ವಿಧಾನಸಭೆ 
ರಾಜ್ಯ

Jakkur aerodrome 200 ಏಕರೆ ಭೂಮಿ ಮೇಲೆ ರಿಯಲ್ ಎಸ್ಟೇಟ್ ಕಣ್ಣು; ಕಬಳಿಕೆಗೆ ದೊಡ್ಡ ಲಾಬಿಯೇ ನಡೆಯುತ್ತಿದೆ: BJP ಗಂಭೀರ ಆರೋಪ

ಜಕ್ಕೂರು ಫ್ಲೈಯಿಂಗ್ ಟ್ರೈನಿಂಗ್ ಶಾಲೆಯನ್ನು ನಗರದಿಂದ ಹೊರಕ್ಕೆ ಸ್ಥಳಾಂತರಿಸಿ, ಆ ಜಾಗದಲ್ಲಿ ದೊಡ್ಡ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎತ್ತರದ ಕಟ್ಟಡ ನಿರ್ಮಾಣಕ್ಕೆ ಅವಕಾಶ ಸಿಗುತ್ತದೆ, ಹೀಗಾಗಿ ಲಾಬಿ ನಡೆಸಲಾಗುತ್ತಿದೆ.

ಬೆಂಗಳೂರು: ನಗರದ ಪ್ರಮುಖ ಪ್ರದೇಶದಲ್ಲಿರುವ ಜಕ್ಕೂರು ಏರೋಡ್ರೋಮ್‌ನ ಸುಮಾರು 200 ಏಕರೆ ಭೂಮಿಯ ಮೇಲೆ ರಿಯಲ್ ಎಸ್ಟೇಟ್ ಕಣ್ಣು ಹಾಕಿದ್ದು, ದೊಡ್ಡ ಲಾಭಿ ನಡೆಸುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಈ ಸಂಬಂಧ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಜಕ್ಕೂರು ಫ್ಲೈಯಿಂಗ್ ಟ್ರೈನಿಂಗ್ ಶಾಲೆಯನ್ನು ನಗರದಿಂದ ಹೊರಕ್ಕೆ ಸ್ಥಳಾಂತರಿಸಿ, ಆ ಜಾಗದಲ್ಲಿ ದೊಡ್ಡ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎತ್ತರದ ಕಟ್ಟಡ ನಿರ್ಮಾಣಕ್ಕೆ ಅವಕಾಶ ಸಿಗುತ್ತದೆ, ಹೀಗಾಗಿ ಲಾಬಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಇದೇ ವೇಳೆ ಈ ವಿಷಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಪ್ರಶ್ನಿಸಿದ ಅಶೋಕ್, “ಈ ಭೂಮಿ ಮೇಲೆ ನಿಮ್ಮ ಕಣ್ಣಿದೆಯೇ? ನಿಮ್ಮ ಯೋಜನೆ ಏನು?” ಎಂದು ಪ್ರಶ್ನಿಸಿದರು.

ಅದೇ ವೇಳೆ, ಉನ್ನತ ಹುದ್ದೆಯ ಅಧಿಕಾರಿಯೇ ಈ ಲಾಬಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ ಅವರು, ರಾಜಸ್ಥಾನದಿಂದ ಡೆವಲಪರ್‌ರನ್ನು ಕರೆತರಲು ಯತ್ನ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.

ನವೆಂಬರ್ 29, 2025 ರಂದು, ಪ್ರಧಾನ ಕಾರ್ಯದರ್ಶಿ (ಯುವ ಸಬಲೀಕರಣ ಮತ್ತು ಕ್ರೀಡೆ) ನವೀನ್ ರಾಜ್ ಸಿಂಗ್ ಅವರು ಡಿಸೆಂಬರ್ 3 ರಂದು ಶಾಲೆಯನ್ನು ಜಕ್ಕೂರು ಏರೋಡ್ರೋಮ್‌ನಿಂದ ಮೈಸೂರಿಗೆ ಸ್ಥಳಾಂತರಿಸುವ ಬಗ್ಗೆ ಚರ್ಚಿಸಲು ನಿಗದಿಪಡಿಸಲಾದ ಸಭೆಯ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ ಬರೆದಿರುವ ಪತ್ರವನ್ನೂ ಅವರು ಪ್ರದರ್ಶಿಸಿದರು.

ಜಕ್ಕೂರು ಏರೋಡ್ರೋಮ್ ಪ್ರದೇಶವನ್ನು 1940ರಲ್ಲಿ ಮೈಸೂರು ರಾಜರಿಂದ ಡಿನೋಟಿಫೈ ಮಾಡಲ್ಪಟ್ಟಿತು. ಅಲ್ಲಿರುವ ಫ್ಲೈಯಿಂಗ್ ಶಾಲೆಯನ್ನು ಜವಾಹರಲಾಲ್ ನೆಹರು ಉದ್ಘಾಟಿಸಿದ್ದರು ಎಂಬುದನ್ನೂ ನೆನಪಿಸಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ (2013-18), ಜಕ್ಕೂರು ಏರೋಡ್ರೋಮ್ ಭೂಮಿಯ 25 ಎಕರೆಗಳಲ್ಲಿ 'ಕ್ಲಬ್' ಅನ್ನು ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅಲ್ಲದೆ, ಅಲ್ಲಿ ರಾಜೀವ್ ಗಾಂಧಿ ಏರೋಸ್ಪೋರ್ಟ್ಸ್ ಸೊಸೈಟಿಯನ್ನೂ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. "ನಮ್ಮ [ಬಿಜೆಪಿ] ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2021 ರಲ್ಲಿ ಈ ನಿರ್ಧಾರಗಳನ್ನು ಹಿಂತೆಗೆದುಕೊಂಡಿತು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾರ್ಚ್ 2022 ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ವಿರೋಧಿಸಿದ್ದರು. ಈಗೇಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದರು.

ಇದಕ್ಕೆ ಮಧ್ಯೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಪ್ರತಿಕ್ರಿಯೆ ನೀಡಿ, ನಗರಕ್ಕೆ ದೊಡ್ಡ ಕ್ರೀಡಾಂಗಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

"ನಾನು ಬೆಂಗಳೂರು ಸಚಿವನಾಗಿದ್ದಾಗ, ಅಲ್ಲಿ ಒಂದು ಫ್ಲೈಓವರ್ ಬಂದಿತು. ಈ ಕಾರಣದಿಂದಾಗಿ, ಟೇಕ್-ಆಫ್ ಸಮಯದಲ್ಲಿ ಅಪಾಯಗಳನ್ನು ಉಲ್ಲೇಖಿಸಿ ಡಿಜಿಸಿಎ ಪರವಾನಗಿ ನೀಡುತ್ತಿಲ್ಲ. ಅಲ್ಲದೆ, ಕೇವಲ 25-30 ಪೈಲಟ್ ತರಬೇತುದಾರರು ಅಲ್ಲಿದ್ದಾರೆ. ಆದ್ದರಿಂದ, ಕ್ರೀಡಾ ಸಂಕೀರ್ಣವನ್ನು ಹೊಂದುವ ಬಗ್ಗೆ ನಾನು ಸಿಎಂಗೆ ಪತ್ರ ಬರೆದಿದ್ದೇನೆ" ಎಂದು ಹೇಳಿದರು.

ಬಳಿಕ ಮಾತನಾಡಿದ ಅಶೋಕ್ ಅವರು, ಜಕ್ಕೂರು ಸೇರಿದಂತೆ ವಿಮಾನ ನಿಲ್ದಾಣಗಳ ಸುತ್ತಲೂ ಕಟ್ಟಡದ ಎತ್ತರದ ಮಿತಿಗಳನ್ನು ಹೆಚ್ಚಿಸುವ ಕುರಿತು ಶಿವಕುಮಾರ್ ಅವರು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರೊಂದಿಗೆ ಇತ್ತೀಚೆಗೆ ನಡೆಸಿದ ಸಭೆಯನ್ನು ಟೀಕಿಸಿದರು.

ಇನ್ನೊಂದೆಡೆ, ಈ ಆರೋಪಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡದೇ ಮೌನ ತಾಳಿದ್ದ ಡಿ.ಕೆ. ಶಿವಕುಮಾರ್ ಅವರು. ನಂತರ ಮಾತನಾಡಿ ನಾಯ್ಡು ಅವರೊಂದಿಗಿನ ಭೇಟಿಯಲ್ಲಿ ಜಕ್ಕೂರ್ ಅವರ ಪಾತ್ರ ಇರಲಿಲ್ಲ ಎಂದು ಹೇಳಿದರು.

ನಗರದ ಪ್ರತಿಷ್ಠಿತ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರವನ್ನು ಸ್ಥಳಾಂತರಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಈ ಕೇಂದ್ರವನ್ನು ಉಳಿಸಿ ಮುಂದುವರೆಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

"ಕರ್ನಾಟಕದಲ್ಲಿ ಮಿತಿಗಳು ವಿಭಿನ್ನವಾಗಿರುವುದರಿಂದ ನಾನು ಏಕರೂಪತೆಯನ್ನು ಬಯಸುತ್ತೇನೆ. ಈಗ ಕಟ್ಟಡಗಳ ಎತ್ತರಕ್ಕೆ ಪ್ರೀಮಿಯಂ ಎಫ್‌ಎಆರ್ ಮಾಡಿದ್ದೇವೆ. ಏರ್‌ಪೋರ್ಟ್ ಅಕ್ಕಪಕ್ಕ ಪ್ರೀಮಿಯರ್ ಎಫ್‌ಎಆರ್ ಮಾಡಿದ್ದೇವೆ. ಅದರಿಂದ ನಗರಕ್ಕೆ ಆದಾಯವೂ ಬರುತ್ತೆ ಎಂದು ತಿಳಿಸಿದರು.

ಇದೇ ವೇಳೆ ಜಕ್ಕೂರ್ ವಿಮಾನ ನಿಲ್ದಾಣದ ಭವಿಷ್ಯದ ಕುರಿತು, ತಮ್ಮ ಉತ್ತರದ ಸಮಯದಲ್ಲಿ ಇದನ್ನು ತಿಳಿಸುವುದಾಗಿ ಹೇಳಿದರು, ಈ ವಿಚಾರ ಸಂಬಂಧ ಶಿವಕುಮಾರ್ ಅವರು ಬುಧವಾರ ಉತ್ತರ ನೀಡಲಿದ್ದಾರೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?

IPL 2026: ಕೊನೆಯ ಎಸೆತದಲ್ಲಿ RCBಗೆ ರೋಚಕ ಜಯ; MI ವಿರುದ್ಧದ ಪಂದ್ಯ ಗೆಲ್ಲಿಸಿದ ಕೃನಾಲ್, ಭುವಿ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!

1 ಮತದಿಂದ DMK ಅಭ್ಯರ್ಥಿ ಪೆರಿಯಕರುಪ್ಪನ್ ಸೋಲು; ಅಂಚೆ ಮತ ಗೊಂದಲದ ಬಗ್ಗೆ ECI ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ!

S Keerthana: ವಿಜಯ್ ಕ್ಯಾಬಿನೆಟ್ ನಲ್ಲಿ ಪಂಚಭಾಷಾ ಪಾರಂಗತೆ; ಅತಿ ಕಿರಿಯ ಶಾಸಕಿ!

Pak ನಲ್ಲಿ ರಕ್ತದೋಕುಳಿ: ಹೊಸ ಉಗ್ರ ಸಂಘಟನೆ ನಡೆಸಿದ ದಾಳಿಯಲ್ಲಿ 21 ಸೈನಿಕರು ಬಲಿ; ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ!

SCROLL FOR NEXT