ಲವ್ ಜಿಹಾದ್ ಕೇಸ್ 
ರಾಜ್ಯ

ಚಿಕ್ಕಮಗಳೂರು 'Love Jihad' ಕೇಸ್: ಮತಾಂತರಕ್ಕೆ ಒತ್ತಾಯ; PU ಹಿಂದೂ ಬಾಲಕಿ ಜೊತೆ SSLC ವಿದ್ಯಾರ್ಥಿ ಲವ್; Pocso ದೂರು!

ಮೂಡಿಗೆರೆಯಲ್ಲಿ ಪಿಯುಸಿ ವಿದ್ಯಾರ್ಥಿ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನಡುವಿನ 'ಲವ್' ಪ್ರಕರಣವು ಸಾಕಷ್ಟು ಸಂಚಲನ ಮೂಡಿಸಿದ್ದು, ಈಗ ಅದು ಹೊಸ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಸಂತ್ರಸ್ತ ಎಂದು ನಂಬಲಾಗಿದ್ದ ಅಪ್ರಾಪ್ತ ಬಾಲಕ ಈಗ ಗಂಭೀರ ಆರೋಪ ಎದುರಿಸುತ್ತಿದ್ದಾನೆ.

ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಪಿಯುಸಿ ವಿದ್ಯಾರ್ಥಿ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನಡುವಿನ 'ಲವ್' ಪ್ರಕರಣವು ಸಾಕಷ್ಟು ಸಂಚಲನ ಮೂಡಿಸಿದ್ದು, ಈಗ ಅದು ಹೊಸ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಸಂತ್ರಸ್ತ ಎಂದು ನಂಬಲಾಗಿದ್ದ ಅಪ್ರಾಪ್ತ ಬಾಲಕ ಈಗ ಗಂಭೀರ ಆರೋಪ ಎದುರಿಸುತ್ತಿದ್ದಾನೆ. ಯುವತಿಯ ಕುಟುಂಬದ ದೂರಿನ ಆಧಾರದ ಮೇಲೆ, ಪೊಲೀಸರು ಅಪ್ರಾಪ್ತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕಮಗಳೂರಿನ ಮೂಡಿಗೆರೆಯ ಈ ಪ್ರಕರಣದಲ್ಲಿ ಹಲ್ಲೆಗೊಳಗಾದ ಅಪ್ರಾಪ್ತನ ವಿರುದ್ಧವೇ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಬಾಲಕಿಯು ನೀಡಿದ ಮಾಹಿತಿಯ ಆಧಾರದ ಮೇಲೆ ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಯುವತಿಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಅಪ್ರಾಪ್ತ ಬಾಲಕ ಒತ್ತಡ ಹೇರಿದ್ದಾನೆ ಎಂದು ಆರೋಪಿಸಲಾಗಿದೆ. ಮತಾಂತರಗೊಳ್ಳಲು ಮತ್ತು ತನ್ನನ್ನು ಮದುವೆಯಾಗಲು ನಿರಾಕರಿಸಿದರೆ ನಿನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ ಮಾಡುವುದಾಗಿ ಬೆದರಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ತಾನು ಹೇಳಿದಂತೆ ಕೇಳದಿದ್ದರೆ ಬಾಲಕಿಯ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಿಂದೂ ಕಾರ್ಯಕರ್ತರ ವಿರುದ್ಧ ದೂರು:

ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಹಿಂದೂ ಸಂಘಟನೆಯ ಆರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ಪೋಷಕರ ದೂರಿನ ಆಧಾರದ ಮೇಲೆ, ಪೊಲೀಸರು ಅಪ್ರಾಪ್ತ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆತನ ಕೃತ್ಯಗಳನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಆತನ ಪೋಷಕರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.

ಪೊಲೀಸರು ಹೇಳಿದ್ದೇನು?

ವಿಷಯದ ಸೂಕ್ಷ್ಮತೆಯನ್ನು ಗಮನಿಸಿದ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ದಯಾಮ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಮಗೆ ಎರಡೂ ಕಡೆಯಿಂದ ದೂರುಗಳು ಬಂದಿವೆ. ನಿಷ್ಪಕ್ಷಪಾತ ಮತ್ತು ಸಂಪೂರ್ಣ ತನಿಖೆ ನಡೆಯುತ್ತಿದೆ. ನಾವು ಶೀಘ್ರದಲ್ಲೇ ಸತ್ಯವನ್ನು ಹೊರಗೆ ತರುತ್ತೇವೆ ಎಂದು ಹೇಳಿದರು. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ತನಿಖೆ ವೇಗವಾಗಿ ನಡೆಯುತ್ತಿದ್ದು, ಈ ಹೊಸ ಬೆಳವಣಿಗೆ ಮಲೆನಾಡು ಪ್ರದೇಶದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

101 ಕ್ಷಿಪಣಿ ದಾಳಿ ಬೆನ್ನಲ್ಲೇ USS ಅಬ್ರಹಾಂ ಲಿಂಕನ್ ಪಲಾಯನ; ನಮ್ಮ ವ್ಯಾಪ್ತಿಯೊಳಗೆ ಬಂದರೆ, ನಾಶ ಮಾಡ್ತೀವೀ: ಇರಾನ್ ಎಚ್ಚರಿಕೆ!

ಅರ್ಜುನ್ ತೆಂಡೊಲ್ಕರ್ ಬಗ್ಗೆ ಹೇಳೋದಕ್ಕೆ ನೀನು ಯಾರು? ಆರ್. ಅಶ್ವಿನ್ ವಿರುದ್ಧ ಯುವರಾಜ್ ಸಿಂಗ್ ತಂದೆ ಆಕ್ರೋಶ, ಗಡ್ಡ ಕತ್ತರಿಸುವ ಸವಾಲು!

West Asia crisis ಕುರಿತು ಸರ್ವಪಕ್ಷ ಸಭೆ: 'ಪ್ರಧಾನಿ ಭಾಗವಹಿಸಬೇಕು'; ಪ್ರತಿಪಕ್ಷ, ಬಿಜೆಪಿ ನಡುವೆ ವಾಗ್ವಾದ

'ನನ್ನ ಸಹೋದರನಿಗೆ ಫೋನ್ ಮಾಡಿ, ಆದೇಶ ಪ್ರಶ್ನಿಸಲು ಎಷ್ಟು ಧೈರ್ಯ': ನ್ಯಾಯಾಂಗ ನಿಂದನೆ ವಾರ್ನಿಂಗ್ ನೀಡಿದ CJI; ಏನಿದು ಕೇಸ್?

IPL 2026: ವಿರಾಟ್ ಕೊಹ್ಲಿ ಬೌಲ್ ಮಾಡುತ್ತಾರಾ? ಪೂರ್ವ ತಯಾರಿಯ Video ವೈರಲ್!

SCROLL FOR NEXT