ಎಚ್. ವಿಶ್ವನಾಥ್  
ರಾಜ್ಯ

ಮಂಡ್ಯ: ಜನಸೇವೆಗೆ ಕಟ್ಟಿಸಿದ ವಿಧಾನಸೌಧ ವ್ಯಾಪಾರ ಕೇಂದ್ರವಾಗಿದೆ- ಎಚ್. ವಿಶ್ವನಾಥ್ ಆರೋಪ

ರಾಜಕಾರಣಿಗಳು ಇಂದು ಸೇವಕರಾಗಿ ಉಳಿದಿಲ್ಲ. ಶೇ. 80 ರಷ್ಟು ಶಾಸಕರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ವಿಧಾನಸೌಧ ಶಾಸಕರ ಖರೀದಿ ಮತ್ತು ಮಾರಾಟಕ್ಕೆ ಸಾಕ್ಷಿಯಾಗಿರುವುದು ದುರಂತ ಎಂದರು.

ಮಂಡ್ಯ: ಕೆಂಗಲ್ ಹನುಮಂತಯ್ಯನವರು ಜನಸೇವೆಗಾಗಿ ಕಟ್ಟಿಸಿದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ಇಂದು ವ್ಯಾಪಾರ ಕೇಂದ್ರವಾಗಿದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಶುಕ್ರವಾರ ಆರೋಪಿಸಿದ್ದಾರೆ.

ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಪಿ.ಎನ್. ಜವರಪ್ಪಗೌಡ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ವಿಧಾನಸೌಧ ದುಡ್ಡಿನ ಹಿಂದೆ ಓಡುತ್ತಿದೆ ಎಂದು ಹೇಳಿದರು.

ರಾಜಕಾರಣಿಗಳು ಇಂದು ಸೇವಕರಾಗಿ ಉಳಿದಿಲ್ಲ. ಶೇ. 80 ರಷ್ಟು ಶಾಸಕರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ವಿಧಾನಸೌಧ ಶಾಸಕರ ಖರೀದಿ ಮತ್ತು ಮಾರಾಟಕ್ಕೆ ಸಾಕ್ಷಿಯಾಗಿರುವುದು ದುರಂತ ಎಂದರು.

ಸ್ವಾತಂತ್ರ್ಯ ನಂತರ ಟಾಟಾ-ಬಿರ್ಲಾ ರಾಜಕೀಯ ಪ್ರವೇಶದ ಬಗ್ಗೆ ನೆಹರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರಾಜಕೀಯ ಶಕ್ತಿ ಮತ್ತು ಹಣದ ಶಕ್ತಿ ಒಂದೇ ಕಡೆ ಇದ್ದರೆ ಪ್ರಜಾಪ್ರಭುತ್ವ ಮಾರಾಟವಾಗುತ್ತದೆ ಎಂದಿದ್ದರು. ಅದೀಗ ನಿಜವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದೇ ವೇಳೆ ಮಹಿಳೆಯರಿಗೆ ಮಾಸಿಕ 2,000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಎಚ್. ವಿಶ್ವನಾಥ್, ಅದರ ಬದಲಿಗೆ ಸರ್ವರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಆದ್ಯತೆ ನೀಡಬೇಕಿತ್ತು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

2024ರಿಂದ 20 ಬಾರಿ Namma Metro ಸೇವೆಯಲ್ಲಿ ಅಡಚಣೆ: ಸಚಿವ ಕೃಷ್ಣಬೈರೇಗೌಡಗೆ ತೇಜಸ್ವಿ ಸೂರ್ಯ ಪತ್ರ!

ಮುಂಬೈ: ನಿಲ್ಲಿಸಿದ್ದ ಕಾರಿನಲ್ಲಿ ಏರ್‌ಬ್ಯಾಗ್ ಓಪನ್! 25 ವರ್ಷದ ವ್ಯಕ್ತಿ ರಕ್ತಸ್ರಾವದಿಂದ ಸಾವು

ರಾಮ ಮಂದಿರ ದೇಣಿಗೆ ಲೂಟಿ: ಚಂಪತ್ ರಾಯ್ ಆಪ್ತ ಟಿನ್ನು ಯಾದವ್ ಸೇರಿ 8 ಮಂದಿ ಬಂಧನ

ಅಯೋಧ್ಯೆ ದೇಣಿಗೆ ಲೂಟಿ: FIR ಬೆನ್ನಲ್ಲೇ ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್, ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ