ಮಂಗಳೂರಿನ ನಾವಿಕರು 
ರಾಜ್ಯ

"ನಾವು ಈಗ ಸುರಕ್ಷಿತವಾಗಿದ್ದೇವೆ": ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಮಂಗಳೂರಿನ ನಾವಿಕ

ನಿರಂತರ ಅಪಾಯದ ನಡುವೆಯೇ, ತಾವು ಸುರಕ್ಷಿತವಾಗಿದ್ದು, ತಮಗೆ ಸುರಕ್ಷಿತ ಮಾರ್ಗ ಸಿಕ್ಕಿದೆ ಎಂದು ದಕ್ಷಿಣ ಕನ್ನಡದ ನಾವಿಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಮಂಗಳೂರು: ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುವ ನಿರ್ಣಾಯಕ ಕಡಲ ಚಾಕ್ ಪಾಯಿಂಟ್ ಹಾರ್ಮುಜ್ ಜಲಸಂಧಿಯಲ್ಲಿ ಮಂಗಳೂರಿನ ನಾವಿಕ ಸೇರಿದಂತೆ ಇತರ ಸಿಬ್ಬಂದಿ ಸಿಲುಕಿಕೊಂಡಿದ್ದಾರೆ.

ನಿರಂತರ ಅಪಾಯದ ನಡುವೆಯೇ, ತಾವು ಸುರಕ್ಷಿತವಾಗಿದ್ದು, ತಮಗೆ ಸುರಕ್ಷಿತ ಮಾರ್ಗ ಸಿಕ್ಕಿದೆ ಎಂದು ದಕ್ಷಿಣ ಕನ್ನಡದ ನಾವಿಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಅಮೆರಿಕ/ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಭೀಕರತೆ ಹೆಚ್ಚುತ್ತಿರುವ ಮಧ್ಯೆ ಭಾರತಕ್ಕೆ ಬರುತ್ತಿದ್ದ ಎಲ್‌ಪಿಜಿ ಹಡಗಿನಲ್ಲಿ ಕಳೆದ 20 ದಿನಗಳಿಂದ ಮಂಗಳೂರಿನ ಮೂಲದ ಒಬ್ಬ ನಾವಿಕ ಸೇರಿದಂತೆ ಇತರೆ ಸಿಬ್ಬಂದಿ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜತೆ ಮಾತನಾಡಿದ ಮಂಗಳೂರಿನ ನಾವಿಕ, ಭಾರತೀಯ ನೌಕಾಪಡೆಯ ಮೂಲಕ ಹೆಚ್ಚಿನ ಅಪಾಯದ ಪ್ರದೇಶದಿಂದ ಸುರಕ್ಷಿತ ಮಾರ್ಗ ಸಿಕ್ಕಿದೆ ಮತ್ತು ಭಾರತಕ್ಕೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ನಾವಿಕ, "ಇದೀಗ ಎಲ್ಲರೂ ಸುರಕ್ಷಿತವಾಗಿದ್ದು, ನಮ್ಮ ಹಡಗಿಗೆ ಭಾರತೀಯ ನೌಕಾಪಡೆಯು ಬೆಂಗಾವಲಾಗಿ ಕೆಲಸ ಮಾಡುತ್ತಿದೆ. ಇದು ನಮಗೆ ಜೀವನವನ್ನು ಬದಲಾಯಿಸುವ ಮತ್ತು ಹೆಮ್ಮೆಯ ಕ್ಷಣವಾಗಿದೆ. ಕೆಲವೇ ದಿನಗಳಲ್ಲಿ ನಾವು ನಮ್ಮ ತಾಯ್ನಾಡನ್ನಾಗಿ ಬರುವ ಭರವಸೆ ಇದೆ" ಎಂದು ಹೇಳಿದ್ದಾರೆ.

ಭಾರತಕ್ಕೆ ತೆರಳುವ 20 ಹಡಗುಗಳು ಇನ್ನೂ ಹಾರ್ಮುಜ್ ಜಲಸಂಧಿಯನ್ನು ದಾಟಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ನಾವಿಕನು, ಮಧ್ಯಪ್ರಾಚ್ಯ ಬಂದರುಗಳಲ್ಲಿ ಸರಕುಗಳನ್ನು ಲೋಡ್ ಮಾಡುವಾಗ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಅದರ ಭೀಕರ ಅನುಭವವನ್ನು ಹಂಚಿಕೊಂಡಿದ್ದರು. ಇಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳು ನಮ್ಮ ಹಡಗಿನ ಪಕ್ಕದಿಂದ ನಿಯಮಿತವಾಗಿ ಹಾರುತ್ತಿರುವುದನ್ನು ನೋಡುತ್ತೇವೆ. ನನ್ನ ಕಣ್ಣೆದುರೇ ಒಂದು ಹಡಗು ಕ್ಷಿಪಣಿಯಿಂದ ಹೊಡೆದಿರುವುದನ್ನು ಸಮೀಪದಿಂದ ಕಂಡಿದ್ದೇನೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia Conflict: ಮಧ್ಯಪ್ರಾಚ್ಯ ಉದ್ವಿಗ್ನತೆ ಕಡಿಮೆ ಮಾಡುವಲ್ಲಿ ಭಾರತವು 'ವಿಶ್ವಾಸಾರ್ಹ' ಪಾತ್ರ ವಹಿಸಬಹುದು; ಇರಾನ್ ರಾಯಭಾರಿ

"ಕೋವಿಡ್ ನಂತಹ ಪರಿಸ್ಥಿತಿ": ಪ್ರಧಾನಿ ಮೋದಿಯ ಹೇಳಿಕೆ ಜನರನ್ನು ಭಯಭೀತಗೊಳಿಸಿದೆ'

ರಾಹುಕಾಲ, ಗುಳಿಕಾಲ ನೋಡಲ್ಲ: ಯುಗಾದಿ - ಶಿವರಾತ್ರಿಯಂದೂ ಮಾಂಸ ತಿಂತೀನಿ; ಸಿಎಂ ಸಿದ್ದರಾಮಯ್ಯ- Video

ಅದಕ್ಕಾಗಿಯೇ ಪರಮಾಣು ಶಸ್ತ್ರಾಸ್ತ್ರ ಬೇಕು: ಇರಾನ್ ಯುದ್ಧದ ಬಗ್ಗೆ ಕಿಮ್ ಸ್ಫೋಟಕ ಹೇಳಿಕೆ

West Asia war: ‘ಸೋಲನ್ನು ಒಪ್ಪಂದವೆಂದು ತೋರಿಸದಿರಿ’; ಅಮೆರಿಕಾ ಕುರಿತು ಇರಾನ್ ವ್ಯಂಗ್ಯ, ಶಾಂತಿ ಪ್ರಸ್ತಾವ ತಿರಸ್ಕೃತ..?

SCROLL FOR NEXT