಿಸಿದ್ದ ಚಿಂತನಾ ಪರಂಪರೆಯಿಂದ ಬಂದವರು. ಆರ್‌ಎಸ್‌ಎಸ್ ತಮ್ಮ ಸಂಪಾದಕೀಯದಲ್ಲಿ ಸ್ಪಷ್ಟವಾಗಿ ಸಂವಿಧಾನವನ್ನು ತಿರಸ್ಕರಿಸುತ್ತೇವೆ ಎಂದು ಬರೆದಿತ್ತು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇಂದು ಮಂಗಳವಾರ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಸಂವಿಧಾನದ ಬಗ್ಗೆ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಕಲಿಯಬೇಕಾದದ್ದೇನೂ ಇಲ್ಲ ಎಂದು ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, 1950ರಲ್ಲಿ ಭಾರತೀಯ ಸಂವಿಧಾನ ಅಂಗೀಕರಿಸಲ್ಪಟ್ಟಾಗ ಆರ್‌ಎಸ್‌ಎಸ್ ಅದನ್ನು ವಿರೋಧಿಸಿತ್ತು ಎಂದು ಆರೋಪಿಸಿದರು.

ಸಂವಿಧಾನದ ಬಗ್ಗೆ ನಮಗೆ ಮೋದಿ ಅವರಿಂದ ಕಲಿಯಬೇಕಾದ ಅಗತ್ಯವಿಲ್ಲ. ಅವರು ಸಂವಿಧಾನವನ್ನು ನಿರ್ಲಕ್ಷಿಸಿದ್ದ ಚಿಂತನಾ ಪರಂಪರೆಯಿಂದ ಬಂದವರು. ಆರ್‌ಎಸ್‌ಎಸ್ ತಮ್ಮ ಸಂಪಾದಕೀಯದಲ್ಲಿ ಸ್ಪಷ್ಟವಾಗಿ ಸಂವಿಧಾನವನ್ನು ತಿರಸ್ಕರಿಸುತ್ತೇವೆ ಎಂದು ಬರೆದಿತ್ತು.

ದೆಹಲಿಯ ರಾಮಲೀಲಾ ಮೈದಾನದಲ್ಲಿ 150ಕ್ಕೂ ಹೆಚ್ಚು ಪ್ರತಿಭಟನೆಗಳನ್ನು ನಡೆಸಿ, ಮಹರ್ಷಿ ನೆಹರು ಮತ್ತು ಋಷಿ ಅಂಬೇಡ್ಕರ್ ವೇದಗಳನ್ನು ಮುಗಿಸಿ ‘ಸಂವಿಧಾನ’ ಎಂಬುದನ್ನು ತರುತ್ತಿದ್ದಾರೆ, ನಾವು ಅದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ; ದೇಶದ ಸಂವಿಧಾನವಾಗಿ ಮನುಸ್ಮೃತಿಯೇ ಬೇಕು ಎಂದು ಹೇಳಿದ್ದರು. ಅಂತಹ ಹಿನ್ನೆಲೆಯವರಿಂದ ನಮಗೆ ಸಂವಿಧಾನದ ಪಾಠ ಬೇಕೇ? ಸಂಸತ್ತು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೀವು ನೋಡುತ್ತಿಲ್ಲವೇ ಎಂದು ಕೇಳಿದರು.

ಖರ್ಗೆ ಅವರ ಈ ಹೇಳಿಕೆ, ಸಂವಿಧಾನ ಮತ್ತು ನಕ್ಸಲ್ ವಾದ ವಿಷಯದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ ಬೆನ್ನಲ್ಲೇ ಬಂದಿದೆ.

ನಿನ್ನೆ ಸೋಮವಾರ ನಡೆದ ರಿಪಬ್ಲಿಕ್ ಟಿವಿ ಸಮ್ಮಿಟ್ ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ನಕ್ಸಲರ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ್ದರು.

ಇತ್ತೀಚೆಗೆ ಸದಾ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗುವವರು, ಅಧಿಕಾರದಲ್ಲಿದ್ದಾಗ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂವಿಧಾನದ ಬಗ್ಗೆ ಮಾತನಾಡಿದ ಕಾರಣಕ್ಕೆ ಜನರನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿತ್ತು. ಆಗ ಅವರ ಕೈಯಲ್ಲಿ ಸಂವಿಧಾನ ಕಾಣಿಸಲಿಲ್ಲ; ಅವರ ಕೈಗಳು ನಡುಗುತ್ತಿದ್ದವು. ಆ ಭೀಕರ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ಬಹುತೇಕ ನಿರ್ಲಕ್ಷ್ಯ ತೋರಿತು. 2014ರ ನಂತರ ನಾವು ‘ರಾಷ್ಟ್ರ ಮೊದಲಿಗೆ’ ಎಂಬ ಮನೋಭಾವದೊಂದಿಗೆ ಪರಿಸ್ಥಿತಿಯನ್ನು ಬದಲಾಯಿಸುವ ಕಾರ್ಯ ಆರಂಭಿಸಿದೆವು ಎಂದು ಪ್ರಧಾನಿ ಮೋದಿ ಹೇಳಿದ್ದರು.

ಅಧಿಕೃತವಾಗಿ ಆರ್ ಎಸ್ ಎಸ್ ನೋಂದಣಿ ಮಾಡಿಸಿಕೊಳ್ಳಲಿ

ಸಂವಿಧಾನದ ಕುರಿತ ಟೀಕೆಗಳ ಜೊತೆಗೆ, ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ವಿರುದ್ಧದ ತಮ್ಮ ಟೀಕೆಯನ್ನು ಮುಂದುವರಿಸಿ, ಸಂಘವು ಅಧಿಕೃತವಾಗಿ ನೋಂದಣಿ ಮಾಡಿಕೊಂಡು ತನ್ನ ದಾಖಲೆಗಳನ್ನು ಸಾರ್ವಜನಿಕವಾಗಿ ಮಂಡಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET ವಿದ್ಯಾರ್ಥಿಗಳಿಗೆ ಪರೀಕ್ಷೆ ತಪ್ಪಲು ಕಾಂಗ್ರೆಸ್ ಕಾರ್ಯಕ್ರಮದ ಟ್ರಾಫಿಕ್ ಕಾರಣ?: Bengaluru police Fact chek ಹೇಳೋದೇನು?

ನಾಲಿಗೆ ಬಿಗಿ ಹಿಡಿದು ಮಾತನಾಡಿ, ನಮ್ಮಿಂದ ಬಿಜೆಪಿ ಹಾಳಾಗಿಲ್ಲ: ಈಶ್ವರಪ್ಪಗೆ ಬಿಸಿ ಪಾಟೀಲ್ ಎಚ್ಚರಿಕೆ

'ರೀಲ್ಸ್‌ನಲ್ಲಿ ಗರಿಬಿಚ್ಚಿದ ನವಿಲುಗಳು': Bigg Boss ಮಾಜಿ ಸ್ಪರ್ಧಿಗಳಿಗೆ ಸಂಕಷ್ಟ; ಕಿಶನ್, ನಿವೇದಿತಾ ಗೌಡ ವಿರುದ್ಧ ದೂರು!

Cricket: IPL 2026 ಎಫೆಕ್ಟ್, ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಸೂರ್ಯಾಂಶ್ ಶೆಡ್ಗೆ ಭಾರತ ಟಿ20 ತಂಡಕ್ಕೆ ಆಯ್ಕೆ

ಫ್ಲೈಓವರ್ ನಿರ್ಮಿಸುತ್ತಿರುವಾಗ ರಸ್ತೆಗೆ ವೈಟ್‌ಟಾಪಿಂಗ್ ಏಕೆ? ಬಿಲ್ ಗಾಗಿ ಕಾಮಗಾರಿಯೇ? B-SMILE ನಿರ್ದೇಶಕರಿಗೆ ಕೃಷ್ಣ ಬೈರೇಗೌಡ ತರಾಟೆ