ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮಾವನ ಕೊಂದು, ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಅಳಿಯನ ಬಂಧನ!

ಕೊಲೆಯಾದ ವ್ಯಕ್ತಿ ಇನಾಯತ್ ಪಾಷಾ ಆಸ್ಟಿನ್ ಟೌನ್‌ನಲ್ಲಿರುವ ತನ್ನ ಸಹೋದರಿಯ ಮನೆಯ ನೆಲ ಮಹಡಿಯನ್ನು ಲೀಸ್ ಗೆ ತೆದುಕೊಂಡು ಒಬ್ಬರೇ ವಾಸಿಸುತ್ತಿದ್ದರು.

ಬೆಂಗಳೂರು: ಮನೆ ಖಾಲಿ ಮಾಡುವ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ತನ್ನ ಮಾವನನ್ನು ಕೊಂದು, ಬಳಿಕ ಅದನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ 22 ವರ್ಷದ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಸ್ರೂರ್ ಅಹ್ಮದ್ ಎಂದು ಗುರುತಿಸಲಾಗಿದೆ.

ಕೊಲೆಯಾದ ವ್ಯಕ್ತಿ ಇನಾಯತ್ ಪಾಷಾ ಆಸ್ಟಿನ್ ಟೌನ್‌ನಲ್ಲಿರುವ ತನ್ನ ಸಹೋದರಿಯ ಮನೆಯ ನೆಲ ಮಹಡಿಯನ್ನು ಲೀಸ್ ಗೆ ತೆದುಕೊಂಡು ಒಬ್ಬರೇ ವಾಸಿಸುತ್ತಿದ್ದರು. ಮೆಕಾನಿಕ್ ಆಗಿ ಕೆಲಸ ಮಾಡ್ಕೊಂಡಿದ್ದ ಇನಾಯತ್ ಹುಟ್ಟಿನಿಂದಲೇ ಅಂಗವಿಕಲ ಎಂದು ಪೊಲೀಸರು ತಿಳಿಸಿದ್ದಾರೆ.

ಲೀಸ್​​ ಹಣ ವಾಪಸ್​​ ನೀಡದೆ ಮನೆ ಖಾಲಿ ಮಾಡುವಂತೆ ಇನಾಯತ್ ಪಾಷಾನನ್ನು ಅವರ ಅಕ್ಕ ಪೀಡಿಸುತ್ತಿದ್ದಳು. ಇದೇ ವಿಚಾರಕ್ಕೆ ಅಕ್ಕ ಮತ್ತು ತಮ್ಮನ ನಡುವೆ ಆಗಾಗ ಕಿರಿಕ್​​ ನಡೆಯುತ್ತಲೇ ಇತ್ತು. ಕಳೆದ ಭಾನುವಾರ ಕೂಡ ಇನಾಯತ್ ಮನೆಗೆ ಬಂದ ಕೂಡಲೇ ಮನೆ ಖಾಲಿ ಮಾಡು ಎಂದು ಜಗಳ ನಡೆದಿದೆ. ಈ ವೇಳೆ ಇನಾಯತ್ ಅಕ್ಕನ ಮಗ ಮಶ್ರೂರ್ ಅಹ್ಮದ್ ಕೂಡ ಜಗಳಕ್ಕೆ ಎಂಟ್ರಿಯಾಗಿದ್ದ. ಆದ್ರೆ ಜಗಳ ಮಧ್ಯೆ ಮಸ್ರೂರ್ ಮಾರಣಾಂತಿಕ ಹಲ್ಲೆ ಮಾಡಿದ್ರಿಂದ ಕುಸಿದು ಬಿದ್ದ ಇನಾಯತ್ ಪ್ರಾಣ ಬಿಟ್ಟಿದ್ದಾನೆ.

ಇನ್ನು ಘಟನೆಯನ್ನು ಮರೆಮಾಚಲು ಯತ್ನಿಸಿದ್ದ ಆರೋಪಿಗಳು, ಇನಾಯತ್ ಅತಿಯಾಗಿ ಕುಡಿದು, ಮೇಲಿಂದ ಬಿದ್ದು ಸತ್ತುಹೋದ ಎಂದು ಸಂಬಂಧಿಕರು, ಸ್ಥಳೀಯರುನ್ನ ನಂಬಿಸಿದ್ದರು. ಆ ಬಳಿಕ ಇನಾಯತ್ ಅಂತ್ಯ ಸಂಸ್ಕಾರಕ್ಕೂ ಸಿದ್ದತೆ ನಡೆದಿತ್ತು. ಆದರೆ ಸಾವಿನ ಮಾಹಿತಿ ತಿಳೀದು ಸ್ಥಳಕ್ಕೆ ಹೋಗಿದ್ದ ವಿವೇಕ್ ನಗರ ಪೊಲೀಸರ ಬಳಿ ಕೆಲ ಸಂಬಂಧಿಕರು ಕೊಲೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೊಲೀಸರು ಪ್ರಕರಣ ಕೆದಕಿದಾಗ ಕೊಲೆ ರಹಸ್ಯ ಬಯಲಾಗಿದೆ.

ಇನ್ನು ಇನಾಯತ್​​ ಮೃತದೇಹ ಪರಿಶೀಲನೆ ವೇಳೆಯೂ ಮೈಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಇನಾಯತ್​​ ಸಾವು ಕೊಲೆ ಎಂಬುದು ದೃಢಪಟ್ಟಿದೆ. ಹೀಗಾಗಿ ಕೊಲೆಯನ್ನ ಸಹಜ ಸಾವೆಂದು ಬಿಂಬಿಸಲು ಹೋಗಿದ್ದ ಮಶ್ರೂರ್ ನನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೌರಿಂಗ್ ಆಸ್ಪತ್ರೆ ದುರಂತ: ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಣೆ

IPL 2026: ರಿಕಲ್ಟನ್ ಶತಕ ವ್ಯರ್ಥ; ಮುಂಬೈ ನೀಡಿದ ಟಾರ್ಗೆಟ್ ಧೂಳಿಪಟ, ದಾಖಲೆಯ 249 ರನ್ ಬಾರಿಸಿದ ಗೆದ್ದ SRH!

ಬಾಂಗ್ಲಾದೇಶ ಸರ್ಕಾರ ದೊಡ್ಡ ತಪ್ಪು ಮಾಡಿದೆ... ಟಿ20 ವಿಶ್ವಕಪ್ ಬಗ್ಗೆ ಶಕೀಬ್ ಅಲ್ ಹಸನ್ 'ಸ್ಫೋಟಕ ಹೇಳಿಕೆ'!

IPL 2026: 'ಬ್ಯಾಟಲ್ಲಿ AI Chip ಇದೆ' ಎಂದ ಪಾಕಿಸ್ತಾನದ Nouman Niaz ಗೆ ಬಟ್ಟೆ ಸುತ್ತಿ ಹೊಡೆದ ವೈಭವ್ ಸೂರ್ಯವಂಶಿ

Exit polls: ದೀದಿಗೆ ಶಾಕ್; BJP ತೆಕ್ಕೆಗೆ ಬಂಗಾಳ; ಅಸ್ಸಾಂನಲ್ಲೂ ಕಮಲ ಮ್ಯಾಜಿಕ್!

SCROLL FOR NEXT