ಬೆಂಗಳೂರು: ಹೆಚ್ಚುತ್ತಿರುವ ಸಬ್ಸಿಡಿಯಿಂದಾಗಿ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿಗಳ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಕೆಲವೊಂದು ಯೋಜನೆಗಳಿಗೆ ಅನುದಾನವನ್ನು ಕಡಿತಗೊಳಿಸಿದೆ ಎಂದು CAG ಹೇಳಿದೆ.
2024-25ನೇ ಹಣಕಾಸು ವರ್ಷದ ರಾಜ್ಯ ಹಣಕಾಸು ಕುರಿತ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. ತರ್ಕಬದ್ಧಗೊಳಿಸದ ಸಬ್ಸಿಡಿ ಅಥವಾ ಹಣಕಾಸಿನ ನೆರವು ಅಥವಾ ಉತ್ತಮ ಗುರಿಯಿಲ್ಲದೆ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನವು ರಾಜ್ಯದ ಹಣಕಾಸಿನ ಮೇಲೆ ಹೊಡೆತ ಬಿದ್ದಿದೆ ಎಂದು ಹೇಳಿದೆ.
ಕಾಂಗ್ರೆಸ್ ಸರ್ಕಾರವು 2024-25ರಲ್ಲಿ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹ ಲಕ್ಷ್ಮಿ, ಯುವ ನಿಧಿ ಮತ್ತು ಅನ್ನಭಾಗ್ಯ ಯೋಜನೆಗಳಿಗೆ 52,525 ಕೋಟಿ ರೂ. ವೆಚ್ಚ ಮಾಡಿದೆ.
ಐದು ಗ್ಯಾರಂಟಿ ಯೋಜನೆಗಳ ಒಟ್ಟು ವೆಚ್ಚವು ರಾಜ್ಯದ ಆದಾಯದ ಶೇ. 20 ರಷ್ಟು ಮತ್ತು ಮತ್ತು ಸ್ವಂತ ಆದಾಯದ ಶೇ. 27 ರಷ್ಟಿದೆ. 2024-25ನೇ ಸಾಲಿನಲ್ಲಿ ರಾಜ್ಯದ ಆದಾಯವು ಹಿಂದಿನ ವರ್ಷಕ್ಕಿಂತ ಶೇ.10.63ರಷ್ಟು ಬೆಳವಣಿಗೆ ಕಂಡಿದ್ದರೆ, ಅದರ ವೆಚ್ಚವು ಶೇ.14.99ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆದಾಯ ಬೆಳವಣಿಗೆಯು ಸ್ಥಿರವಾಗಿದ್ದರೂ, ಮರು ಕಳಿಸುವ ಗ್ಯಾರಂಟಿ ಯೋಜನೆಗಳ ವೆಚ್ಚಕ್ಕೆ ಇದು ಸರಿಹೊಂದುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ನೀಡಲು ಸಾಲಗಳ ಮೇಲೆ ಅವಲಂಬಿತವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಸಬ್ಸಿಡಿಗಳ ಹೆಚ್ಚಳ ಪ್ರವೃತ್ತಿಯಿಂದಾಗಿ, ಪೌಷ್ಠಿಕ ಕಾರ್ಯಕ್ರಮ, ಸ್ಥಳೀಯ ಸಂಸ್ಥೆಗಳಿಗೆ ನೆರವು, ಗ್ರಾಮ ಪಂಚಾಯತ್ಗಳ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಸಿಗದಂತಾಗಿದೆ ಎಂದು CAG ವರದಿಯಲ್ಲಿ ಉಲ್ಲೇಖಿಸಿದೆ.