ಚೇತನ್ ಅಹಿಂಸಾ 
ರಾಜ್ಯ

ಮನುವಾದಿ ವಿಜಯ್‌ ಪೆರಿಯಾರ್ ವಿಚಾರ ಅಧ್ಯಯನ ಮಾಡಲಿ: ನಟ ಚೇತನ್ ಅಹಿಂಸಾ

'‘ದೇವರನ್ನು ಪ್ರಶ್ನಿಸಲು ಆಳವಾದ ಚಿಂತನೆ ಮತ್ತು ಅರಿವು ಬೇಕು; ದೇವರನ್ನು ನಂಬಲು ಒಬ್ಬ ಮೂರ್ಖರಾದರೆ ಸಾಕು’ ಎಂದು ಪೆರಿಯಾರ್‌ ಹೇಳುತ್ತಾರೆ.

ಬೆಂಗಳೂರು: ‘ಪೆರಿಯಾರ್ ಹೇಳಿದ ಎಲ್ಲವನ್ನೂ ನಾನು ಒಪ್ಪುವುದಿಲ್ಲ’ ಎಂಬ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಟ ಚೇತನ್‌ ಅಹಿಂಸಾ, ಮೊದಲು ಪೆರಿಯಾರ್ ವಿಚಾರಗಳನ್ನು ಅಧ್ಯಯನ ಮಾಡಿ ಎಂದು ಹೇಳಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಪೆರಿಯಾರ್ ಹೇಳಿದ ಎಲ್ಲವನ್ನೂ ನಾನು ಒಪ್ಪುವುದಿಲ್ಲ, ದೇವರನ್ನು ನಂಬುತ್ತೇನೆ ಎಂದು ನೀವು(ವಿಜಯ್) ಹೇಳುತ್ತೀರಿ. ಹಾಗಾದರೆ, ಚುನಾವಣಾ ಪ್ರಚಾರದಲ್ಲಿ ಪೆರಿಯಾರ್ ಅವರ ಚಿತ್ರ ಬಳಸಿರುವ ನೀವು, ಪೆರಿಯಾರ್ ಅವರ ಯಾವ ವಿಚಾರಗಳನ್ನು ಒಪ್ಪುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.

'‘ದೇವರನ್ನು ಪ್ರಶ್ನಿಸಲು ಆಳವಾದ ಚಿಂತನೆ ಮತ್ತು ಅರಿವು ಬೇಕು; ದೇವರನ್ನು ನಂಬಲು ಒಬ್ಬ ಮೂರ್ಖರಾದರೆ ಸಾಕು’ ಎಂದು ಪೆರಿಯಾರ್‌ ಹೇಳುತ್ತಾರೆ. ಮನುವಾದಿ ಮನೋಭಾವ ಹೊಂದಿರುವ ವಿಜಯ್ ಅವರು ಪೆರಿಯಾರ್ ಅವರ ವಿಚಾರಗಳನ್ನು ಅಧ್ಯಯನ ಮಾಡಬೇಕು. ಕೇವಲ ಪ್ರಚಾರಕ್ಕೆ ಅವರನ್ನು ಬಳಸಿಕೊಳ್ಳುವುದಲ್ಲ’ ಎಂದು ಟೀಕಿಸಿದ್ದಾರೆ.

ಸೋಮವಾರ ಸದನದಲ್ಲಿ ಮಾತನಾಡಿದ್ದ ವಿಜಯ್‌ ಅವರು, ‘ಪೆರಿಯಾರ್‌ ಅವರ ಸಿದ್ದಾಂತವನ್ನು ನಮ್ಮ ಪಕ್ಷ ಅಳವಡಿಸಿಕೊಂಡಿದ್ದರೂ, ದೇವರಲ್ಲಿ ನಂಬಿಕೆ ಇಲ್ಲ ಎಂಬ ಅವರ ತತ್ವವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಮಗೆ ದೇವರಲ್ಲಿ ನಂಬಿಕೆಯಿದೆ. ನಾವು ಯಾವ ಸಿದ್ಧಾಂತದ ವಿರೋಧಿಗಳಲ್ಲ’ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮೌನದ ಏಕೈಕ ಧ್ವನಿ’: ಗಾಜಾ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿ ಸೋನಿಯಾ ಗಾಂಧಿ ಬರೆದ ಲೇಖನಕ್ಕೆ ಬಿಜೆಪಿ ಟೀಕೆ

ಪ್ರಧಾನಿ ಮೋದಿ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡಿದ್ದಾರೆ, 2027ರ ವರ್ಷಾರಂಭಕ್ಕೆ Indiaಗೆ ಡೊನಾಲ್ಡ್ ಟ್ರಂಪ್: ಮಾರ್ಕೊ ರೂಬಿಯೊ

Hormuz ಡ್ರೋನ್ ದಾಳಿಗೆ ಅಮೆರಿಕ ತಿರುಗೇಟು; ಇರಾನ್ ಮೇಲೆ ವಾಯುದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

Pak ಮಾಜಿ ವೇಗಿ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ LeT ಉಗ್ರರು ಭಾಗಿ, Video!

ಮೂರ್ಖತನದ ಯಾವುದೇ ಕೃತ್ಯಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ: ಅಮೆರಿಕ ದಾಳಿಗೆ ಇರಾನ್ ಕಠಿಣ ಎಚ್ಚರಿಕೆ